ಶ್ರಮಿಕರ ಕ್ಲಿನಿಕ್‌ ಅಡಿಗಲ್ಲು ಸಮಾರಂಭ

ಬೆಂಗಳೂರು :  ಅಸಂಘಟಿತ ಕಾರ್ಮಿಕರ ಕುಟುಂಬದ ಆರೋಗ್ಯ ಕಲ್ಯಾಣಕ್ಕಾಗಿ ಶ್ರಮಿಕರ ಕ್ಲಿನಿಕ್ ಹಾಗೂ ಸಿಐಟಿಯು ಬೆಂಗಳೂರು ಜಿಲ್ಲಾ ಕಚೇರಿ ಜ್ಯೋತಿಬಸು ನವೀಕರಣ ಹಾಗು ಅಡಿಗಲ್ಲು ಕಾರ್ಯಕ್ರಮ ಫೆಬ್ರವರಿ 13ರಂದು ಜ್ಯೋತಿಬಸು ಭವನದಲ್ಲಿ ನಡೆಯಿತು.

ಸಿಐಟಿಯು ರಾಷ್ಟ್ರೀಯ ಅಧ್ಯಕ್ಷರಾದ ಡಾ.ಕೆ.ಹೇಮಲತಾ ರವರು ಶಂಕುಸ್ಥಾಪನೆ ಮಾಡಿದರು. ಅಧ್ಯಕ್ಷತೆಯನ್ನು ಸಿಐಟಿಯು ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಕಾಂ ಹೆಚ್‌ ಎನ್‌ ಗೋಪಾಲಗೌಡ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ಸಿಐಟಿಯು ರಾಜ್ಯ ಉಪಾಧ್ಯಕ್ಷರು, ಮಾಜಿ ಶಾಸಕರಾದ ಎಂ.ಎ ಸಾಧು, ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್.ವರಲಕ್ಷ್ಮಿ, ರಾಜ್ಯ ಕಾರ್ಯದರ್ಶಿ ಕೆ.ಎನ್‌‌.ಉಮೇಶ್, ರಾಜ್ಯ ಉಪಾಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಡಾ.ಪ್ರಕಾಶ್. ಕೆ, ಸಿಐಟಿಯು  ಬೆಂಗಳೂರು ಉತ್ತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತಾಪ್ ಸಿಂಹ, ಬೆಂಗಳೂರು ದಕ್ಷಿಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎನ್. ಮಂಜುನಾಥ್ ಹಾಗೂ ಉತ್ತರ ಜಿಲ್ಲಾ ಖಜಾಂಚಿ ಟಿ.ಲೀಲಾವತಿ, ದಕ್ಷಿಣ ಜಿಲ್ಲಾ ಖಜಾಂಚಿ ಥಾಮಸ್ ರವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಶ್ರಮಿಕರ ಕ್ಲಿನಿಕ್ ಪ್ರಚಾರದ ಪೋಸ್ಟರ್ ಬಿಡುಗಡೆ ಹಾಗೂ ಶ್ರಮಿಕರ ಕ್ಲಿನಿಕ್ ಕುಟುಂಬ ಹೆಲ್ತ್ ಕಾರ್ಡನ್ನು ಸಿಐಟಿಯು ಮುಖಂಡರಿಂದ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮನೆಕೆಲಸಗಾರರ ಸಂಘ, ಕಟ್ಟಡ ಕಾರ್ಮಿಕರ ಸಂಘ(ಸಿಡಬ್ಲ್ಯೂಎಫ್‌ಐ) ಅಸಂಘಟಿತ ಕಾರ್ಮಿಕರ ಸಂಘ, ಆಟೋ ರಿಕ್ಷಾ ಡ್ರೈವರ್ಸ್‌ ಯೂನಿಯನ್‌(ಎಆರ್‌ಡಿಯು), ಬೀದಿಬದಿ ವ್ಯಾಪಾರಗಳ ಸಂಘ, ವಲಸೆ ಕಾರ್ಮಿಕರ ಸಂಘ(ಐಎಂಎಫ್‌ಕೆ)  ಸೇರಿದಂತೆ ಎಐಡಿಡಬ್ಲ್ಯೂಎ, ಎಸ್‌ಎಫ್‌ಐ, ಡಿಹೆಚ್‌ಎಸ್‌, ವಿಮಾ ನೌಕರರ ಸಂಘಟನೆ, ಮತ್ತಿತರೆ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *