ವಕೀಲ ಫಿರೋಜ್ ಪಠಾಣ್ ನದಿಗೆ ಹಾರಿ ಆತ್ಮಹತ್ಯೆ; ಮೃತದೇಹ ಪತ್ತೆ

ಸೂರತ್: ಸೆಪ್ಟೆಂಬರ್ 5ರಂದು ನಗರದ ಪ್ರಮುಖ ವಕೀಲ ಮತ್ತು ಮಾಜಿ ಕಾಂಗ್ರೆಸ್ ಕಾನೂನು ಸಂಚಾಲಕ ವಕೀಲ ಫಿರೋಜ್ ಪಠಾಣ್ ಕೇಬಲ್ ಸೇತುವೆಯಿಂದ ತಾಪಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಹುಡುಕಾಟದ ನಂತರ, ಸೆಪ್ಟೆಂಬರ್‌ 6 ಬೆಳಿಗ್ಗೆ ಉಭರತ್ ದಡದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಉದ್ನಾ ದರ್ವಾಜಾ ಪ್ರದೇಶದ ನಿವಾಸಿ ಫಿರೋಜ್ ಪಠಾಣ್ ಕೆಲವು ಸಮಯದಿಂದ ಕುಟುಂಬ ಮತ್ತು ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದರು. ಆರ್ಥಿಕ ತೊಂದರೆಗಳು ಮತ್ತು ಆಸ್ತಿಯ ಮೇಲೆ ಪಡೆದ ಸಾಲವನ್ನು ಮರುಪಾವತಿಸಲು ಅಸಮರ್ಥತೆಯಿಂದಾಗಿ ಅವರು ಖಿನ್ನತೆಗೆ ಒಳಗಾಗಿದ್ದರು. ಅವರು ಕಳೆದ ವರ್ಷವೂ ಆತ್ಮಹತ್ಯೆಗೆ ಯತ್ನಿಸಿದ್ದರು.

ಇದನ್ನೂ ಓದಿ: ಬಂಜಾರ, ಭೋವಿ ಸಮುದಾಯಗಳಿಗೆ ಅನ್ಯಾಯ: ಸೆಪ್ಟೆಂಬರ್‌ 8ರಂದು ಪ್ರತಿಭಟನೆ

ಫಿರೋಜ್ ಪಠಾಣ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತಮ್ಮ ಕಿರಿಯ ವಕೀಲ ದೀಪಕ್ ಅವರಿಗೆ ಕರೆ ಮಾಡಿ, ‘ನನಗೆ ಏನಾದರೂ ಸಂಭವಿಸಿದರೆ, ನ್ಯಾಯಾಲಯದ ಪಕ್ಕದ ಸೇತುವೆಯ ಮೇಲೆ ನನ್ನನ್ನು ಹುಡುಕಿ ಬನ್ನಿ’ ಎಂದು ಹೇಳಿದ್ದರು. ಇದನ್ನು ಕೇಳಿದ ದೀಪಕ್ ತಕ್ಷಣ ಫಿರೋಜ್ ಅವರ ಕಚೇರಿ ಆಗಮಿಸಿದ್ದರು. ಆದರೆ ಅವರು ಅಲ್ಲಿ ಇರಲಿಲ್ಲ.

ದೀಪಕ್ ತಕ್ಷಣ ಫಿರೋಜ್ ಅವರ ಮಗನಿಗೆ ಮಾಹಿತಿ ನೀಡಿದ್ದು ಇಬ್ಬರೂ ಕೇಬಲ್ ಸೇತುವೆಯನ್ನು ತಲುಪಿದರು. ಅಲ್ಲಿ ಜನಸಮೂಹ ಸೇರಿತ್ತು. ಸೇತುವೆಯ ಕೆಳಗಿರುವ ಪಾರ್ಕಿಂಗ್ ಸ್ಥಳದಲ್ಲಿ ಫಿರೋಜ್ ಅವರ ಕಾರು ಪತ್ತೆಯಾಗಿತ್ತು. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡವು ತಕ್ಷಣ ಸ್ಥಳಕ್ಕೆ ತಲುಪಿ, ತಾಪಿ ನದಿಯ ರಭಸದಿಂದ ಹರಿಯುವ ಪ್ರವಾಹದಲ್ಲಿ ಹುಡುಕಾಟ ಆರಂಭಿಸಿತು. ತೀವ್ರ ಹುಡುಕಾಟದ ನಂತರ, ಇಂದು ಮುಂಜಾನೆ ಉಭಾರತ್ ನದಿಯ ದಡದಲ್ಲಿ ಅವರ ಶವ ಪತ್ತೆಯಾಗಿದೆ.

ಈ ಘಟನೆಯು ನಗರದ ಕಾನೂನು ವಲಯ ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ದುಃಖದ ಭಾವನೆಯನ್ನು ಮೂಡಿಸಿದೆ. ಫಿರೋಜ್ ಪಠಾಣ್ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ವಕೀಲರಾಗಿಯೂ ಕೆಲಸ ಮಾಡಿದ್ದರು. ಪೊಲೀಸರು ಪ್ರಸ್ತುತ ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದು ಸೇತುವೆಯಿಂದ ಕಂಡುಬಂದ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸುತ್ತಿದ್ದಾರೆ.

ಇದನ್ನೂ ನೋಡಿ: ಸರ್‌ (SIR) ಅಂದ್ರೆ ಮತದಾರರನ್ನು ಹೊರದಬ್ಬುವುದೆ? ವಿಶ್ಲೇಷಣೆ – ಗುರುರಾಜ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *