ಯುವತಿ ಮೇಲೆ ಆಸಿಡ್ ಎರಚಿ ತಲೆಮರೆಸಿಕೊಂಡಿದ್ದ ನಾಗೇಶ್ ಸ್ವಾಮೀಜಿ ವೇಷದಲ್ಲಿ ಪತ್ತೆ

ಬೆಂಗಳೂರು:ಪ್ರೀತಿಸಲು ನಿರಾಕರಿಸಿದ ಕಾರಣಕ್ಕೆ ಯುವತಿಯ ಮೇಲೆ  ಪ್ರೇಮಿಯೊಬ್ಬ ಹಾಡುಹಗಲೆ ಆಸಿಡ್ ದಾಳಿ ಮಾಡಿರುವ ಪ್ರಕರಣ ಏಪ್ರಿಲ್‌ 28ರಂದು ನಡೆದಿತ್ತು. ಸುಂಕದಕಟ್ಟೆಯ ಮುತ್ತೂಟ್ ಫಿನ್ ಕಾರ್ಪ್ ಬಳಿ ಈ ದುಷ್ಕೃತ್ಯ ನಡೆದಿತ್ತು.

23 ವರ್ಷದ ಯುವತಿ ಮೇಲೆ ಸೈಕೋ ಪ್ರೇಮಿ ನಾಗೇಶ್ ಎಂಬಾತ ಆ್ಯಸಿಡ್ ದಾಳಿ ಮಾಡಿದ್ದ. ಆರೋಪಿಯನ್ನು ಹುಡುಕುತ್ತಿದ್ದ ಬೆಂಗಳೂರು ಪೊಲೀಸರು ಇದೀಗ ಆತನನ್ನು ಬಂಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ಮೊಬೈಲ್, ಎಟಿಎಂ ಏನನ್ನು ಬಳಸದ ನಾಗೇಶನನ್ನು  ಹಿಡಿಯುವುದು ಪೊಲೀಸರಿಗೆ ಕಷ್ಟಕರವಾಗಿತ್ತು. ತಮಿಳುನಾಡಿನ ತಿರುವಣ್ಣಮಲೈನಲ್ಲಿ ಸ್ವಾಮಿ ವೇಷದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ನಾಗೇಶ್ ನನ್ನು ಆತನ ಮುಖ ಚಹರೆಯನ್ನು ಗುರುತಿಸಿ ಕಾಮಾಕ್ಷಿಪಾಳ್ಯದ ಪೊಲೀಸರು ಇಂದು ಬಂಧಿಸಿದ್ದಾರೆ.

ಘಟನೆ ಹಿನ್ನೆಲೆ: ಏಳು ವರ್ಷಗಳಿಂದ ಪ್ರೀತಿಸುವಂತೆ, ಮದುವೆಯಾಗುವಂತೆ ನಾಗೇಶ್‌ ಪೀಡಿಸುತ್ತಿದ್ದ. ತನ್ನನ್ನು ಮದುವೆಯಾಗುವಂತೆ ಆತ ಕೇಳಿದಾಗ, ಇಬ್ಬರ ನಡುವೆ ಜಗಳವಾಗಿದೆ. ಹುಡುಗಿ ಸಾಧ್ಯವೇ ಇಲ್ಲವೆಂದು ಹೇಳಿದ್ದಾಳೆ. ಇದಾದ ನಂತರ ಏಪ್ರಿಲ್ 28ರಂದು ಮುಂಜಾನೆ ನಾಗೇಶ್‌ ಆಸಿಡ್‌ ದಾಳಿ ಮಾಡಿದ.

“ಯುವತಿ ಮುತ್ತೂಟ್ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಅಂದು ಬೆಳಗ್ಗೆ 8.30ರ ಸುಮಾರಿಗೆ ಯುವತಿ ತಂದೆ ಬೈಕ್ ನಲ್ಲಿ ಕರೆದುಕೊಂಡು ಬಂದು ಡ್ರಾಪ್ ಮಾಡಿ ಹೋಗಿದ್ದರು. ಅಣ್ಣ ಎಂದ ಕಾರಣಕ್ಕೆ ಕೋಪಗೊಂಡು ಆಕೆಯ ಮೇಲೆ  ಪೂರ್ವ ಯೋಜಿತವಾಗಿ ಯುವತಿ ಮೇಲೆ ಕೆಲವೇ ಕ್ಷಣದಲ್ಲಿ ನಾಗೇಶ್ ಆಸಿಡ್ ಎರಚಿದ್ದಾನೆ.

Donate Janashakthi Media

Leave a Reply

Your email address will not be published. Required fields are marked *