ವಿಮ್ಸ್‌ ದುರ್ಘಟನೆ: ಸೂಕ್ತ ತನಿಖೆಗೆ ಒಳಪಡಿಸಲು ಸಿಪಿಐ(ಎಂ) ಆಗ್ರಹ

ವಿಜಯನಗರ: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ(ವಿಮ್ಸ್‌)ಯಲ್ಲಿ ವಿದ್ಯುತ್ ಕೊರತೆಯಿಂದಾಗಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ರೋಗಿಗಳು ಸಾವುನಪ್ಪಿರುವ ಘಟನೆಯನ್ನು ಆಳವಾದ ತನಿಖೆಗೆ ಒಳಪಡಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಬಳ್ಳಾರಿ ತಾಲೂಕು ಸಮಿತಿ ಆಗ್ರಹಿಸಿದೆ.

ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಸಿಪಿಐ(ಎಂ) ತಾಲೂಕ ಕಾರ್ಯದರ್ಶಿ ಜೆ ಚಂದ್ರ ಕುಮಾರಿ, ಬಳ್ಳಾರಿ ನಗರದಲ್ಲಿರುವ ವಿಮ್ಸ್‌ಗೆ ಜಿಲ್ಲೆಯ ನಗರ ಪ್ರದೇಶ ಮಾತ್ರವಲ್ಲದೇ, ಸುತ್ತಲಿನ ತಾಲೂಕುಗಳಿಂದಲೂ ಮತ್ತು ಅಕ್ಕಪಕ್ಕದ ಮೂರು ನಾಲ್ಕು ಜಿಲ್ಲೆಗಳಿಂದಲೂ ನೂರಾರು ಬಡ ಕುಟುಂಬದ ರೋಗಿಗಳು ವ್ಯೆದ್ಯಕೀಯ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಕಳೆದ ಎರಡು ದಿನದ ಹಿಂದೆ, 5 ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಸರಬರಾಜು ಕೊರತೆಯಿಂದ, ಜನರೇಟರ್ ಕಾರ್ಯನಿರ್ವಹಿಸದ ಕಾರಣ ತುರ್ತು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂರು ರೋಗಿಗಳು ಆಮ್ಲಜನಕ ಕೊರತೆಯಿಂದಾಗಿ ಮರಣ ಹೊಂದಿದ್ದಾರೆ.

ಆದರೆ ವಿಮ್ಸ್‌ನ ನಿರ್ದೇಶಕರು ಅವರು ಕಾಯಿಲೆಗಳಿಂದ ಮರಣ ಹೊಂದಿದ್ದಾರೆ ಎಂದು ದುರ್ಘಟನೆಯನ್ನು ಮುಚ್ಚಿ ಹಾಕಲು ಪ್ರಯತ್ನ ಪಡುತ್ತಿದ್ದಾರೆ. ವಿಮ್ಸ್‌ನ ಕಟ್ಟಡ ಹಳೆಯದಾಗಿದ್ದು ದುರಸ್ಥಿ ಮಾಡಲು ಮುಂದಾಗುಬೇಕು ಮತ್ತು ವಿದ್ಯುತ್ ಜನರೇಟರ್‌ಗಳು ಹಳೆಯವಾಗಿರುವುದರಿಂದ ಸರಿಯಾಗಿ ಕೆಲಸ ಮಾಡದೇ ಇದ್ದ ಕಾರಣ ಈ ದುರಂತ ನಡೆದಿದೆ. ಅಧಿಕಾರಿಗಳ ಬೇಜಾಬ್ದಾರಿಯಿಂದ ಸೂಕ್ತವಾಗಿ ಕಾರ್ಯನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇದಕ್ಕೆ ಕಾರಣರಾದ ಎಲ್ಲರ ಮೇಲೆ ಕೂಡಲೇ ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ಸಿಪಿಐ(ಎಂ) ಪಕ್ಷವು ಆಗ್ರಹಿಸಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಕೂಡಲೇ ಕ್ರಮವಹಿಸಬೇಕೆಂದು ಒತ್ತಾಯ ಮಾಡಿದೆ.

ಈ ಘಟನೆ ಬಗ್ಗೆ ಬಿಗಿಯಾದ ಸೂಕ್ತ ತನಿಖೆ ನಡಸಿ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸಿದ್ದು, ಆಸ್ಪತ್ರೆಯ ಕಟ್ಟಡವನ್ನು ದುರಸ್ಥಿ ಮಾಡುವುದು ಮತ್ತು ಹೊಸ ವಿದ್ಯುತ್ ಜನರೇಟರ್‌ಗಳನ್ನು ಕೂಡಲೇ ಖರೀದಿ ಮಾಡಲು ಕ್ರಮವಹಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದೆ.

ಈ ಕೂಡಲೇ ಹೊರ – ಒಳ ರೋಗಿಗಳಿಗೆ ಸುರಕ್ಷತೆ ಸೂಕ್ತ ಕ್ರಮವಹಿಸಬೇಕೆಂದು ಸಿಪಿಐ(ಎಂ) ಮನವಿ ಮಾಡಿದೆ. ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಪಾತ್ರ ಬಹಳ ಮುಖ್ಯವಿದೆ. ಸರ್ಕಾರ ಸೂಕ್ತವಾದ ಕ್ರಮ ತೆಗೆದುಕೊಳ್ಳದಿದ್ದರೆ ಸಿಪಿಐ(ಎಂ) ಪಕ್ಷ ಹೋರಾಟ ನಡೆಸುವುದಾಗಿ ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *