65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

 

ಬೆಂಗಳೂರು: ಅಯೋಧ್ಯೆಯ ರಾಮಜನ್ಮಭೂಮಿ ವಿವಾದದಲ್ಲಿ ರಾಮನ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಕೆ.ಎನ್. ಭಟ್, ಜೀತಪದ್ಧತಿಯಲ್ಲಿ ಸಿಲುಕಿದವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಡಾ. ಪುಟ್ಟಸಿದ್ದಯ್ಯ ಸೇರಿದಂತೆ 60 ಜನರು ಹಾಗೂ 5 ಸಂಸ್ಥೆಗಳಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

ಸಾಹಿತ್ಯದಲ್ಲಿ ಪ್ರೊ.ಸಿ.ಪಿ. ಸಿದ್ಧಾಶ್ರಮ, ಸಂಗೀತದಲ್ಲಿ ಅಂಬಯ್ಯ ನುಲಿ, ಅನಂತ ತೇರದಾಳ, ಗುರುರಾಜ ಹೊಸಕೋಟೆ (ಜನಪದ), ವಿಜ್ಞಾನಿ ಪ್ರೊ. ಉಡುಪಿ ಶ್ರೀನಿವಾಸ, ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಉಷಾರಾಣಿ, ಕೊಪ್ಪಳದ ಕೇಶಪ್ಪ ಶಿಳ್ಳೆಕ್ಯಾತರ (ತೊಗಲು ಗೊಂಬೆಯಾಟ), ಪತ್ರಿಕಾ ಕ್ಷೇತ್ರದಲ್ಲಿ ಟಿ.ವೆಂಕಟೇಶ್‌, ಸಿ.ಮಹೇಶ್ವರನ್‌ ಒಳಗೊಂಡಂತೆ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಲಾಗಿದೆ. ಸಂಘ–ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಗೆ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್, ಬಳ್ಳಾರಿ ದೇವದಾಸಿ ಸ್ವಾವಲಂಬನ ಕೇಂದ್ರ ಭಾಜನವಾಗಿದೆ. ಉಪ ಚುನಾವಣೆ ಕಾರಣ ನ. 7ರಂದು ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಲಾಗಿದೆ. ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ, ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದೆ.

ರಾಜ್ಯೋತ್ಸವ ಪುರಸ್ಕೃತರು

ಸಾಹಿತ್ಯ: ಪ್ರೊ.ಸಿ.ಪಿ.ಸಿದ್ಧಾಶ್ರಮ (ಧಾರವಾಡ), ವಿ.ಮುನಿವೆಂಕಟಪ್ಪ (ಕೋಲಾರ), ರಾಮಣ್ಣ ಬ್ಯಾಟಿ (ಗದಗ), ವಲೇರಿಯನ್ ಡಿಸೋಜ (ವಲ್ಲಿವಗ್ಗ), ಡಿ.ಎನ್.ಅಕ್ಕಿ (ಯಾದಗಿರಿ).

ಸಂಗೀತ:  ಅಂಬಯ್ಯ ನುಲಿ (ರಾಯಚೂರು), ಅನಂತ ತೇರದಾಳ (ಬೆಳಗಾವಿ), ಬಿ.ವಿ.ಶ್ರೀನಿವಾಸ್ ಮತ್ತು ಗಿರಿಜಾ ನಾರಾಯಣ (ಬೆಂಗಳೂರು ನಗರ), ಕೆ.ಲಿಂಗಪ್ಪ ಶೇರಿಗಾರ (ದಕ್ಷಿಣ ಕನ್ನಡ)

ನ್ಯಾಯಾಂಗ: ಕೆ.ಎನ್.ಭಟ್ (ಬೆಂಗಳೂರು), ಎಂ.ಕೆ.ವಿಜಯಕುಮಾರ (ಉಡುಪಿ)

ಮಾಧ್ಯಮ: ಸಿ.ಮಹೇಶ್ವರನ್ (ಮೈಸೂರು), ಟಿ.ವೆಂಕಟೇಶ್ (ಬೆಂಗಳೂರು ನಗರ)

ಯೋಗ: ಡಾ.ಎ.ಎಸ್.ಚಂದ್ರಶೇಖರ (ಮೈಸೂರು)

ಶಿಕ್ಷಣ:  ಎಂ.ಎನ್.ಷಡಕ್ಷರಿ (ಚಿಕ್ಕಮಗಳೂರು), ಡಾ.ಆರ್.ರಾಮಕೃಷ್ಣ (ಚಾಮರಾಜನಗರ), ಡಾ.ಎಂ.ಜಿ.ಈಶ್ವರಪ್ಪ (ದಾವಣಗೆರೆ), ಡಾ.ಪುಟ್ಟಸಿದ್ದಯ್ಯ (ಮೈಸೂರು), ಅಶೋಕ್ ಶೆಟ್ಟರ್ (ಬೆಳಗಾವಿ), ಡಿ.ಎಸ್.ದಂಡಿನ್ (ಗದಗ)

ಸಂಕೀರ್ಣ: ಡಾಕೆ.ವಿ.ರಾಜು (ಕೋಲಾರ), ನಂ.ವೆಂಕೋಬರಾವ್ (ಹಾಸನ), ಡಾ.ಕೆ.ಎಸ್.ರಾಜಣ್ಣ (ಮಂಡ್ಯ), ವಿ.ಲಕ್ಷ್ಮಿನಾರಾಯಣ (ಮಂಡ್ಯ).

ಸಂಘ-ಸಂಸ್ಥೆ: ಯೂತ್‌ ಫಾರ್ ಸೇವಾ, ಬೆಟರ್‌ ಇಂಡಿಯಾ (ಬೆಂಗಳೂರು ನಗರ), ದೇವದಾಸಿ ಸ್ವಾವಲಂಬನ ಕೇಂದ್ರ (ಬಳ್ಳಾರಿ), ಯುವ ಬ್ರಿಗೇಟ್ (ಬೆಂಗಳೂರು ಗ್ರಾಮಾಂತರ), ಧರ್ಮೋತ್ಥಾನ ಟ್ರಸ್ಟ್ (ಧರ್ಮಸ್ಥಳ)

ಸಮಾಜಸೇವೆ:  ಎನ್.ಎಸ್.ಕುಂದರಗಿ ಹೆಗಡೆ (ಉತ್ತರ ಕನ್ನಡ, ಪ್ರೇಮಾ ಕೋದಂಡರಾಮ ಶ್ರೇಷ್ಠಿ, ಮೋಹಿನಿ ಸಿದ್ದೇಗೌಡ (ಚಿಕ್ಕಮಗಳೂರು), ಮಣೆಗಾರ ಮಿರಾನ್ ಸಾಹೇಬ್ (ಉಡುಪಿ).

ವೈದ್ಯಕೀಯ:  ಡಾ.ಅಶೋಕ್ ಸೊನ್ನದ್ (ಬಾಗಲಕೋಟೆ), ಡಾ.ಬಿ.ಎಸ್.ಶ್ರೀನಾಥ (ಶಿವಮೊಗ್ಗ), ಡಾ.ಎ.ನಾಗರತ್ನ (ಬಳ್ಳಾರಿ), ಡಾ.ವೆಂಕಟಪ್ಪ (ರಾಮನಗರ)

 ಕೃಷಿ: ಸುರತ್ ಸಿಂಗ್ ಕನೂರ್ ಸಿಂಗ್ ರಜಪೂತ್ (ಬೀದರ್), ಎಸ್.ವಿ.ಸುಮಂಗಲಮ್ಮ ವೀರಭದ್ರಪ್ಪ (ಚಿತ್ರದುರ್ಗ), ಡಾ.ಸಿದ್ರಾಮಪ್ಪ ಬಸವಂತರಾವ್ ಪಾಟೀಲ್ (ಕಲಬುರ್ಗಿ).

ರಂಗಭೂಮಿ: ಅನಸೂಯಮ್ಮ (ಹಾಸನ), ಎಚ್.ಷಡಕ್ಷರಪ್ಪ (ದಾವಣಗೆರೆ), ತಿಪ್ಪೇಸ್ವಾಮಿ (ಚಿತ್ರದುರ್ಗ).

ಚಲನಚಿತ್ರ: ಬಿ.ಎಸ್.ಬಸವರಾಜ್ (ತುಮಕೂರು), ಆಪಾಢಾಂಡ ತಿಮ್ಮಯ್ಯ ರಘು (ಕೊಡಗು).

ಚಿತ್ರಕಲೆ:  ಎಂ.ಜೆ.ವಾಚೇದ್‌ಮಠ (ಧಾರವಾಡ)

ಜಾನಪದ: ಗುರುರಾಜ ಹೊಸಕೋಟೆ (ಬಾಗಲಕೋಟೆ), ಡಾ.ಹಂಪನಹಳ್ಳಿ ತಿಮ್ಮೇಗೌಡ (ಹಾಸನ).

ಶಿಲ್ಟಕಲೆ:  ಎನ್.ಎಸ್.ಜನಾರ್ದನಮೂರ್ತಿ (ಮೈಸೂರು)

ನೃತ್ಯ: ವಿದುಷಿ ಜ್ಯೋತಿ ಪಟ್ಟಾಭಿರಾಮ್

ಜಾನಪದ/ತೊಗಲು ಗೊಂಬೆಯಾಟ:  ಕೇಶಪ್ಪ ಶಿಳ್ಳೇಕ್ಯಾತರ (ಕೊಪ್ಪಳ)

Donate Janashakthi Media

Leave a Reply

Your email address will not be published. Required fields are marked *