ಪೋಷಕರಿಂದಲೇ ಮಾನಸಿಕ ಅಸ್ವಸ್ಥ ಮಗಳ ಹತ್ಯೆ

ತೆಲಂಗಾಣ: ತೆಲಂಗಾಣದಲ್ಲಿ ಪೋಷಕರೇ ಮಾನಸಿಕ ಅಸ್ವಸ್ಥ ಮಗಳನ್ನು ಕೊಂದು ಹಾಕಿರುವ ಘಟನೆ  ನಡೆದಿದೆ.

ಚೆಪ್ಯಾಲ ನರಸಿಂಹ(49) ಮತ್ತು ಅವರ ಪತ್ನಿ ಯಲ್ಲವ್ವ (43) ಸೇರಿಕೊಂಡು 24 ವರ್ಷದ ಮಾನಸಿಕ ಅಸ್ವಸ್ಥ ಮಗಳು ಪ್ರಿಯಾಂಕಾಳನ್ನು ಕೊಂದು ಹಾಕಿದ್ದಾರೆ ಎಂದು ರಾಜನ್ನ ಸಿರ್ಸಿಲ್ಲಾ ಎಸ್‌ಪಿ ಅಖಿಲ್ ಮಹಾಜನ್ ಹೇಳಿದ್ದಾರೆ. ಹತ್ಯೆ ಬಳಿಕ ಪೋಷಕರು ಸ್ವಾಭಾವಿಕ ಸಾವು ಎಂಬಂತೆ ಬಿಂಬಿಸಿದ್ದರು ಎಂದು ಅವರು ಹೇಳಿದ್ದಾರೆ.

ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಗಳಿಗೆ ಚಿಕಿತ್ಸೆ ಕೊಡಿಸಿದ್ದ ಪೋಷಕರು ಮದುವೆಯನ್ನು ಮಾಡಿಸಿದ್ದರು. ಆಕೆಗೆ 13 ತಿಂಗಳ ಮಗು ಸಹ ಇದೆ. ಆದರೆ, ಮತ್ತೆ ಅಸ್ವಸ್ಥತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆ, ಧಾರ್ಮಿಕ ಸ್ಥಳಗಳಿಗೆ ತೆರಳಿ ಸರಿಪಡಿಸುವ ಯತ್ನ ನಡೆಸಿದ್ದಾರೆ.

ಇದನ್ನು ಓದಿ : ‘ಅಮೃತ ಕಾಲ’ದ ಚುನಾವಣಾ ಮಾಡೆಲ್‌ಗಳು: ಚಂಡೀಗಡದಿಂದ ವಾರಣಾಸಿಯ ವರೆಗೆ

ಆದರೆ, ಯಾವುದೇ ಉಪಯೋಗವಾಗಿಲ್ಲ. ಈ ನಡುವೆ, ಮಗಳನ್ನು ಹತ್ಯೆ ಮಾಡಲು ನಿರ್ಧರಿಸಿದ ಪೋಷಕರು, ಮೇ 14ರಂದು ಮಲಗಿದ್ದ ಮಗಳ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗಳ ಸಾವಿನ ಬಗ್ಗೆ ಅಳಿಯನಿಗೆ ತಿಳಿಸಿ, ಅಂತ್ಯಸಂಸ್ಕಾರ ಸಹ ನಡೆಸಿದ್ದರು.

ಈ ನಡುವೆ, ಮಹಿಳೆಯ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಗ್ರಾಮಸ್ಥರು, ದೂರು ನೀಡಿದ್ದರು. ವಿಚಾರಣೆ ಸಂದರ್ಭದಲ್ಲಿ ಪೋಷಕರು ತಪ್ಪೊಪ್ಪಿಕೊಂಡಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನು ನೋಡಿ : ಪ್ರಭುದ್ದಳ ಸಾವಿಗೆ ನ್ಯಾಯ ಸಿಗಬೇಕು – ಸಂಘಟನೆಗಳ ಆಕ್ರೋಶJanashakthi Media

Donate Janashakthi Media

Leave a Reply

Your email address will not be published. Required fields are marked *