ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ : ಅಧಿಕಾರಿಗಳ ವರ್ಗಾವಣೆಗೆ ಮುಂದಾದ ಯೋಗಿ ಸರ್ಕಾರ್‌

ಉತ್ತರ ಪ್ರದೇಶ : ಸಿಎಂ ಯೋಗಿ ಆದಿತ್ಯನಾಥ್​ ಅವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗಾದ ಭಾರೀ ಹಿನ್ನಡೆಯಿಂದ ಚಿಂತಾಕ್ರಾಂತರಾಗಿದ್ದು,  ಸರ್ಕಾರದ ಮಟ್ಟದಲ್ಲಿ ಭಾರಿ ಬದಲಾವಣೆ ತರಲು ಕಾರ್ಯಪ್ರವೃತ್ತರಾಗಿದ್ದಾರೆ. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಮಾಡಿದ ಆರೋಪವನ್ನು ಹೊರಸಿ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದ್ದಾರೆ.  ಎರಡು ದಿನಗಳ ಹಿಂದೆ ಹಲವು ಜಿಲ್ಲೆಗಳ ಡಿಎಂಗಳನ್ನು ಬದಲಾವಣೆ ಮಾಡಿದ ಯೋಗಿ ಸರ್ಕಾರ ಇದೀಗ ಮತ್ತೆ ಗುರುವಾರ ಮಧ್ಯರಾತ್ರಿ ವರ್ಗಾವಣೆ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಹಲವು ಪಿಸಿಎಸ್​ ಅಧಿಕಾರಿಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ವರ್ಗಾವಣೆ ಮಾಡಲಾಗಿದೆ. ಲೋಕಸಭಾ

12 ಭಾರತೀಯ ಆಡಳಿತ ಸೇವೆ (ಐಎಎಸ್​) ಅಧಿಕಾರಿಗಳು ಹಾಗೂ 8 ಭಾರತೀಯ ಪೊಲೀಸ್​ ಸೇವೆ (ಐಪಿಎಸ್​) ಅಧಿಕಾರಿಗಳನ್ನು ಯುಪಿ ಸರ್ಕಾರ ಮಂಗಳವಾರ ವರ್ಗಾವಣೆ ಮಾಡಿದೆ. ಸರ್ಕಾರ ಮಟ್ಟದಲ್ಲಿ ಪ್ರಮುಖ ಬದಲಾವಣೆಯ ಭಾಗವಾಗಿ ಸಿಎಂ ಯೋಗಿ ಆದಿತ್ಯನಾಥ್​ ಕೆಲವು ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಆ ನಿಟ್ಟಿನಲ್ಲಿ ಹಲವಾರು ಜಿಲ್ಲಾ ಮ್ಯಾಜಿಸ್ಟ್ರೇಟ್​ಗಳು, ಪೊಲೀಸ್​ ವರಿಷ್ಠಾಧಿಕಾರಿಗಳು(ಎಸ್​ಪಿ) ಮತ್ತು ಹಿರಿಯ ಪೊಲೀಸ್​ ವರಿಷ್ಠಾಧಿಕಾರಿಗಳನ್ನು (ಎಸ್​ಎಸ್​ಪಿ) ಗಳನ್ನು ವರ್ಗಾವಣೆ ಮಾಡಿತ್ತು. ಇದೀಗ ಗುರುವಾರ ಮಧ್ಯರಾತ್ರಿ ನೇಮಕಾತಿ ಇಲಾಖೆಯಿಂದ ಎರಡು ಜಿಲ್ಲೆಗಳ ಡಿಎಂ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದ್ದು, ಅದರಲ್ಲಿ ಬಲರಾಂಪುರ ಮತ್ತು ಸಿದ್ಧಾರ್ಥನಗರ ಜಿಲ್ಲೆಗಳ ಡಿಎಂಗಳನ್ನು ಬದಲಾವಣೆ ಮಾಡಲಾಗಿದೆ. ಲೋಕಸಭಾ ಆದಿತ್ಯನಾಥ್

ಅದಲ್ಲದೇ, ವೈದ್ಯಕೀಯ ಆರೋಗ್ಯ ಇಲಾಖೆಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿ ರಾಜಮಣಿ ಆರ್. ಅವರನ್ನು ಸಿದ್ಧಾರ್ಥನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನೇಮಕ ಮಾಡಿ ವರ್ಗಾವಣೆ ಮಾಡಲಾಗಿದೆ. ಇಲ್ಲಿಯವರೆಗೆ ಸಿದ್ಧಾರ್ಥನಗರದ ಡಿಎಂ ಉಸ್ತುವಾರಿ ವಹಿಸಿದ್ದ ಪವನ್ ಅಗರ್ವಾಲ್ ಅವರನ್ನು ಬಲರಾಂಪುರ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನೇಮಕ ಮಾಡಿ ವರ್ಗಾವಣೆ ಮಾಡಲಾಗಿದೆ. ಕಳೆದ ಎರಡು ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ 14 ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಇದನ್ನು ಓದಿ : ಬಾಡಿಗೆ ಮೂಲಸೌಕರ್ಯ ಯೋಜನೆಗಳಲ್ಲಿ ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯದ ವಿರುದ್ಧ‌ ಮೋದಿ ಸರ್ಕಾರಕ್ಕೆ ತರಾಟೆ‌

ಮೂಲಗಳ ಪ್ರಕಾರ, ಯುಪಿಯ 60ಕ್ಕೂ ಹೆಚ್ಚು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಬದಲಾಗಲಿದ್ದಾರೆ. ಒಟ್ಟು 75 ಜಿಲ್ಲೆಗಳಿದ್ದು, ಇದುವರೆಗೆ 14 ಜಿಲ್ಲೆಗಳ ಡಿಎಂಗಳು ಬದಲಾಗಿದ್ದಾರೆ. ಉಳಿದ 46 ಜಿಲ್ಲೆಗಳ ಪಟ್ಟಿಯನ್ನು ಯೋಗಿ ಸರ್ಕಾರ ಸಿದ್ಧಪಡಿಸಿದೆ. ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಮನದಲ್ಲಿ ಆತಂಕ ಹೆಚ್ಚಿದೆ. ಈ ಬಾರಿಯ ಯುಪಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎಲ್ಲೆಲ್ಲಿ ಸೋತಿದೆಯೋ ಆ ಜಿಲ್ಲೆಗಳ ಅಧಿಕಾರಿಗಳಿಗೆ ಶಿಕ್ಷೆಯಾಗುವುದು ಖಚಿತ ಎಂದು ಹೇಳಲಾಗುತ್ತಿದೆ.ಉತ್ತರ

ಒಂದೊಂದಾಗಿ ಪಟ್ಟಿ ಬಿಡುಗಡೆ: ಸಿದ್ಧಗೊಂಡಿರುವ ಪಟ್ಟಿ ಒಂದೊಂದಾಗಿ ಬಿಡುಗಡೆಯಾಗಲಿದೆ. ಇದಾದ ನಂತರ ಜುಲೈ ಮಧ್ಯದಿಂದ ಜಿಲ್ಲೆಗಳ ವ್ಯವಸ್ಥೆ ಬದಲಾಗಲಿದೆ. ಲೋಕಸಭೆ ಚುನಾವಣೆಯ ನಂತರ ಮೊದಲ ಬಾರಿಗೆ ಜಿಲ್ಲಾಧಿಕಾರಿಗಳ ಪ್ರಮುಖ ವರ್ಗಾವಣೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಮೊರಾದಾಬಾದ್‌ ಜಿಲ್ಲಾ ಮ್ಯಾಜಿಸ್ಟ್ರೇಟ್ ಮನ್ವೇಂದ್ರ ಸಿಂಗ್ ಅವರು ಇದುವರೆಗೆ ಸರ್ಕಾರಕ್ಕೆ ಅಚ್ಚುಮೆಚ್ಚಾಗಿದ್ದರು. ಆದರೆ ಸಂಭಾಲ್ ಮತ್ತು ಮೊರಾದಾಬಾದ್ ಎರಡೂ ಸ್ಥಾನಗಳಲ್ಲಿ ಸೋಲಿನ ನಂತರ ಅವರಿಗೆ ಸೈಡ್ ಲೈನ್ ಪೋಸ್ಟಿಂಗ್ ನೀಡಲಾಗಿದೆ.ಆದಿತ್ಯನಾಥ್

ಮದನ್ ಸಿಂಗ್​ಗೆ ಪಾಲಿಕೆ ಆಯುಕ್ತರ ಹೆಚ್ಚುವರಿ ಹೊಣೆ: ಐಎಎಸ್ ಅಧಿಕಾರಿ ಮದನ್ ಸಿಂಗ್ ಅವರಿಗೆ ಕಾನ್ಪುರ ಮುನ್ಸಿಪಲ್ ಕಮಿಷನರ್ ಆಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಕಾನ್ಪುರದ ಮುನ್ಸಿಪಲ್ ಕಮಿಷನರ್, ಐಎಎಸ್ ಶಿವಶರಣಪ್ಪ ಜಿಎನ್ ಅವರನ್ನು ಚಿತ್ರಕೂಟದ ಡಿಎಂಆಗಿ ವರ್ಗಾವಣೆ ಮಾಡಲಾಗಿದೆ. ಖಾಲಿಯಿರುವ ಈ ಹುದ್ದೆಗೆ, 3 ನೇರ ನೇಮಕಾತಿ ಮತ್ತು 2 IAS ಅಧಿಕಾರಿಗಳು ಈ ಹುದ್ದೆಯನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ವರ್ಗಾವಣೆ ಹಿಂದೆ ಬಿಜೆಪಿ ಸೋಲಿನ ಅಂಶ: ಯುಪಿಯಲ್ಲಿ ಬಿಜೆಪಿ ಸೋಲಿನ ಅಂಶವೂ ಈ ವರ್ಗಾವಣೆಗೆ ಕಾರಣ ಎನ್ನಲಾಗುತ್ತಿದೆ. ಬಿಜೆಪಿ ಸೋತಿರುವ ಕ್ಷೇತ್ರಗಳಲ್ಲಿ ಜಿಲ್ಲಾಧಿಕಾರಿಗಳನ್ನು ಕೆಳಗಿಳಿಸುವ ಮೂಲಕ, ತಮ್ಮ ಪಕ್ಷದ ಕಾರ್ಯಕರ್ತರ ಮಾತಿಗೆ ಸರ್ಕಾರ ಬೆಲೆ ಕೊಟ್ಟಿದೆ. ಬಿಜೆಪಿ ಚುನಾವಣೆಯಲ್ಲಿ ಸೋತ ನಂತರ ಭಾರತೀಯ ಜನತಾ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸರಿಯಾಗಿ ಬೆಂಬಲ ನೀಡಿಲ್ಲ ಎಂದು ನಿರಂತರವಾಗಿ ದೂರುತ್ತಿದ್ದಾರೆ. ನಾಯಕರ ಬಗ್ಗೆ ಅಧಿಕಾರಿಗಳ ನಡವಳಿಕೆ ಕೆಟ್ಟದ್ದಾಗಿತ್ತು. ಆದ್ದರಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಪಕ್ಷದವರ ಮಾತನ್ನು ಕೇಳಿ ಅಧಿಕಾರಿಗಳ ವರ್ಗಾವಣೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.ಆದಿತ್ಯನಾಥ್

ಇದನ್ನು ನೋಡಿ : ಅಕಾಡೆಮಿಗಳ ಮೇಲೆ ರಾಜಕಾರಣದ ಕರಿ ನೆರಳು! Janashakthi Media

Donate Janashakthi Media

Leave a Reply

Your email address will not be published. Required fields are marked *