ಧಾರವಾಡ| ಡಿಮ್ಹಾನ್ಸ್ ಸಂಸ್ಥೆ 300 ಕ್ಕೂ ಹೆಚ್ಚು ಆತ್ಮಹತ್ಯೆಗಳು ತಡೆದು ಟೆಲಿ ಮಾನಸ್ ಸಾಧನೆ

ಧಾರವಾಡ : ಧಾರವಾಡ ಮಾನಸಿಕ ಆರೋಗ್ಯ ಹಾಗೂ ನರ ರೋಗ ವಿಜ್ಞಾನ ಸಂಸ್ಥೆ ( DIMHANSಈಗ ಮತ್ತೊಂದು ಸಾಧನೆ ಮಾಡಿದೆ. ಕೋವಿಡ್ ನಂತರದ ದಿನಗಳಲ್ಲಿ ದೇಶದಲ್ಲಿ ಆರಂಭಿಸಲಾಗಿರುವ ಟೆಲಿ ಮಾನಸ್ ಯೋಜನೆಯಡಿ ಡಿಮ್ಹಾನ್ಸ್ ದಾಖಲೆ ಸಂಖ್ಯೆಯ ಜನರಿಗೆ ಮಾನಸಿಕ ಸಲಹೆ, ಚಿಕಿತ್ಸೆ ನೀಡುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಆ ಮೂಲಕ ಅನೇಕರ ಆತ್ಮಹತ್ಯೆಗಳನ್ನು ತಡೆದಿದೆ. ಎಂಬ ಮಾಹಿತಿ ತಿಳಿದು ಬಂದಿದೆ.
ಈ ಮಾನಸಿಕ ಒತ್ತಡ ತಡೆಯಲಾಗದೇ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದೂ ಉಂಟು. ಇತ್ತೀಚಿನ ವರ್ಷಗಳಲ್ಲಿ ಚಿಕ್ಕ ಮಗುವಿನಿಂದ ಹಿಡಿದು ವಯೋ ವೃದ್ಧರವರೆಗೂ ಮಾನಸಿಕ ಒತ್ತಡ ಸವಾಲಾಗಿದೆ. ಮಾನಸಿಕ ರೋಗಕ್ಕೆ ಪ್ರಾಥಮಿಕ ಮಟ್ಟದಲ್ಲಿ ಆಪ್ತ ಸಮಾಲೋಚನೆ ಮತ್ತು ಮಾರ್ಗದರ್ಶನ ದೊರೆತರೆ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎಂಬುದನ್ನು ಟೆಲಿ ಮಾನಸ್‌ ಸಾಬೀತುಪಡಿಸಿದೆ. ವಿದ್ಯಾರ್ಥಿಗಳು, ಯುವಕರು, ಮದ್ಯವ್ಯಸನಿಗಳು, ಪತಿ-ಪತ್ನಿ, ವೃದ್ಧರು ಅನೇಕ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ನಿತ್ಯ ಇಂತಹ ಸಮಸ್ಯೆ ಮತ್ತು ಒತ್ತಡಗಳಿಂದ ಬಳಲುವವರು ಟೆಲಿ ಮಾನಸ್‌ಗೆ ಕರೆ ಮಾಡಿ ಮನಸ್ಸು ಹಗರು ಮಾಡಿಕೊಂಡು ಜೀವನದಲ್ಲಿ ಯಶಸ್ಸು ಕಂಡಿದ್ದಾರೆ.  ಧಾರವಾಡ ಮಾನಸಿಕ ಆರೋಗ್ಯ ಹಾಗೂ ನರ ರೋಗ ವಿಜ್ಞಾನ ಸಂಸ್ಥೆಯ ಟೆಲಿ ಮಾನಸ್‌ ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 65 ಸಾವಿರಕ್ಕೂ ಅಧಿಕ ಕರೆಗಳನ್ನು ಸ್ವೀಕರಿಸಿ, ಅವರಿಗೆ ಪರಿಹಾರ ಮಾರ್ಗಗಳನ್ನು ಒದಗಿಸಿ, ದಾಖಲೆ ಮಾಡಿದೆ.
2022 ರಲ್ಲಿ ಆರಂಭವಾಗಿದ್ದ ಟೆಲಿ ಮಾನಸ್‌ ಕೋವಿಡ್‌ ನಂತರದಲ್ಲಿ ದೇಶದಲ್ಲಿ ಸಾಕಷ್ಟು ಜನರು ಮಾನಸಿಕ ಒತ್ತಡಕ್ಕೆ ಒಳಗಾದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2022ರಲ್ಲಿ ಟೆಲಿ ಮಾನಸ್‌ ಎಂಬ ನೂತನ ಕಾರ್ಯಕ್ರಮ ಶುರು ಮಾಡಿತು. ದೇಶದ ಪ್ರತಿ ರಾಜ್ಯದಲ್ಲೂ ಟೆಲಿ ಮಾನಸ ಕೇಂದ್ರಗಳಿದ್ದು, ಬೆಂಗಳೂರಿನ ನಿಮ್ಹಾನ್ಸ್‌ ಹಾಗೂ ಧಾರವಾಡದ ಡಿಮಾನ್ಸ್‌ನಲ್ಲಿ ಈ ಕೇಂದ್ರಗಳು 2022ರಿಂದ ಕಾರ್ಯ ನಿರ್ವಹಿಸುತ್ತಿವೆ.

ಟೆಲಿ ಮಾನಸ್​​ಗೆ ಯಾರೆಲ್ಲ ಕರೆ ಮಾಡಬಹುದು?

ವ್ಯಥೆಗೆ ಒಳಪಟ್ಟವರು, ಪರೀಕ್ಷಾ ಒತ್ತಡಕ್ಕೊಳಗಾದವರು, ಕೌಟುಂಬಿಕ ಸಮಸ್ಯೆಗೊಳಗಾದವರು, ಆತ್ಮಹತ್ಯೆ ಆಲೋಚನೆಗಳು, ಮಾದಕ ವಸ್ತು ವ್ಯಸನದ ಸಮಸ್ಯೆಯಲ್ಲಿರುವವರು, ಸಂಬಂಧಗಳ ಸಮಸ್ಯೆಯಲ್ಲಿ ಸಿಲುಕಿರುವವರು, ಜ್ಞಾಪಕಶಕ್ತಿ ತೊಂದರೆಯುಳ್ಳವರು, ಆರ್ಥಿಕ ಒತ್ತಡದಲ್ಲಿರುವವರು ಹಾಗೂ ಇತರೆ ಯಾವುದೇ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಕರೆ ಮಾಡಿ, ಪರಿಹಾರವನ್ನು ಕಂಡುಕೊಳ್ಳಬಹುದು.

ಧಾರವಾಡ| ಡಿಮ್ಹಾನ್ಸ್ ಸಂಸ್ಥೆ 300 ಕ್ಕೂ ಹೆಚ್ಚು ಆತ್ಮಹತ್ಯೆಗಳು ತಡೆದು ಟೆಲಿ ಮಾನಸ್ ಸಾಧನೆ
ಧಾರವಾಡ| ಡಿಮ್ಹಾನ್ಸ್ ಸಂಸ್ಥೆ 300 ಕ್ಕೂ ಹೆಚ್ಚು ಆತ್ಮಹತ್ಯೆಗಳು ತಡೆದು ಟೆಲಿ ಮಾನಸ್ ಸಾಧನೆ

ಉಚಿತ ಸಹಾಯವಾಣಿ ಸಂಖ್ಯೆ 14416 ಅಥವಾ 18008914416ಕ್ಕೆ ಫೋನ್ ಮಾಡಿದರೆ ದಿನದ 24 ಗಂಟೆಯೂ ಪಾಳಿ ಪ್ರಕಾರ ಕಾರ್ಯನಿರ್ವಹಿಸುತ್ತಿರೋ 20 ಜನ ಸಿಬ್ಬಂದಿ, ಆಪ್ತ ಸಮಾಲೋಚಕರು ಕರೆ ಸ್ವೀಕರಿಸುತ್ತಾರೆ. ಕರೆ ಮಾಡುವಾಗ ಇನ್ನೊಂದು ಕರೆ ಬಂದರೂ ವೇಟಿಂಗ್‌ ಮೂಲಕ ನಂತರದಲ್ಲಿ ಅವರನ್ನು ಸಂಪರ್ಕಿಸುವ ವ್ಯವಸ್ಥೆಯೂ ಇದೆ.

ಡಿಮ್ಹಾನ್ಸ್ ನಿರ್ದೇಶಕರು ಹೇಳುವುದೇನು?

ಸಂಸ್ಥೆಯ ಸಾಧನೆ ಬಗ್ಗೆ ಡಿಮ್ಹಾನ್ಸ್ ನಿರ್ದೇಶಕ ಡಾ. ಅರುಣ ಕುಮಾರ್  ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇರುತ್ತದೆ. ಕಳೆದ ಕೆಲ ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳಲು ಯುವಕನೋರ್ವ ಧಾರವಾಡದ ರೈಲ್ವೆ ನಿಲ್ದಾಣದ ಬಳಿ ಹೋಗಿದ್ದ. ಅಲ್ಲಿ ಟೆಲಿ ಮಾನಸ್ ಪೋಸ್ಟರ್ ನೋಡಿ, 14416 ನಂಬರ್ ಗೆ ಫೋನ್ ಮಾಡಿದ. ಕೂಡಲೇ ಆತನಿಗೆ ಕೌನ್ಸೆಲಿಂಗ್ ಮಾಡಲಾಯಿತು. ಬಳಿಕ ಆತನ ಮನವೊಲಿಸಿ ಡಿಮ್ಹಾನ್ಸ್​ಗೆ ಕರೆಯಿಸಿಕೊಳ್ಳಲಾಯಿತು. ಬಳಿಕ ಆತನಿಗೆ ಆಪ್ತ ಸಮಾಲೋಚನೆ ಮಾಡಿದ ಬಳಿಕ ಆತ ಗುಣಮುಖನಾದ. ಇದೀಗ ಆ ಯುವಕ ಬ್ಯಾಂಕ್ ವೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಇದರರ್ಥ, ಸಮಸ್ಯೆಗಳು ಬಂದ ಕೂಡಲೇ ಆತ್ಮಹತ್ಯೆಯೊಂದೇ ದಾರಿಯಲ್ಲ. ಬದಲಿಗೆ ಆ ಸಮಸ್ಯೆಗಳನ್ನು ಮೀರಿ ನಿಂತು ಬದುಕನ್ನು ಗೆಲ್ಲಬೇಕು. ಟೆಲಿ ಮಾನಸ್ ಇಂಥ ಆತ್ಮಸ್ಥೈರ್ಯವನ್ನು ಜನರಲ್ಲಿ ತುಂಬುವಲ್ಲಿ ಯಶಸ್ವಿಯಾಗುತ್ತಿದೆ ಎಂದು ತಿಳಿಸಿದರು.

ಟೆಲಿ ಮಾನಸ್ ಕೇಂದ್ರದ ನೋಡಲ್ ಅಧಿಕಾರಿ ಡಾ. ರಂಗನಾಥ ಕುಲಕರ್ಣಿ ಮಾತನಾಡಿ, ಈ ಟೆಲಿ ಮಾನಸ್​ನ ವಿಶೇಷ ಎಂದರೆ ಯಾವುದೇ ಕಾರಣಕ್ಕೂ ಯಾರ ಐಡೆಂಟಿಟಿಯನ್ನು ಬಹಿರಂಗಪಡಿಸುವುದಿಲ್ಲ. ಇದರಿಂದಾಗಿ ಜನರು ಎಲ್ಲೇ ಇದ್ದರೂ ಮೊಬೈಲ್ ಮೂಲಕ ತಮ್ಮ ಸಮಸ್ಯೆಯನ್ನು ನಮ್ಮ ಸಿಬ್ಬಂದಿಗೆ ಹೇಳಿಕೊಳ್ಳಬಹುದು. ಅಲ್ಲದೇ ಅವರ ಮೊಬೈಲ್ ಸಂಖ್ಯೆ ಕೂಡ ಡಿ ಕೋಡ್ ಆಗಿರುತ್ತದೆ. ಹೀಗಾಗಿ ಯಾವ ರೋಗಿಯ ಗುರುತನ್ನು ಕೂಡ ಪತ್ತೆ ಹಚ್ಚಲು ಸಾಧ್ಯವೇ ಆಗೋದಿಲ್ಲ. ಇಲ್ಲಿ ರೋಗಿಗಳು ಫೋನ್ ಮಾಡಿದಾಗ ಮೂರು ಹಂತಗಳಲ್ಲಿ ಅವರಿಗೆ ಆಪ್ತ ಸಮಾಲೋಚನೆ ಮಾಡಲಾಗುತ್ತದೆ. ಅವರ ಮಾನಸಿಕ ಸಮಸ್ಯೆ ತೀವ್ರವಾಗಿದೆ ಎಂದು ಅನ್ನಿಸಿದರೆ ಅವರ ಮನವೊಲಿಸಿ, ಡಿಮ್ಹಾನ್ಸ್ ಅಥವಾ ಆ ವ್ಯಕ್ತಿಯ ಸಮೀಪದ ಮಾನಸಿಕ ಆಸ್ಪತ್ರೆಗೆ ಹೋಗುವಂತೆ ತಿಳಿಸಲಾಗುತ್ತದೆ. ಆ ಮೂಲಕ ಆತನ ಸಮಸ್ಯೆಯನ್ನು ಪರಿಹರಿಸೋ ವ್ಯವಸ್ಥೆ ಮಾಡಲಾಗುತ್ತದೆ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *