ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ : ಸಚಿವರಾಗಲು‌ ನಡೆದಿದೆ ಪೈಪೋಟಿ

ಬೆಂಗಳೂರು ಜ11: ಸಚಿವ ಸಂಪುಟ ವಿಸ್ತರಣೆ ಬಿಜೆಪಿ ಹೈಕಮಾಂಡ್ ಸಮ್ಮತಿ ನೀಡಿದ್ದು ಜ 13ರಂದು ನೂತನ ಸಚಿವರಾಗಿ 7 ಜನರು ಸಂಪುಟ ಸೇರ್ಪಡೆಯಾಗಲಿ ದ್ದಾರೆ. ಸಂಪುಟಕ್ಕೆ ಸೇರ್ಪಡೆಯಾಗಲಿರುವವರ ಹೆಸರನ್ನು ಇಂದು ಬಹಿರಂಗಪಡಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ನವದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಯಡಿಯೂರಪ್ಪಗೆ ಪಕ್ಷದ ವರಿಷ್ಠರು ದೂರ ವಾಣಿ ಕರೆ ಮಾಡಿ 7 ಜನರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ .ಜ 14 ರಂದು ಸಂಕ್ರಾತಿ ಹಬ್ಬದ ಹಿನ್ನಲೆಯಲ್ಲಿ ಜ 13ರಂದ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಯಾರೆಲ್ಲಾ ಸಂಪುಟಕ್ಕೆ ಸೇರ್ಪಡೆ ಯಾಗಲಿದ್ದಾರೆ ಎಂಬುದನ್ನು ಇಂದು ಸಂಜೆಯೊಳಗೆ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಆಮೂಲಕ ಹಲವಾರು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಸಂಪುಟ ರಚನೆಗೆ ಕಾಡಿ ಬೇಡಿ ಹೈಕಮಾಂ ಡ್ ಒಪ್ಪಿಗೆ ನೀಡಿದೆ ಎನ್ನಲಾಗಿದೆ.

ಇದರ ಬೆನ್ನಲ್ಲೆ ಸಚಿವಾಕಾಂಕ್ಷಿಗಳ ದಂಡು ಯಡಿಯೂರಪ್ಪಗೆ ದೊಂಬಾಲು ಬಿದ್ದಿದ್ದಾರೆ. ಯಾರಾಗಬಹುದು ಸಚಿವರು ಸಂಜೆಯವರೆಗೆ ಕಾಯಬೇಕಿದೆ?

Donate Janashakthi Media

Leave a Reply

Your email address will not be published. Required fields are marked *