ಯೋಧನ ತಾಯಿ ಈರಮ್ಮ ಹತ್ಯೆ ಖಂಡಿಸಿ ಸಿಪಿಐ(ಎಂ) ಪ್ರತಿಭಟನೆ

ಲಿಂಗಸೂಗುರು: ನಿಲೋಗಲ್ ಗ್ರಾಮದಲ್ಲಿ ದೇಶ ಕಾಯುವ ಯೋಧನ ತಾಯಿಯನ್ನು ಕೊಲೆ ಮಾಡಿದ ಬಿಜೆಪಿ ಮುಖಂಡ ಶರಣಪ್ಪಗೌಡನನ್ನು ಬಂಧಿಸಬೇಕೆಂದು ಒತ್ತಾಯಿಸಿ ಇಂದು(ಫೆ.22) ಲಿಂಗಸ್ಗೂರಿನಲ್ಲಿರುವ ಪೊಲೀಸ್ ಠಾಣೆ ಮುಂದೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪಕ್ಷದ ತಾಲೂಕ ಕಾರ್ಯದರ್ಶಿ ರಮೇಶ ವೀರಾಪೂರು, ತಾಲೂಕು ಸಮಿತಿ ಸದಸ್ಯರಾದ ಮಹ್ಮದ್ ಹನೀಫ್, ಆಂಜನೇಯ ನಾಗಲಾಪೂರು, ಹತ್ಯಗೀಡಾದ ಈರಮ್ಮ ಅವರ ಮಗ ಯೋಧ ಅಮರೇಶ ನಿಲೋಗಲ್, ಬಾಬಾಜಾನಿ, ಜಾಫರ್ ಫೂಲವಾಲೆ, ನಿಂಗಪ್ಪ ಎಂ, ತಿಪ್ಪಣ್ಣ ನಿಲೋಗಲ್, ಹಸೇನ್ ಸಾಬ್, ವೆಂಕಟೇಶ, ಇಸ್ಮಾಯಿಲ್, ಅಲೀಮ್ ಪಾಷಾ, ಹೈದರ್ ಪಾಷಾ, ಮಣಿಸಿಂಗ್, ಶಬ್ಬೀರ್, ಹಸನ್, ರಮೇಶ ನಿಲೋಗಲ್, ಅಕ್ಬರ್ ಪಾಷಾ ಸೇರಿದಂತೆ ಮುಂತಾದವರು ಇದ್ದರು.

Donate Janashakthi Media

Leave a Reply

Your email address will not be published. Required fields are marked *