ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಡಿ. ಸುಧಾಕರ್ ಅವರ ಆರೋಗ್ಯದ ನಿಜವಾದ ಮಾಹಿತಿಯನ್ನು ಸರ್ಕಾರ ಮುಚ್ಚಿಡುತ್ತಿದೆ ಎಂದು ಅವರು ಹೇಳಿದ್ದಾರೆ. ಡಿ ಸುಧಾಕರ್
ಚಿತ್ರದುರ್ಗದಲ್ಲಿ ಮಾತನಾಡಿದ ಕುಮಾರಸ್ವಾಮಿ, “ಸುಧಾಕರ್ ಅವರಿಂದ ಕೆಲವು ಪ್ರಮುಖ ದಾಖಲೆಗಳಿಗೆ ಹೆಬ್ಬೆಟ್ಟು ಪಡೆಯಲು ಅವರ ಆರೋಗ್ಯದ ಸ್ಥಿತಿಯನ್ನು ಮುಚ್ಚಿಡಲಾಗುತ್ತಿದೆಯೇ?” ಎಂದು ಪ್ರಶ್ನಿಸಿದರು. ಇಂತಹ ಸಂದರ್ಭಗಳನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ ಕೆಲವರು ಪರಿಣತರಿದ್ದಾರೆ ಎಂದೂ ಅವರು ಪರೋಕ್ಷವಾಗಿ ಟೀಕಿಸಿದರು.
ಇದನ್ನೂ ಓದಿ : ಪಕ್ಷಾಂತರ ನಿಷೇಧ ಕಾಯ್ದೆ: ಪ್ರಜಾಪ್ರಭುತ್ವದ ರಕ್ಷಕವೇ, ಪಕ್ಷಾಂತರದ ದ್ವಾರವೇ?
ಆದರೆ, ಸುಧಾಕರ್ ಅವರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವುದರಿಂದ ಈ ವಿಷಯವನ್ನು ಹೆಚ್ಚು ಮುಂದುವರಿಸುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. “ನಾವು ಅವರ ಆರೋಗ್ಯದ ಬಗ್ಗೆ ಸ್ಪಷ್ಟ ಮಾಹಿತಿ ಬೇಕೆಂದು ಮಾತ್ರ ಕೇಳುತ್ತಿದ್ದೇವೆ” ಎಂದರು.
ಇದೇ ವೇಳೆ, ವೈದ್ಯರು ಸಚಿವ ಸುಧಾಕರ್ ಅವರ ಶ್ವಾಸಕೋಶದಲ್ಲಿ ಗಂಭೀರ ಸೋಂಕು ಇರುವುದರಿಂದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಶ್ವಾಸಕೋಶದ ಸ್ಥಿತಿ ಸುಧಾರಿಸದಿದ್ದರೆ ಶ್ವಾಸಕೋಶ ಕಸಿ ಮಾಡುವ ಅಗತ್ಯ ಬರಬಹುದು ಎಂದು ಆಸ್ಪತ್ರೆ ತಿಳಿಸಿದೆ.
ಇದನ್ನೂ ನೋಡಿ : ಜಿಂದಾಲ್ಗೆ 900 ಎಕರೆ ಭೂ ಹಸ್ತಾಂತರ ವಿರೋಧಿಸಿ ತೀವ್ರಗೊಂಡ ರೈತರ ಹೋರಾಟ; ಹೋರಾಟಗಾರರ ಬಂಧನಕ್ಕೆ ಆಕ್ರೋಶ
