ಆನೇಕಲ್: ಕಿಟಿಕಿಯಲ್ಲಿ ಇರಿಸಿದ್ದ ಮನೆ ಕೀ ಬಳಸಿ ಮನೆಯ ಬೀಗ ತೆಗೆದು 120 ಗ್ರಾಂ ಚಿನ್ನ ಕಳ್ಳತನ ನಡೆದ ಘಟನೆ ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಇದನ್ನೂ ಓದಿ : ಮುಂಬೈ | ಹೊಸ ಕಟ್ಟಡವು ದುಂದುವೆಚ್ಚದಿಂದ ಮುಕ್ತವಾಗಬೇಕು -ಸಿಜೆಐ ಗವಾಯಿ
ಕಳ್ಳರು ಕಿಟಕಿಯಲ್ಲಿಟ್ಟದ್ದ ಕೀ ತೆಗೆದುಕೊಂಡು ಬಾಗಿಲು ತೆಗೆದು ಬೀರುವಿನಲ್ಲಿದ್ದ 120 ಗ್ರಾಂ ಚಿನ್ನ ಮತ್ತು ನಗದ ಕಳವು ಮಾಡಿದ್ದಾರೆ. ಕಳವು ಬಳಿಕ ಮನೆ ಬಾಗಿಲನ್ನು ಮಚ್ಚದೆ ಹಾಗೇ ಬಿಟ್ಟಿದ್ದಾರೆ. ದಂಪತಿ ಮನೆಗೆ ಬಂದಾಗಾ ಕಳ್ಳತನ ನಡೆದಿರುವುದು ಗೊತ್ತಾಗಿದೆ.
ಚಿಕ್ಕಹೊಸಹಳ್ಳಿಯ ಲೋಕೇಶ್ ಮನೆಯಲ್ಲಿ ದುಷ್ಕರ್ಮಿಗಳ ಬೆಳಗ್ಗೆ 9ರ ಸುಮಾರಿಗೆ ನುಗ್ಗಿ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದಾರೆ.ಲೊಕೇಶ್ ಮಗ್ಗದ ಕೆಲಸ ಮಾಡುತ್ತಿದ್ದು, ಇವರ ಪತ್ನಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಾರೆ. ಕುಟುಂಬದವರಿಗೆ ತಿಳಿಯುವಂತೆ ಪ್ರತಿದಿನ ಮನೆಯ ಬಾಗಿಲ ಕೀಯನ್ನು ಕಿಟಕಿ ಸಮೀಪ ಇಡುತ್ತಿದ್ದರು. ಎಂದಿನಂತೆ ಎಲ್ಲರೂ ಕೆಲಸಕ್ಕೆ ಹೋಗಿದ್ದರು.
