ನವದೆಹಲಿ: ಮಾರ್ಚ್ 25 ಮಂಗಳವಾರದಂದು, ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಲ್ಲಿ ಬಡವರಿಗೆ ಉಚಿತ ಚಿಕಿತ್ಸೆ ನೀಡದಿದ್ದರೆ, ಆಸ್ಪತ್ರೆಯನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಗೆ ವಹಿಸುವಂತೆ ಸುಪ್ರೀಂ ಕೋರ್ಟ್ ಹೇಳಿದ್ದೂ, ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲಿಸಲು ಕೇಂದ್ರ ಮತ್ತು ದೆಹಲಿ ಸರ್ಕಾರಗಳಿಗೆ ಜಂಟಿ ತಂಡವನ್ನು ಕಳುಹಿಸುವಂತೆ ಆದೇಶಿಸಿದೆ. ಬಡವ
1994 ರ ಗುತ್ತಿಗೆ ಒಪ್ಪಂದದ ಪ್ರಕಾರ ಒಳರೋಗಿಗಳಲ್ಲಿ 30% ಮತ್ತು ಹೊರರೋಗಿಗಳಲ್ಲಿ 40% ರಷ್ಟು ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಬದ್ಧತೆಯನ್ನು ಆಸ್ಪತ್ರೆ ಪೂರೈಸಿದೆಯೇ ಎಂದು ಕಂಡುಹಿಡಿಯಲು ಕಳೆದ ಐದು ವರ್ಷಗಳ ಅಪೋಲೋ ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಕೇಳಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಬಡವ
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೋಟೀಶ್ವರ ಸಿಂಗ್ ಅವರ ಪೀಠವು ಇಂದ್ರಪ್ರಸ್ಥ ಮೆಡಿಕಲ್ ಕಾರ್ಪೊರೇಷನ್ ಲಿಮಿಟೆಡ್ (ಐಎಂಸಿಎಲ್) ನಡೆಸುವ ಆಸ್ಪತ್ರೆಯು ಯಾವುದೇ ತಾರತಮ್ಯವಿಲ್ಲದೆ ಬಡ ರೋಗಿಗಳಿಗೆ ಉಚಿತ ವೈದ್ಯಕೀಯ ಮತ್ತು ಇತರ ಸೌಲಭ್ಯಗಳನ್ನು ಒದಗಿಸಬೇಕಾದ ಗುತ್ತಿಗೆ ಒಪ್ಪಂದದ ಉಲ್ಲಂಘನೆಯ ಆರೋಪವನ್ನು ಗಂಭೀರವಾಗಿ ಪರಿಗಣಿಸಿತು. ಬಡವ
ಇದನ್ನೂ ಓದಿ: ಸರ್ಕಾರಿ ಕಛೇರಿಗಳಿಲ್ಲಿ ಲೋಪ; 13 ಮಂದಿ ಅಧಿಕಾರಿಗಳ ವಿರುದ್ದ ದೂರು ದಾಖಲು
“ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿಲ್ಲ ಎಂದು ನಮಗೆ ತಿಳಿದರೆ, ನಾವು ಆಸ್ಪತ್ರೆಯನ್ನು ಏಮ್ಸ್ಗೆ ಹಸ್ತಾಂತರಿಸುತ್ತೇವೆ” ಎಂದು ಪೀಠ ಹೇಳಿದೆ ಎಂದು ಪಿಟಿಐ ವರದಿ ಮಾಡಿದೆ. ಒಳ ಮತ್ತು ಹೊರ ರೋಗಿಗಳಾದ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಒಪ್ಪಂದದ ಷರತ್ತನ್ನು ಆಸ್ಪತ್ರೆ ಆಡಳಿತವು “ಶಿಕ್ಷೆಯಿಲ್ಲದೆ” ಉಲ್ಲಂಘಿಸಿದೆ ಎಂದು ದೆಹಲಿ ಹೈಕೋರ್ಟ್ನ ಸೆಪ್ಟೆಂಬರ್ 22, 2009 ರ ಆದೇಶವನ್ನು ಪ್ರಶ್ನಿಸಿ ಐಎಂಸಿಎಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಉನ್ನತ ನ್ಯಾಯಾಲಯ ನಡೆಸುತ್ತಿತ್ತು.
ದೆಹಲಿಯ ಪ್ರತಿಷ್ಠಿತ ಪ್ರದೇಶದಲ್ಲಿ 15 ಎಕರೆ ಭೂಮಿಯಲ್ಲಿ ಅಪೋಲೋ ಗ್ರೂಪ್ ನಿರ್ಮಿಸಿದ ಆಸ್ಪತ್ರೆಯನ್ನು 1 ರೂಪಾಯಿ ಸಾಂಕೇತಿಕ ಗುತ್ತಿಗೆಗೆ ನೀಡಲಾಗಿತ್ತು, ಅದನ್ನು ‘ಲಾಭ ಇಲ್ಲ, ನಷ್ಟವಿಲ್ಲ’ ಸೂತ್ರದ ಮೇಲೆ ನಡೆಸಬೇಕಾಗಿತ್ತು. ಆದರೆ ಇದು ಸಂಪೂರ್ಣ ವಾಣಿಜ್ಯ ಉದ್ಯಮವಾಗಿ ಮಾರ್ಪಟ್ಟಿದೆ, ಅಲ್ಲಿ ಬಡ ರೋಗಿಗಳು ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಪೀಠವು ಗಮನಿಸಿತು.
ಐಎಂಸಿಎಲ್ ಪರವಾಗಿ ಹಾಜರಾದ ವಕೀಲರು, ಆಸ್ಪತ್ರೆಯನ್ನು ಜಂಟಿ ಉದ್ಯಮವಾಗಿ ನಡೆಸಲಾಗುತ್ತಿದೆ ಮತ್ತು ದೆಹಲಿ ಸರ್ಕಾರವು 26 ಪ್ರತಿಶತದಷ್ಟು ಷೇರುದಾರಿಕೆಯನ್ನು ಹೊಂದಿದೆ ಮತ್ತು ಆದಾಯದೊಂದಿಗೆ ಸಮಾನವಾಗಿ ಲಾಭ ಪಡೆಯುತ್ತಿದೆ ಎಂದು ಹೇಳಿದರು.
ನ್ಯಾಯಮೂರ್ತಿ ಸೂರ್ಯಕಾಂತ್, “ದೆಹಲಿ ಸರ್ಕಾರವು ಬಡ ರೋಗಿಗಳನ್ನು ನೋಡಿಕೊಳ್ಳುವ ಬದಲು ಆಸ್ಪತ್ರೆಯಿಂದ ಲಾಭ ಗಳಿಸುತ್ತಿದ್ದರೆ, ಅದು ಅತ್ಯಂತ ದುರದೃಷ್ಟಕರ ಸಂಗತಿ” ಎಂದು ಹೇಳಿದರು.
ಅಪೋಲೋ ಆಸ್ಪತ್ರೆಗೆ ಮಂಜೂರು ಮಾಡಿದ ಭೂಮಿಯ 30 ವರ್ಷಗಳ ಗುತ್ತಿಗೆ ಅವಧಿ ಮುಕ್ತಾಯವಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ಡಿ ಆನಂದ್ ಪೀಠಕ್ಕೆ ತಿಳಿಸಿದರು, ಆಸ್ಪತ್ರೆಯು ಗುತ್ತಿಗೆ ಒಪ್ಪಂದದ ಷರತ್ತುಗಳನ್ನು ಗೌರವಿಸಿದೆಯೇ ಎಂದು ಕಂಡುಹಿಡಿಯಲು ಕಳೆದ ಐದು ವರ್ಷಗಳ ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲಿಸಲು ತಜ್ಞರ ತಂಡವನ್ನು ರಚಿಸಲು ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಪೀಠ ಆದೇಶಿಸಿತು.
2023 ರಲ್ಲಿ ಮುಕ್ತಾಯಗೊಳ್ಳುವ 30 ವರ್ಷಗಳ ಗುತ್ತಿಗೆಗೆ ಆಸ್ಪತ್ರೆಗೆ ಭೂಮಿಯನ್ನು ನೀಡಲಾಗಿದೆ ಎಂದು ಪೀಠವು ಗಮನಿಸಿತು ಮತ್ತು ಅದರ ಗುತ್ತಿಗೆ ಒಪ್ಪಂದವನ್ನು ನವೀಕರಿಸಲಾಗಿದೆಯೇ ಅಥವಾ ಇಲ್ಲವೇ ಎಂದು ಕಂಡುಹಿಡಿಯಲು ಕೇಂದ್ರ ಮತ್ತು ದೆಹಲಿ ಸರ್ಕಾರವನ್ನು ಕೇಳಿತು ಎಂದು ಪಿಟಿಐ ವರದಿ ಮಾಡಿದೆ.
ಆಸ್ಪತ್ರೆಯ ಅಸ್ತಿತ್ವದಲ್ಲಿರುವ ಒಟ್ಟು ಹಾಸಿಗೆ ಸಾಮರ್ಥ್ಯವನ್ನು ಸಹ ಪೀಠವು ತಿಳಿಯಲು ಬಯಸಿತು ಮತ್ತು ಕಳೆದ ಐದು ವರ್ಷಗಳ ಒಪಿಡಿ ರೋಗಿಗಳ ದಾಖಲೆಗಳನ್ನು ಕೇಳಿತು.
“ಕಳೆದ ಐದು ವರ್ಷಗಳಲ್ಲಿ ಶಿಫಾರಸು ಮಾಡಲಾದ ಎಷ್ಟು ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ ಎಂಬುದನ್ನು ಅಫಿಡವಿಟ್ಗಳು ವಿವರಿಸುತ್ತವೆ” ಎಂದು ಪೀಠ ಹೇಳಿದೆ ಮತ್ತು ಆಸ್ಪತ್ರೆ ಆಡಳಿತವು ತಪಾಸಣಾ ತಂಡದೊಂದಿಗೆ ಸಹಕರಿಸಲು ಮತ್ತು ಮೇಲ್ವಿಚಾರಣಾ ಪ್ರಾಧಿಕಾರವು ಕೋರಿದ ಎಲ್ಲಾ ಸಂಬಂಧಿತ ದಾಖಲೆಗಳನ್ನು ಒದಗಿಸಲು ಸೂಚಿಸಿದೆ.
ಉನ್ನತ ನ್ಯಾಯಾಲಯವು ಆಸ್ಪತ್ರೆ ಆಡಳಿತಕ್ಕೆ ತನ್ನ ಅಫಿಡವಿಟ್ ಅನ್ನು ಸಲ್ಲಿಸಲು ಸ್ವಾತಂತ್ರ್ಯವನ್ನು ನೀಡಿತು ಮತ್ತು ನಾಲ್ಕು ವಾರಗಳ ನಂತರ ವಿಚಾರಣೆಗೆ ವಿಷಯವನ್ನು ಪೋಸ್ಟ್ ಫೋನ್ ಮಾಡಿದೆ.
ಇದನ್ನೂ ನೋಡಿ: ರಂಗಭೂಮಿ ದಿನ | ಜರ್ನಿ ಥಿಯೇಟರ್ ತಂಡದಿಂದ ರಂಗಗೀತೆಗಳು Janashakthi Media