ಮೃತ ಸಹೋದರನ ಹೆಸರಿನಲ್ಲಿ 24 ವರ್ಷದಿಂದ ಶಿಕ್ಷಕನಾಗಿ ಕೆಲಸ – ತಮ್ಮನ ಬಂಧನ

  • ಸತ್ತ ಅಣ್ಣನ ಹೆಸರಿನಲ್ಲಿ27 ವರ್ಷ ಸ್ಕೂಲ್‌ ಟೀಚರ್‌ ಆಗಿ ಕೆಲಸ ಮಾಡಿದ ತಮ್ಮ
  • ಮಾಹಿತಿ ಹಕ್ಕು ಕಾಯಿದೆ ನೆರವಿನಿಂದ ಸಿಕ್ಕಿಬಿದ್ದು, ಪೊಲೀಸರ ಅತಿಥಿಯಾದ
  • ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ, ಅಧಿಕಾರಿಗಳ ಮೇಲೆ ಗುಮಾನಿ

ಹುಣಸೂರು : ಮೃತ ಸಹೋದರನ ಹೆಸರಿನಲ್ಲಿ ಶಿಕ್ಷನಾಗಿ 24 ವರ್ಷ ಕಾಲ ಸುಧೀರ್ಘ ಸರ್ಕಾರಿ ಶಿಕ್ಷಕನಾಗಿ ಸೇವೆಸಲ್ಲಿಸುತ್ತಿರುವ ಘಟನೆ ಮಾಹಿತಿ ಹಕ್ಕಿನಲ್ಲಿ ಬಹಿರಂಗಗೊಂಡಿದ್ದು ಇದೀಗ ಹುಣಸೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿ ನಕಲಿ ಶಿಕ್ಷಕನನ್ನು ನ್ಯಾಯಾಂಗ ಬಂಧನಕೊಪ್ಪಿಸಲಾಗಿದೆ.

ಹುಣಸೂರು ತಾಲೂಕಿನ ಕಟ್ಟೆಮಾಳಲವವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 29 ವರ್ಷಗಳ ಹಿಂದೆ ಸಹಶಿಕ್ಷಕನಾಗಿ ನೇಮಕಗೊಂಡಿದ್ದ ಲೋಕೇಶ್ ಗೌಡ ಹೆಸರಿನಲ್ಲಿ ಆತನ ಕಿರಿಯ ಸಹೋದರ ಲಕ್ಷ್ಮಣೇ ಗೌಡ ಕೆಲಸ ಮಾಡುತ್ತಿದ್ದ. ಈ ಬಗ್ಗೆ ಅನುಮಾನಗೊಂಡ ಸಾಮಾಜಿಕ ಕಾರ್ಯಕರ್ತ ಹುಣಸೂರಿನ ಇಂಟೆಕ್ ರಾಜು ಅನುಮಾನ ವ್ಯಕ್ತಪಡಿಸಿ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿ ದಾಖಲಾತಿ ಪಡೆದ ನಂತರ ನಖಲಿ ಶಿಕ್ಷಕನ ವಿರುದ್ಧ ಕರ್ನಾಟಕ ಲೋಕಾಯುಕ್ತಕ್ಕೆ 2019 ರಲ್ಲಿ ದೂರು ಸಲ್ಲಿಸಿದ್ದರು.

ಘಟನೆಯ ಹಿನ್ನಲೆ : ಮೂಲತಃ ಕೆ.ಆರ್. ನಗರ ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಲಕ್ಷ್ಮಣೇ ಗೌಡನ ಕುಟುಂಬ ವಾಸವಿದ್ದು ಈತನ ಹಿರಿಯ ಸಹೋದರ ಲೋಕೇಶ್ ಗೌಡ 1994-95 ರಲ್ಲಿ ಸರ್ಕಾರಿ ಶಿಕ್ಷಕ ಹುದ್ದೆದಗೆ ಆಯ್ಕೆಯಾಗಿದ್ದರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಮುನ್ನವೇ ಮೃತಪಟ್ಟರು. ಅಣ್ಣನಿಗೆ ಬಂದಿದ್ದ ನೇಮಕಾತಿ ಆದೇಶ ಪತ್ರದೊಂದಿಗೆ ಕೆಲಸಕ್ಕೆ ಹಾಜರಾದ ಲಕ್ಷ್ಮಣೇ ಗೌಡ ತಾನೇ ಲೋಕೇಶ್ ಗೌಡ ಎಂದು ಹೇಳಿಕೊಂಡು ಪಿರಿಯಾಪಟ್ಟಣ ತಾಲೂಕಿನ ಮದ್ದನಹಳ್ಳಿ ಗ್ರಾಮದ ಶಾಲೆಯಲ್ಲಿ ಕರ್ತವ್ಯ ಆರಂಬಿಸಿದ್ದ. ನಂತರದ ವರ್ಷಗಳಲ್ಲಿ ಮೈಸೂರು ಜಿಲ್ಲೆಯ ಹಲವಾರು ಶಾಲೆಗಳಲ್ಲಿ ಕೆಲಸ ನಿರ್ವಹಿಸಿ ಸರಕಾರದ ಕಣ್ಣಿಗೆ ಮಣ್ಣೇರಚಿ ನಂಜನಗೂಡು ತಾಲೂಕು, ಹುಣಸೂರು ತಾಲೂಕಿನ ಕಟ್ಟಮಾಳಲವಾಡಿ ನಂತರ ಹಿರಿಕ್ಯತನಹಳ್ಳಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿದ್ದ. ಈ ವೇಳೆ ಸಂಬಳ ಹಾಗೂ ಸರಕಾರದ ಎಲ್ಲಾ ಸವಲತ್ತುಗಳನ್ನು ಪಡೆದಿದ್ದ.

ಮಾಹಿತಿ ಹಕ್ಕಿನಿಂದ ಬಹಿರಂಗ : ಪತ್ರಕರ್ತ ಇಂಟೆಕ್ ರಾಜುಗೆ ಇತನ ಮೇಲೆ ಅನುಮಾನ ಮೂಡಿದೆ. ಮಾಹಿತಿ ಹಕ್ಕಿನ ಮೂಲಕ ಪಡೆದ ದಾಖಲೆಗಳನ್ನು ಕೆದಕಿದಾಗ ಅವರ ಅನುಮಾನ ನಿಜವಾಗಿದೆ. 2019 ರಲ್ಲಿ ಇಂಟೆಕ್ ರಾಜು ಶಿಕ್ಷಣ ಇಲಾಖೆ ಆಯುಕ್ತರು, ಉಪ ನಿರ್ಧೇಶಕರು ಮತ್ತೊಂದೆಡೆ ಲೋಕಾಯುಕ್ತರಿಗೂ ದೂರು ಸಲ್ಲಿಸುತ್ತಾರೆ. ದೂರು ಸಲ್ಲಿಕೆಯಾದ ನಂತರ ತನಿಖೆ ನಡೆಸಲು ಕೆ,ಆರ್ ನಗರ ತಹಸೀಲ್ದಾರಿಗೆ ಡಿ.ಡಿ.ಪಿ.ಐ ಕೋರಿದ್ದರು. ಲಕ್ಷ್ಮಣೇ ಗೌಡರ ಕುಟುಂಬ ಮಾಹಿತಿ ನೀಡಲು ನಿರಾಕರಿಸುತ್ತಿರುವ ಬಗ್ಗೆ ವರದಿ ನೀಡಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೆ,ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸಲು ಜಿಲ್ಲಾದಿಕಾರಿಗಳು ಆದೇಶಿಸಿದ್ದರು. ಆದರೆ 2020 ರಲ್ಲಿ ಜಿಲ್ಲಾದಿಕಾರಿಗಳ ಆದೇಶವನ್ನೇ ಗಾಳಿಗೆ ತೂರಿದ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದರು.

ಮತ್ತೆ ಲೋಕಾಯಕ್ತ ಅಧಿಕಾರಿಗಳು ಆರೋಪಿತ ಶಿಕ್ಷಕ ಲಕ್ಷ್ಮಣೇ ಗೌಡ ಮತ್ತು ದೂರುದಾರ ಇಂಟೆಕ್ ರಾಜು ಇವರನ್ನು ಕರೆಸಿ ವಿಚಾರಣೆ ನಡೆಸಿದ್ದರು. ಇತ್ತ ಶಿಕ್ಷಣ ಇಲಾಖೆ ನೇಮಕಾತಿ ಪ್ರಾಧಿಕಾರದಲ್ಲೂ ವಿಚಾರಣೆ ನಡೆಸಲಾಯಿತು. ಈ ವೇಳೆ ಆರೋಪಿ ಲೋಕೇಶ್ ಗೌಡ ನೀಡಿದ್ದ ವಂಶ ವೃಕ್ಷದಲ್ಲಿ ಲಕ್ಷ್ಮಣೇ ಗೌಡ ಹೆಸರು ಕೈಬಿಟ್ಟಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾರಣ ಕೇಳಿ ನೋಟೀಸಿ ಜಾರಿ ಮಾಡಿದ್ದರು. ಸಮರ್ಪಕ ಉತ್ತರ ನೀಡುವ ಬದಲು ಲೋಕೇಶ್ ಗೌಡ ಇಲಾಖೆ ಅಧಿಕಾರಿಗಳ ವಿರುದ್ಧವೇ ಕ್ರಿಮಿನಲ್ ಹಾಗೂ ಮಾನನಷ್ಟ ಮೊಕದಮ್ಮೆ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು.

ಪ್ರಕರಣದಲ್ಲಿ ಆರೋಪಿ ಸೂಕ್ತ ಮತ್ತು ಅಧಿಕೃತ ದಾಖಲೆಗಳನ್ನು ಸಲ್ಲಿಸುವಲ್ಲಿ ವಿಫಲನಾಗಿರುವುದು ಮತ್ತು ದೂರುದಾರರು ವ್ಯಕ್ತಪಡಿಸಿರುವ ಅನುಮಾನಗಳಲ್ಲಿ ನೈಜತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಮಾ.21ರಂದು ಪಿರಿಯಾಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ಅಂದು ಮಧ್ಯಾಹ್ನ ನಕಲಿ ಶಿಕ್ಷಕನ ಆರೋಪ ಹೊತ್ತಿರುವ ಲಕ್ಷಣೇಗೌಡನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ನಾಗರಾಜ್‌ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *