“ಭೂಮಿತಾಯಿಯ ಚೊಚ್ಚಲು ಮಗ”

ಭೂಮಿ ತಾಯಿಯಾ
ಚೊಚ್ಚಲ ಮಗನನು
ಕಣ್ತೆರದೊಮ್ಮೆ
ನೋಡಿಹರೇನು ?
ಮುಗಿಲೆoಬುವದು
ಕಿಸಿದಿತು ಹಲ್ಲು !
ಬಂದಾ ಬೆಳೆಯು
ಮಿಡಿಚಿಯ ಮೇವು ;
ಬತ್ತಿದ್ದಾಯಿತು
ಉತ್ತಿಹ ಮಣ್ಣು !
ದಿನವೂ ಸಂಜೆಗೆ
ಬೆವರಿನ ಜಳಕ,
ಉಸಿರಿನ ಕೂಳಿಗೆ
ಕಂಬನಿ ನೀರು !
ಹೊಟ್ಟೆಯು ಹತ್ತಿತು
ಬೆನ್ನಿನ ಬೆನ್ನು !
ಎದೆಯ ಗೂಡಿನೊಳು
ಚಿಂತೆಯ ಗೂಗಿ !
ಮಿದುಳಿನ ಮೂಲೆಗೆ
ಲೋಟ ಲೋಟ ಹಲ್ಲಿ
ಮೋರೆಯು ಸಾವನು
ಅಣಕಿಸುತಿಹುದು
ಕೊರಳಿಗೆ ಹತ್ತಿದೆ
ಸಾಲದ ಶೂಲ !
ಆದರು ಬರದೋ
ಯಮನಿಗೆ ಕರುಣ
ಉಸಿರಿಗೆ ಒಮ್ಮೆ
ಜನನಾ ಮರಣ
ನರಗಳ ನೂಲಿನ
ಪರೆಪರೆ ಚೀಲಾ
ತೆರೆ ತೆರೆಯಾಗಿದೆ
ಜಿರಿಜಿರಿಯಾಗಿದೆ ;
ಅದರೊಳಗೊಂದು
ಎಲುವಿನ ಬಲೆಯು
ಟುಕು ಟುಕು ಡುಗು ಡುಗು
ಉಲಿಯುವ ನರಳುವ
ಜೀವದ ಜಂತು
ಹೊರಳುತ ಉರುಳುತ :
ಜನುಮವೆಂಬುವಾ
ಕತ್ತಲೆಯಲ್ಲಿ
ಬಿದ್ದಿದೆ ಒಳಗೆ
ಹೇಗೋ ಬಂದು !
ಸಾವಿನ ಬೆಳಕದು
ಕಾಣುವದೆಂದು ?
ಎಂದೊ ಎಂದೋ
ಎಂದೊ ಎಂದು
ಕನಕರಿಸುವದು
ತಳಮಳಿಸುವದು !

#ದ_ರಾ_ಬೇಂದ್ರೆ

ವಾರದ ಕವಿತೆ ಅಂಬಿಕಾತನಯದತ್ತ ಅವರ “ಭೂಮಿತಾಯಿಯ ಚೊಚ್ಚಲು ಮಗ”

ವಾಚನ: ಲವಿತ್ರಾ ವಿಶ್ಲೇಷಣೆ: ಕೆ. ನೀಲಾ

 

 

 

 

Donate Janashakthi Media

Leave a Reply

Your email address will not be published. Required fields are marked *