ಅಪಘಾತ ತಪ್ಪಿಸಲು ಎ. ಐ ಟೆಕ್ನಾಲಜಿ ಅಳವಡಿಸಿಕೊಂಡ ಕರ್ನಾಟಕ ಸಾರಿಗೆ

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ನಿಗಮದ ಬಸ್‌ಗಳಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಆರ್ಟಿಫಿಷಿಯಲ್ ಇಂಟಲಿಜೆನ್ಸ್ ) ಅಳವಡಿಕೆಗೆ ನಿರ್ಧರಿಸಿದೆ.

‘ಕೊಲಿಜಿಯನ್‌ ವಾರ್ನಿಂಗ್‌ ಸಿಸ್ಟಂ'(ಸಿಡಬ್ಲುಎಸ್‌) ಮತ್ತು ‘ಡ್ರೈವರ್‌ ಡ್ರೋಜಿನೆಸ್‌ ಡಿಟೆಕ್ಷನ್‌ ಸಿಸ್ಟಮ್‌'(ಡಿಡಿಎಸ್‌) ಎಂಬ ತಂತ್ರಜ್ಞಾನ ಇದಾಗಿದೆ. ಚಾಲಕ ಬಸ್‌ ಚಾಲನೆ ವೇಳೆ ನಿದ್ರೆಗೆ ಜಾರಿದರೆ, ಆತನನ್ನು ಅಲಾರ್ಮ್ ಮೂಲಕ ಎಚ್ಚರಿಸುವ ಹಾಗೂ ಮುಂಬದಿ ಚಲಿಸುವ ವಾಹನಗಳ ಬಗ್ಗೆ ಚಾಲಕನಿಗೆ ಮಾಹಿತಿ ರವಾನಿಸಲಿದೆ. ಅಂತೆಯೆ ವಾಹನದ ಪ್ರತಿ ಚಲನೆಯ ಬಗ್ಗೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಿದೆ. ಈ ತಂತ್ರಜ್ಞಾನವು ಸುರಕ್ಷಿತ ಚಾಲನೆ ಹಾಗೂ ಅಪಘಾತಗಳನ್ನು ತಪ್ಪಿಸಲು ಸಹಕಾರಿಯಾಗಲಿದೆ. ಹೀಗಾಗಿ ಮೊದಲ ಹಂತದಲ್ಲಿ 1,044 ಬಸ್ಸುಗಳಿಗೆ ಈ ತಂತ್ರಜ್ಞಾನ ಅಳವಡಿಸಲು ತೀರ್ಮಾನಿಸಲಾಗಿದೆ.

ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತೆ:   ಕ್ಯಾಮರಾ ಚಾಲಕನಿಗೆ ಅಭಿಮುಖವಾಗಿ ಇರಲಿದೆ. ಮತ್ತೊಂದು ಕ್ಯಾಮರಾ ಬಸ್ಸಿನ ಮುಂಭಾಗಕ್ಕೆ ಅಳವಡಿಸಲಾಗುತ್ತದೆ. ಬಸ್ಸಿನ ಮುಂಭಾಗದ ಕ್ಯಾಮರಾ ರಾತ್ರಿ ವೇಳೆ ಸುಮಾರು ಇನ್ನೂರು ಮೀಟರ್‌ ದೂರದಲ್ಲಿರುವ ವಾಹನದ ಬಗ್ಗೆ ಚಾಲಕನಿಗೆ ಮಾಹಿತಿ ರವಾನಿಸಲಿದೆ. ಅಂತೆಯೇ ಚಾಲಕನಿಗೆ ಅಭಿಮುಖವಾಗಿರುವ ಕ್ಯಾಮರಾವು ಚಾಲಕನಿಗೆ ನಿದ್ರೆ ಮಂಪರು ಆವರಿಸಿದರೆ ಅಥವಾ ನಿದ್ರೆಗೆ ಜಾರಿದರೆ ತಕ್ಷಣ ಅಲಾರಾಮ್‌ ಮಾಡಿ ಎಚ್ಚರಿಸಲಿದೆ.

ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಅಳವಡಿಕೆಗೆ ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ ಕೆಎಸ್‌ಆರ್‌ಟಿಸಿಯ 1,044 ಬಸ್ಸಿಗಳಿಗೆ ಈ ತಂತ್ರಜ್ಞಾನ ಅಳವಡಿಸಲಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟುಬಸ್ಸುಗಳಿಗೆ ವಿಸ್ತರಿಸಲಾಗುವುದು  _ಸಾರಿಗೆ ಸಚಿವ ಲಕ್ಷ್ಮಣ ಸವದಿ,

ಚಾಲನೆಯ ಕುರಿತಾದ ದತ್ತಾಂಶ ಸಂಗ್ರಹಕ್ಕೆ ಅವಕಾಶವಿದ್ದು, ಚಾಲಕನ ಮೌಲ್ಯಮಾಪನಕ್ಕೂ ಇದು ಉಪಯೋಗವಾಗಲಿದೆ. ಚಾಲನೆಯ ದತ್ತಾಂಶ ವಿಶ್ಲೇಷಿಸಿ ಚಾಲಕರಿಗೆ ತರಬೇತಿ ನೀಡಲು ಅನುಕೂಲವಾಗಲಿದೆ. ಈ ಸುಧಾರಣೆ ಬಹಳಷ್ಟು ಅನುಕೂಲವಾಗಲಿದ್ದು ಅಪಘಾತವನ್ನು ತಪ್ಪಿಸಲು ಸಹಾಯವಾಗಲಿದೆ. ರಾತ್ರಿ ದೂರದ ಪ್ರಯಾಣ ಮಾಡುವ ಜನ‌ ನೆಮ್ಮದಿಯಿಂದ ಪ್ರಯಾಣ ಮಾಡಬಹುದಾಗಿದೆ.

Donate Janashakthi Media

Leave a Reply

Your email address will not be published. Required fields are marked *