ನಾಳೆ ಹುಟ್ಟೂರಲ್ಲಿ ಜಿ ವಿ ಶ್ರೀರಾಮರೆಡ್ಡಿ ಅಂತ್ಯಕ್ರಿಯೆ

ಬಾಗೇಪಲ್ಲಿ: ಸಿಪಿಐ(ಎಂ) ಪಕ್ಷದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಜನಪರ ಹೋರಾಟಗಾರ ಜಿ ವಿ ಶ್ರೀರಾಮರೆಡ್ಡಿ ಅಂತಿಮ ದರ್ಶನವನ್ನು ಇಂದು ಸಂಜೆ 5 ಗಂಟೆಯವರೆಗೆ ಬಾಗೇಪಲ್ಲಿಯ ಬಾಲಕಿಯರ ಮಹಿಳಾ ಪದವಿ ಪೂರ್ವ ಕಾಲೇಜು ಏರ್ಪಿಸಲಾಗಿದೆ.

ನಾಳೆ (ಏಪ್ರಿಲ್‌ 16) ಬೆಳಿಗ್ಗೆ 11.00 ಗಂಟೆಗೆ ಜಿ ವಿ ಶ್ರೀರಾಮರೆಡ್ಡಿ ಅವರ ಹುಟ್ಟೂರಾದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬೈರಾಬಂಡಾ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನು ಓದಿ: ಧೀಮಂತ ಹೋರಾಟಗಾರ ಜಿ.ವಿ.ಶ್ರೀರಾಮರೆಡ್ಡಿ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ

ಅಂತಿಮ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ರಾಜಕಾರಣಿಗಳು, ಹೋರಾಟಗಾರರು, ಕ್ಷೇತ್ರದ ಜನತೆ, ಹಲವು ಮಂದಿ ಆಗಮಿಸಿ ತಮ್ಮ ನಮನವನ್ನು ಸಲ್ಲಿಸುತ್ತಿದ್ದಾರೆ.

ರಾಜಕಾರಣದ ಜೊತೆ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತಿದ್ದ ಜಿ ವಿ ಶ್ರೀರಾಮ ರೆಡ್ಡಿಯವರು ತನ್ನ ಕಾರ್ಯನಿರ್ವಹಣೆಯ ಅವಧಿಯಲ್ಲಿ ಸಾಂಸ್ಕೃತಿಕ ರಾಜಕಾರಣವನ್ನು ರಾಜ್ಯದೆಲ್ಲೆಡೆ ಚುರುಕುಗೊಳಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *