ವಿಜಯನಗರ | ಎತ್ತುಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಹರಪನಹಳ್ಳಿ : ಹೊಲದಲ್ಲಿ ಕಟ್ಟಿಹಾಕಿದ್ದ ಎತ್ತುಗಳ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಹೃದಯವಿದ್ರಾವಕ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ನಡೆದಿದೆ.

ತೊಗರಿಕಟ್ಟೆ ಗ್ರಾಮದ ರೈತ ಹನುಮಂತಪ್ಪ ಬಣಕಾರ್ ಎಂಬುವವರಿಗೆ ಸೇರಿದ ಜೋಡೆತ್ತುಗಳಿಗೆ ದುರುಳರು ಬೆಂಕಿ ಹಚ್ಚಿದ್ದು, ಪರಿಣಾಮ ಇಡೀ ಮೈತುಂಬ ಸುಟ್ಟ ಗಾಯಗಳಾಗಿವೆ ಅಲ್ಲದೇ ಮಲಗಲು ಆಗದೇ ಎತ್ತುಗಳು ನರಳಾಡುತ್ತಿದೆ.

ಬಿತ್ತನೆ ಕಾರ್ಯ ಮುಗಿಸಿ , ಪೈರುಗಳು ಎಡೆ ಕುಂಟೆ ಹೊಡೆಯಲು ಎತ್ತುಗಳು ಬಂದಿದ್ದವು. ಇಂತಹ ಸಮಯದಲ್ಲಿ ಬೆಂಕಿ ಹಚ್ಚಿದ್ದರಿಂದ ಸಾಕಷ್ಟು ಹಿಂಸೆ ಪಡುತ್ತಿವೆ. ನಮ್ಮ ಬೆಳವಣಿಗೆಯನ್ನು ಸಹಿಸದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ರೈತ ಹನುಮಂತಪ್ಪ ಆರೋಪಿಸಿದ್ದಾರೆ. ಎತ್ತುಗಳ ಹಿಂಸೆಯಿಂದಾಗ ಊಟ, ನೀರು ಸೇರುತ್ತಿಲ್ಲ ಕೃತ್ಯ ಎಸಗಿದವರನ್ನು ಕೂಡಲೆ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಹರಪ್ಪನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *