ಬೈಕ್‌ಗೆ ಗುದ್ದಿ ಪರಾರಿಯಾಗಲು ಯತ್ನಿಸಿದ ಲಾರಿಚಾಲಕ: 70 ಕಿಮೀ ದೂರ ಬೆನ್ನಟ್ಟಿ ಹಿಡಿದು ಧರ್ಮದೇಟು ನೀಡಿದ ಗ್ರಾಮಸ್ಥರು

ಬೆಳಗಾವಿ : ಅಥಣಿಯ ಹಳ್ಯಾಳ ಗ್ರಾಮದಲ್ಲಿ ಲಾರಿಚಾಲಕನೊಬ್ಬ ಬೈಕ್‌ಗೆ ಗುದ್ದಿದ್ದಲ್ಲದೇ , ತನ್ನನ್ನು ಬೆನ್ನಟ್ಟಿ ಬಂದ ಗ್ರಾಮಸ್ಥರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಮತ್ತೂ ಐದು ವಾಹನಗಳಿಗೆ ಗುದ್ದಿ ಅಪಘಾತ ಎಸೆಗಿರುವ ಘಟನೆ

ಘಟನೆಯ ಬೆನ್ನಲ್ಲೇ ಛಲಬಿಡದ ಗ್ರಾಮಸ್ಥರು ಸಿನಿಮೀಯ ರೀತಿಯಲ್ಲಿ 70 ಕಿಮೀ ದೂರ ಬೆನ್ನಟ್ಟಿ ಲಾರಿ ಚಾಲಕನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ಹಳ್ಯಾಳ ಗ್ರಾಮದಲ್ಲಿ ಬೈಕ್‌ ಸವಾರನೊಬ್ಬನಿಗೆ ಗುದ್ದಿ ಗಾಯಗೊಳಿಸಿದ್ದ ಲಾರಿಚಾಲಕ ವಾಹನ ನಿಲ್ಲಿಸಿದೇ ಪರಾರಿಯಾಗಲು ಯತ್ನಿಸಿದ್ದ. ಆದರೆ ಗ್ರಾಮಸ್ಥರು ಬೈಕ್‌ ನಲ್ಲಿ ಈತನನ್ನು ಚೇಸ್‌ ಮಾಡಲು ಮುಂದಾಗಿದ್ದರು.

ಇದನ್ನು ಓದಿ : ಬಾಕಿ ಸಂಬಳ ಕೇಳಿದ್ದಕ್ಕೆ ಹಲ್ಲೆ: ಮುಖಕ್ಕೆ ಉಗಿದು ಮೂತ್ರ ವಿಸರ್ಜನೆ ಮಾಡಿ ಅವಮಾನ

ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಹುಚ್ಚಾಪಟ್ಟೆ ಲಾರಿ ಚಲಾಯಿಸಿದ್ದ ಚಾಲಕ ತನ್ನ ಎದುರು ಬರುತ್ತಿದ್ದ ವಾಹನಗಳನ್ನೂ ಲೆಕ್ಕಿಸಿದೆ ವಿಕೃತಿ ಮೆರೆದಿದ್ದ. ಈತನಿಂದಾಗಿ ಐದು ಬೈಕ್‌ ಗಳು ಜಖಂಗೊಂಡಿದ್ದಲ್ಲದೇ ಹಲವರು ಗಾಯಗೊಂಡಿದ್ದರು. ಘಟನಟ್ಟಿ, ನಂದಗಾಂವ, ಸವದಿ, ಸತ್ತಿ, ರಡ್ಡೆರೆಟ್ಟಿ ಗ್ರಾಮದ ಮೂಲಕ ಈತನನ್ನು ಬೆನ್ನತ್ತಿದ ಜನತೆ ಕೊನೆಗೂ ಹಿಡಿದ ಮನಬಂದಂತೆ ಥಳಿಸಿದರು.

ಅಥಣಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಲಾರಿ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದನ್ನು ನೋಡಿ : ಐಸಿಡಿಎಸ್ 50| ಅಂಗನವಾಡಿ ಮಕ್ಕಳ ಸಮಗ್ರ ಬೆಳವಣಿಗೆಯ ಸವಾಲುಗಳುJanashakthi Media

Donate Janashakthi Media

Leave a Reply

Your email address will not be published. Required fields are marked *