4 ವರ್ಷಗಳಲ್ಲಿ 274 ಪತ್ರಕರ್ತರಿಗೆ 12.7 ಕೋಟಿ ರೂ. ನೆರವು ನೀಡಿದ ಮೋದಿ ಸರ್ಕಾರ

ನವದೆಹಲಿ: ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2020-2021 ರ ಹಣಕಾಸು ವರ್ಷದಿಂದ ಈ ವರ್ಷದ ನವೆಂಬರ್‌ವರೆಗೆ ಒಟ್ಟು 274 ಪತ್ರಕರ್ತರಿಗೆ 12.73 ಕೋಟಿ ರೂಪಾಯಿ ಆರ್ಥಿಕ ಸಹಾಯವನ್ನು ನೀಡಿದೆ ಎಂದು ಹೇಳಿಕೊಂಡಿದೆ. ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಈ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಿದೆ.

2021ರ ಆರ್ಥಿಕ ವರ್ಷದಲ್ಲಿ 56 ಪತ್ರಕರ್ತರಿಗೆ 2.6 ಕೋಟಿ ರೂ., 2021-22ರಲ್ಲಿ 134 ಮಂದಿಗೆ 6.47 ಕೋಟಿ ರೂ., 2022-23ರಲ್ಲಿ 45 ಮಂದಿಗೆ 1.99 ಕೋಟಿ ರೂ., ಈ ವರ್ಷದ ಆರ್ಥಿಕ ವರ್ಷ ನವೆಂಬರ್‌ವರೆಗೆ ಪ್ರಸ್ತುತ 39 ಪತ್ರಕರ್ತರಿಗೆ 1.65 ಕೋಟಿ ರೂ. ಸಹಾಯಧನ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಭದ್ರತಾ ವೈಫಲ್ಯ | ರಾಜ್ಯದ ಮತ್ತೊಬ್ಬ ವಶಕ್ಕೆ; ಸಂಸತ್ತಿನ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡ ಸಿಐಎಸ್ಎಫ್

ಎನ್‌ಸಿಪಿ ರಾಯಗಢ ಸಂಸದ ಸುನಿಲ್ ದತ್ತಾತ್ರೇ ತತ್ಕರೆ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಪತ್ರಕರ್ತರ ಕಲ್ಯಾಣ ಯೋಜನೆಯಡಿ ನೆರವಿನ ವಿವರಗಳನ್ನು ನೀಡಿದ್ದಾರೆ.

“ಪತ್ರಕರ್ತರ ಕಲ್ಯಾಣ ಯೋಜನೆಯ ಮುಖ್ಯ ಉದ್ದೇಶವೆಂದರೆ ಸಾವು, ಶಾಶ್ವತ ಅಂಗವೈಕಲ್ಯ, ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಮತ್ತು ಅಪಘಾತಗಳಿಗೆ ಆಸ್ಪತ್ರೆಗೆ ಸೇರಿಸಬೇಕಾದ ಗಂಭೀರ ಗಾಯಗಳಿಗೆ ಚಿಕಿತ್ಸೆ ಪಡೆಯುವ ಪತ್ರಕರ್ತರು ಮತ್ತು ಅವರ ಕುಟುಂಬಗಳಿಗೆ ಒಂದು ಬಾರಿ ಪರಿಹಾರವನ್ನು ಒದಗಿಸುವುದು. ಪತ್ರಿಕಾ ಮಾಹಿತಿ ಬ್ಯೂರೋ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಮಾನ್ಯತೆ ಪಡೆದ ಪತ್ರಕರ್ತರು ಹಾಗೂ ಮಾನ್ಯತೆ ಪಡೆಯದ ಪತ್ರಕರ್ತರು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ” ಎಂದು ಸಚಿವರು ಹೇಳಿದ್ದಾರೆ.

“ಜರ್ನಲಿಸ್ಟ್ ವೆಲ್ಫೇರ್ ಸ್ಕೀಮ್ ಅಡಿಯಲ್ಲಿ, ಕಾರ್ಯದರ್ಶಿ (I&B) ಅಧ್ಯಕ್ಷತೆಯ ಸಮಿತಿಯಿದೆ ಮತ್ತು ಪ್ರಧಾನ ಮಹಾನಿರ್ದೇಶಕರು, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ, ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಖಾಸಗಿ ಮಾಧ್ಯಮ ಸಂಸ್ಥೆಗಳ ಆರು ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ” ಎಂದು ಸಚಿವರು ಹೇಳಿದ್ದು, ಪತ್ರಕರ್ತರು ಮತ್ತು ಅವರ ಕುಟುಂಬಗಳಿಗೆ ಈ ನೆರವು ನೀಡಲು ಸಮಿತಿಯು ಸಲಹೆಗಳನ್ನು ಪಟ್ಟಿ ಮಾಡುತ್ತದೆ ಎಂದು ಈ ನೆರವು ನೀಡುವ ಪ್ರಕ್ರಿಯೆಯನ್ನು ವಿವರಿಸುತ್ತಾ ಠಾಕೂರ್ ಹೇಳಿದ್ದಾರೆ.

ವಿಡಿಯೊ ನೋಡಿ: ಪೂಜಾ ಸ್ಥಳ ಕಾಯ್ದೆ ಜಾರಿಯಾಗಿದ್ದರೂ ಸಹ ಗ್ಯಾನವಾಪಿ,ಶಾಹಿ ಮಸೀದಿಯ ಸಮೀಕ್ಷೆಗೆ ಅನುಮತಿ ಕೊಟ್ಟಿದ್ದು ನ್ಯಾಯಬದ್ಧವೇ?

Donate Janashakthi Media

Leave a Reply

Your email address will not be published. Required fields are marked *