ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ಶಾಲೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಕುರಿತು ಸುತ್ತೋಲೆ ಹೊರಡಿಸಿದೆ. ಶಾಲಾ ಮಕ್ಕಳ ಆರೋಗ್ಯವನ್ನು ರಕ್ಷಿಸಲು ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆಯ ಮೂಲಕ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯು ಸಂಯುಕ್ತವಾಗಿ ಈ ಮಾರ್ಗಸೂಚಿಗಳನ್ನು ತಯಾರಿಸಿದ್ದು, ಎಲ್ಲಾ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳು ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ.
ಪ್ರಮುಖ ಮಾರ್ಗಸೂಚಿಗಳು:
- ಜ್ವರ, ಕೆಮ್ಮು, ಶೀತ, ಗಂಟಲು ನೋವಿನಂತಹ ಯಾವುದೇ ಲಕ್ಷಣಗಳಿರುವ ಮಕ್ಕಳು ಹಾಗೂ ಸಿಬ್ಬಂದಿ ಶಾಲೆಗೆ ಹಾಜರಾಗಬಾರದು.
- ಸೋಂಕಿನ ಲಕ್ಷಣಗಳು ಕಂಡುಬಂದ ವಿದ್ಯಾರ್ಥಿಗಳನ್ನು ತಕ್ಷಣವೇ ಪೋಷಕರಿಗೆ ಮಾಹಿತಿ ನೀಡಿಸಿ ಮನೆಗೆ ಕಳುಹಿಸಬೇಕು.
- ಶಾಲೆಗಳಲ್ಲಿ ತಾಪಮಾನ ತಪಾಸಣಾ ವ್ಯವಸ್ಥೆ ಇರಬೇಕು ಮತ್ತು ಮಕ್ಕಳಿಗೆ ದಿನಕ್ಕೆ ಕಮ್ಮನೆಂದರೆ ಎರಡು ಬಾರಿ ತಾಪಮಾನ ಪರೀಕ್ಷೆ ನಡೆಸಬೇಕು.
- ಮಾಸ್ಕ್ ಧರಿಸುವಿಕೆ ಹಾಜರಾತಿ ನಿಯಮಗಳಲ್ಲಿ ಸೇರಿಸಬೇಕು, ವಿಶೇಷವಾಗಿ ಹೆಚ್ಚು ಮಕ್ಕಳಿರುವ ಶ್ರೇಣಿಗಳಲ್ಲಿ.
- ಕೈ ತೊಳೆಯುವ ವ್ಯವಸ್ಥೆ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಎಲ್ಲೆಡೆ ಲಭ್ಯವಾಗುವಂತಿರಬೇಕು.
- ಜಮಾವಣೆಗಳು, ಸಮಾರಂಭಗಳು ಹಾಗೂ ಸ್ನೇಹಮೇಳಗಳು ತಾತ್ಕಾಲಿಕವಾಗಿ ರದ್ದುಪಡಿಸಲು ಅಥವಾ ನಿಯಂತ್ರಿತವಾಗಿ ನಡೆಸುವಂತೆ ಸೂಚಿಸಲಾಗಿದೆ.
- ಶಾಲಾ ವಾಹನಗಳಲ್ಲಿ ಮಕ್ಕಳ ನಡುವೆ ಅಂತರ ಕಾಪಾಡಬೇಕು, ನಿಯಮಿತವಾಗಿ ವಾಹನವನ್ನು ಸ್ಯಾನಿಟೈಸ್ ಮಾಡಬೇಕು.ಇದನ್ನು ಓದಿ:ಬೆಂಗಳೂರು ಅರಮನೆ ಮೈದಾನದ ಭೂಸ್ವಾಧೀನ: ವಿಚಾರಣೆ ಮುಂದೂಡಿಕೆ
-
ಆರೋಗ್ಯ ಇಲಾಖೆಯ ಸೂಚನೆ:
- ರಾಜ್ಯ ಆರೋಗ್ಯ ಇಲಾಖೆ ಪ್ರಕಾರ, ಕೆಲವೆಡೆ ಕೋವಿಡ್ ಉಲ್ಬಣಿತವಾಗಿದೆ. ಆರೋಗ್ಯ ಸಚಿವಾಲಯದ ವರದಿಯ ಪ್ರಕಾರ, ಇತ್ತೀಚಿನ ವಾರಗಳಲ್ಲಿ ಬೆಂಗಳೂರಿನಲ್ಲಿ ದಿನಸರಿ ಸೋಂಕು ಪ್ರಮಾಣದಲ್ಲಿ ಏರಿಕೆಯಿದೆ. ಈ ಕಾರಣದಿಂದಲೇ ಶಾಲಾ ಮಕ್ಕಳ ಆರೋಗ್ಯದ ದೃಷ್ಠಿಯಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ
ಪೋಷಕರಿಗೆ ಸೂಚನೆ:
-
ಮಕ್ಕಳಲ್ಲಿ ಯಾವುದೇ ರೋಗ ಲಕ್ಷಣಗಳಿದ್ದರೆ ತಕ್ಷಣವೇ ವೈದ್ಯರೊಂದಿಗೆ ಸಂಪರ್ಕಿಸಬೇಕು.
-
ಶಾಲೆಯಲ್ಲಿ ನೀಡಲಾಗುತ್ತಿರುವ ಮಾರ್ಗಸೂಚಿಗಳ ಪ್ರಕಾರ ಮಕ್ಕಳನ್ನು ತರಬೇತುಪಡಿಸಬೇಕು.
-
ಮಕ್ಕಳ ಚಟುವಟಿಕೆಗಳ ಮೇಲೆ ಗಮನಹರಿಸಿ, ಅವರ ಆರೋಗ್ಯ ಸ್ಥಿತಿಯನ್ನು ನಿತ್ಯ ತಪಾಸಣೆ ಮಾಡಬೇಕು.
ಸರ್ಕಾರ ತಿಳಿಸಿರುವಂತೆ, ಇವು ತಾತ್ಕಾಲಿಕ ಕ್ರಮಗಳಾಗಿದ್ದು, ಪರಿಸ್ಥಿತಿಯ ಆಧಾರದ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಎಲ್ಲಾ ಪೋಷಕರು, ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಗಳು ಜವಾಬ್ದಾರಿಯಿಂದ ಮುನ್ನೆಚ್ಚರಿಕೆಯನ್ನು ಪಾಲಿಸುವಂತೆ ಸೂಚಿಸಲಾಗಿದೆ.ಇದನ್ನು ಓದಿ:ವಿಶ್ವದ ಬಡವರಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಹೊಂದಿರುವ ನಾವು ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದೇವೆ!!