ಅಕ್ಷರದಾಸೋಹ ನೌಕರರ ವೇತನ ಹೆಚ್ಚಿಸಲು ಆಗ್ರಹಿಸಿ ನಂ 26ರ ಮುಷ್ಕರಕ್ಕೆ ಕರೆ

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಬಿಸಿಯೂಟ ನೌಕರರ ಸಮಾವೇಶ ನಡೆಸಿದ್ದು, ಅಕ್ಷರದಾಸೋಹ ನೌಕರರ ವೇತನ ಹೆಚ್ಚಳಗೊಳಿಸಲು ಆಗ್ರಹಿಸಿ, ಅಕ್ಷರದಾಸೋಹ ನೌಕರರನ್ನು ಖಾಯಂ ಗೊಳಿಸಿ, ಸರಕಾರಿ ನೌಕರರಾಗಿ ಪರಿಗಣಿಸಬೇಕು, ಕಾರ್ಮಿಕ ಕಾನೂನು ತಿದ್ದುಪಡಿ ವಿರುದ್ಧ ನವಂಬರ್ 26 ರಂದು ಅಕ್ಷರದಾಸೋಹ ನೌಕರರು ಮುಷ್ಕರ ಮಾಡಲಿದ್ದಾರೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.

ಸಿಐಟಿಯು  ಮುಖಂಡರಾದ ಕವಿರಾಜ್ ಮಾತನಾಡಿ ನವಂಬರ್ 09 ರಂದು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟಿಸಿ ಅಕ್ಷರದಾಸೋಹ ನೌಕರರು ಮುಷ್ಕರದ ನೋಟಿಸು ನೀಡಲಿದ್ದಾರೆ ಎಂದು ಹೇಳಿದರು.

ಕಾರ್ಮಿಕ ಮುಖಂಡರಾದ ನಾಗೇಶ ಆಚಾರ್ಯ ಮಾತನಾಡಿ ನೌಕರರ ಪ್ರಧಾನ ಕಾರ್ಯದರ್ಶಿ ಸುನಂದ ಮುಷ್ಕರ ಮಹತ್ವ ತಿಳಿಸಿ ಯಶಸ್ವಿಗೊಳಿಸುವಂತೆ ಕರೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಬೇಬಿ ಭಂಡಾರಿ ವಹಿಸಿದ್ದರು. ಸುನೀತಾ ಶೆಟ್ಟಿ ಉಪಸ್ಥಿತರಿದ್ದರು. ಸಂಧ್ಯಾ ಗೋಖಲೆ  ವಂದಿಸಿದರು.

Donate Janashakthi Media

Leave a Reply

Your email address will not be published. Required fields are marked *