ಸಾಲುಗಟ್ಟಿ ನಿಂತಿರುವ ಕೋವಿಡ್ ಮೃತದೇಹಗಳು : ಅಂತ್ಯಸಂಸ್ಕಾರಕ್ಕೆ ಇನ್ಪ್ಲೂಯೆನ್ಸ್

ಬೆಂಗಳೂರು: ನಗರದ ಹರಿಶ್ಚಂದ್ರ ಘಾಟ್ ಮುಂದೆ ಸಾಕಷ್ಟು ಆಂಬ್ಯುಲೆನ್ಸ್​ಗಳು ಹೆಣ ಹೊತ್ತು ಕ್ಯೂ ನಿಂತಿದ್ದು, ಗೇಟಿಗೆ ಬೀಗ ಹಾಕಿರುವ ಬಿಬಿಎಂಪಿ ಸಿಬ್ಬಂದಿ ವಾಹನಗಳನ್ನು ಒಳಗೆ ಬಿಡದ ಆರೋಪ ಕೇಳಿಬಂದಿದೆ.

ಬಿಬಿಎಂಪಿ ಯಾಕೆ ಈ ರೀತಿ ನಡೆದುಕೊಳ್ಳುತ್ತಿದೆ ಎಂದು ಮೃತ ಸಂಬಂಧಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಆ ಸಂದರ್ಭದಲ್ಲಿ ಬೆಳಕಿಗೆ ಬಂದ ಅಂಶವೇನೆಂದರೆ ಶವಸಂಸ್ಕಾರ ಮಾಡಲು ಉಳ್ಳವರ ಪ್ರಭಾವ ಇದ್ದರೆ ಮಾತ್ರ ಗೇಟೆ ತೆಗೆಯಲಾಗುತ್ತದೆ ಎಂಬ ಅಂಶ ಹೊರಬಿದ್ದಿದೆ.

ಶವಸಂಸ್ಕಾರಕ್ಕೆ ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ಸ್ಥಳೀಯರು ಬಿಬಿಎಂಪಿ ಸಿಬ್ಬಂದಿ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ್ದಾರೆ. ಗೇಟ್​ ತೆರೆದು ಸಂಸ್ಕಾರಕ್ಕೆ ಅನುಮತಿ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ.

ಕಳೆದ ಒಂದು ವಾರದಿಂದ ಮೃತದೇಹಗಳು ಹೆಚ್ಚಿನ ಪ್ರಮಾಣದಲ್ಲಿ ಹರಿಶ್ಚಂದ್ರ ಘಾಟ್ ಬರುತ್ತಿದ್ದು, ನಿರ್ವಹಣೆಯಲ್ಲಿ ಸಿಬ್ಬಂದಿಗಳ ವಿಳಂಬ ಎದ್ದು ಕಾಣುತ್ತಿದೆ. ಹಾಗಾಗಿ ಈ ಅವಘಡಗಳು ಸಂಭವಿಸುತ್ತಿವೆ. ನಮಗೂ ಸರಿಯಾದ ಸೌಲಭ್ಯ ನೀಡಿಲ್ಲ ಆದರೂ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನಮ್ಮ ಕಷ್ಟ ಕೇಳುವವರು ಯಾರು ಎಂದು ಹೆಸರು ಹೇಳದ ಚಿತಾಗಾರದ ಸಿಬ್ಬಂದಿಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *