ಬುದ್ದಿಮಾಂದ್ಯ ಮಗು ಎಂದು ಮಹಡಿಯಿಂದ ಎಸೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಬೆಂಗಳೂರು: ನಗರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಜನ್ಮಕೊಟ್ಟ ತಾಯಿಯೇ ಮಗುವನ್ನು ಹತ್ಯೆ ಮಾಡಿ ತಾನೂ ಸಹ ಆತ್ಮಹತ್ಯೆ ಯತ್ನಿಸಿರುವ ಘಟನೆ ಸಂಪಂಗಿರಾಮ ನಗರದ ಅದ್ವಿತ್ ಅಪಾರ್ಟ್ ಮೆಂಟ್​ನಲ್ಲಿ ನಡೆದಿದೆ.

ಬುದ್ದಿಮಾಂದ್ಯ ಮಗು ಎಂದು ಸುಷ್ಮಾ ಎಂಬುವರು ತನ್ನ  ಮಗುವನ್ನು ನಾಲ್ಕನೇ ಮಹಡಿಯಿಂದ ಕೆಳಗಡೆ ಎಸೆದ್ದಾಳೆ. ಮಗು ಸ್ಥಳದಲ್ಲೇ ಮೃತಪಟ್ಟಿದೆ. ಮಗು ಮಹಡಿಯಿಂದ ಎಸೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಈ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ.

ಆರೋಪಿ ತಾಯಿ ದಂತ ವೈದ್ಯಯಾಗಿ ತರಬೇತಿಯಲ್ಲಿರುವವಳು. ಇನ್ನೂ ಮಗುವಿನ ತಂದೆ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಈ ಹಿಂದೆ ಬುದ್ದಿ ಮಾಂದ್ಯ ಮಗು ಎಂದು ಪುಟ್ಟ ಕಂದಮ್ಮನನ್ನು ಕಳೆದ ಮೂರು ತಿಂಗಳ ಹಿಂದೆಯೇ ರೈಲ್ವೆ ಸ್ಟೇಷನ್ ನಲ್ಲಿ ತಾಯಿ ಬಿಟ್ಟು ಬಂದಿದ್ದಳು.

ಮಹಡಿ ಮೇಲಿನಿಂದ ಮಗುವನ್ನು ಎಸೆದು ತಾನೂ ಕೂಡ ಆತ್ಮಹತ್ಯೆಗೆ ಮುಂದಾದ ಸುಷ್ಮಾಳನ್ನು ನಾಲ್ಕನೇ ಮಡಿಯಲ್ಲಿನ ನೆರೆಮನೆಯವರು ಬಾಗಿಲು ತೆಗೆದು ಆಕೆಯ ರಕ್ಷಣೆ ಮಾಡಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ತಾಯಿ ಪಾರಾಗಿದ್ದು, ಆಕೆಯ ವಿರುದ್ದ ಸಂಪಂಗಿರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ, ಪೊಲೀಸರು ಸುಷ್ಮಾಳನ್ನು ಬಂಧಿಸಿದ್ದಾರೆ.

ವಿಡಿಯೋದಲ್ಲಿ ಕಂಡುಬರುವ ಪ್ರಕಾರ ಆಗಸ್ಟ್‌ 4 ರಂದು ಬೆಳಗ್ಗೆ 7:55ಕ್ಕೆ ಈ ಘಟನೆ ನಡೆದಿದೆ. ಇನ್ನು ಈ ಘಟನೆಯ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದಾರೆ. ಕೆಲವರು ಮಗುವನ್ನು ಕೊಂದ ತಾಯಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಹಿಳೆ ಇಂಥಾದ್ದೊಂದು ಗಂಭೀರ ಹೆಜ್ಜೆ ಇಡಲು ಕೌಟುಂಬಿಕ ಕಾರಣಗಳು ಏನೇ ಇರಬಹುದು. ಅದರೆ, ಏನೂ ಅರಿಯದ ಪುಟ್ಟ ಮಗುವನ್ನು ಕೊಂದಿದ್ದು ಏಕೆ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ತನ್ನ ಮಗುವನ್ನೇ ಕೊಂದ ತಾಯಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *