ಫ್ಲ್ಯಾಟ್ ಮಾಲೀಕರಿಗೆ ಗುಡ್ ನ್ಯೂಸ್: ಬಿಲ್ಡರ್‌ಗಳ ಪರಿಷ್ಕೃತ ಪ್ಲಾನ್‌ಗಳಿಗೆ BDA ಕಡಿವಾಣ

ಬೆಂಗಳೂರು: ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಸಕಾರಾತ್ಮಕ ಬೆಳವಣಿಗೆಯಾಗಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಆಕ್ಯುಪೆನ್ಸಿ ಸರ್ಟಿಫಿಕೆಟ್ (OC) ನೀಡಿದ ಬಳಿಕ ಕಟ್ಟಡ ಯೋಜನೆಗಳಲ್ಲಿ ಬದಲಾವಣೆ ಮಾಡಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಮಾಲೀಕ

ಜುಲೈ 15ರಂದು ಹೊರಡಿಸಿದ ಸರ್ಕ್ಯುಲರ್ ಪ್ರಕಾರ, ಮೂರನೇ ವ್ಯಕ್ತಿಗಳ ಹಕ್ಕುಗಳು ಸೃಷ್ಟಿಯಾಗಿರುವ ಸಂದರ್ಭಗಳಲ್ಲಿ ಯಾವುದೇ ಬದಲಾವಣೆಗೆ ಕನಿಷ್ಠ ಎರಡು ಮೂರಂಚು ಫ್ಲ್ಯಾಟ್ ಮಾಲಿಕರ ಒಪ್ಪಿಗೆ ಕಡ್ಡಾಯವಾಗಿದೆ. ಜೊತೆಗೆ, ಅನುಮತಿಸಲಾದ ಫ್ಲೋರ್ ಏರಿಯಾ ರೇಷಿಯೋ (FAR) ಸಂಪೂರ್ಣವಾಗಿ ಬಳಸಿದ ಯೋಜನೆಗಳಲ್ಲಿ ಪರಿಷ್ಕೃತ ಅನುಮೋದನೆ ನೀಡುವುದನ್ನು ನಿಷೇಧಿಸಲಾಗಿದೆ.

ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಇದುವರೆಗೆ ಬಿಲ್ಡರ್‌ಗಳಿಗೆ ಪರಿಷ್ಕೃತ ಮಾಸ್ಟರ್ ಪ್ಲಾನ್‌ಗಳನ್ನು BDA ನೀಡುತ್ತಿದ್ದರೂ, ಈ ಹೊಸ ಸರ್ಕ್ಯುಲರ್ ಮೂಲಕ ಅಂತಹ ಅನುಮತಿಗಳಿಗೆ ತಡೆ ಹಾಕಲಾಗಿದೆ.

ಇದನ್ನೂ ಓದಿ: ಬೆಂಗಳೂರು ಕಸದ ಸಮಸ್ಯೆಗೆ ಬಿಗ್‌ ಪ್ಲ್ಯಾನ್‌: 22 ಸಾವಿರ ಟನ್‌ ತ್ಯಾಜ್ಯ ತೆರವಿಗೆ 5 ಸ್ಥಳಗಳ ಗುರುತು

ಈ ಕ್ರಮವು ದಕ್ಷಿಣ ಬೆಂಗಳೂರಿನ ಎಚ್‌ಎಂ ಟ್ಯಾಂಬೂರಿನ್ ಅಪಾರ್ಟ್‌ಮೆಂಟ್ ನಿವಾಸಿಗಳು ಹೂಡಿದ ಕಾನೂನು ಹೋರಾಟದ ಹಿನ್ನೆಲೆಯಲ್ಲಿದೆ. 241 ಯುನಿಟ್‌ಗಳ ಈ ಸಂಕೀರ್ಣವು 2003ರಲ್ಲಿ ನಿರ್ಮಾಣಗೊಂಡು 2006ರಲ್ಲಿ OC ಪಡೆದಿತ್ತು.

ನಿವಾಸಿಗಳ ಪ್ರಕಾರ, ಎಲ್ಲಾ ಫ್ಲ್ಯಾಟ್ ಖರೀದಿದಾರರು 3 ಎಕರೆ 18 ಗುಂಟಾ ಜಾಗದಲ್ಲಿ ಅವಿಭಾಜ್ಯ ಹಕ್ಕು ಪಡೆದಿದ್ದು, ನಂತರ ಬಿಲ್ಡರ್ 2016ರಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ BDAಯಿಂದ ಪರಿಷ್ಕೃತ ಅನುಮತಿ ಪಡೆದಿದ್ದಾನೆ.

ಈ ಅನುಮತಿ ಪಡೆಯುವ ವೇಳೆ, ಕರ್ನಾಟಕ ಮಾಲೀಕತ್ವದ ಫ್ಲ್ಯಾಟ್‌ಗಳ ಕಾಯ್ದೆ, 1972 ಮತ್ತು ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ, 2016 ಅನ್ವಯ ಅಗತ್ಯವಿರುವ ಮಾಲೀಕರ ಒಪ್ಪಿಗೆ ಪಡೆಯಲಾಗಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಇದಲ್ಲದೆ, ಅಭಿವೃದ್ಧಿ ಹಕ್ಕುಗಳು ಮತ್ತು FAR ಅನ್ನು ಬಿಲ್ಡರ್ ದುರುಪಯೋಗ ಮಾಡಿಕೊಂಡಿದ್ದಾನೆ ಎಂದು ಅವರು ವಾದಿಸಿದ್ದಾರೆ. ಈ ವಿಚಾರ ಈಗ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ.

ನಿವಾಸಿ ಕಲ್ಯಾಣ ಸಂಘಗಳು ಮತ್ತು ಅಪಾರ್ಟ್‌ಮೆಂಟ್ ಮಾಲೀಕರ ಸಂಘಗಳು ಈ ಸರ್ಕ್ಯುಲರ್‌ನ್ನು ಸ್ವಾಗತಿಸಿದ್ದು, ಇದು ಫ್ಲ್ಯಾಟ್ ಮಾಲೀಕರ ಹಕ್ಕುಗಳನ್ನು ಮತ್ತಷ್ಟು ಬಲಪಡಿಸುವುದಾಗಿ ಅಭಿಪ್ರಾಯಪಟ್ಟಿವೆ.

ಎಚ್‌ಎಂ ಟ್ಯಾಂಬೂರಿನ್ ನಿವಾಸಿ ಮತ್ತು ಚೇಂಜ್-ಮೇಕರ್ಸ್ ಆಫ್ ಕನಕಪುರ ಸದಸ್ಯ ಅಬ್ದುಲ್ ಅಲೀಮ್ ಅವರು, “ಹಳೆಯ ಕಾನೂನುಗಳಲ್ಲಿನ ಲೋಪಗಳನ್ನು ಬಳಸಿಕೊಂಡು ಬಿಲ್ಡರ್‌ಗಳು ವರ್ಷಗಳಿಂದ ಮನೆ ಖರೀದಿದಾರರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ಈಗಿನ ಕಾನೂನು ವ್ಯವಸ್ಥೆ ಭೂಹಕ್ಕು ವರ್ಗಾವಣೆಗೆ ಸ್ಪಷ್ಟ ಮಾರ್ಗ ನೀಡುವುದಿಲ್ಲ. ಇದರಿಂದ ಕೆಲ ಡೆವಲಪರ್‌ಗಳು ಮಾಲೀಕರಿಗೆ ಸೇರಿದ ಭೂಮಿಯನ್ನು ಗಿರವಿಟ್ಟುಕೊಳ್ಳುವುದು, ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡುವುದು ಮತ್ತು ಅಭಿವೃದ್ಧಿ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳುವುದು ಮುಂದುವರಿದಿದೆ,” ಎಂದು ಹೇಳಿದ್ದಾರೆ.

ಇದನ್ನೂ ನೋಡಿ: ನೀಟ್‌ ಹಗರಣ: ದೆಹಲಿ ಹೋರಾಟಕ್ಕೆ ಮತ್ತಷ್ಟು ಬಲ! ಎನ್‌ಡಿಎ ಮಿತ್ರಪಕ್ಷಗಳ ಮೌನ ಏಕೆ? Janashakthi Media

Donate Janashakthi Media

Leave a Reply

Your email address will not be published. Required fields are marked *