ಸರ್ವೋಚ್ಛ ನ್ಯಾಯಾಲದ ತೀರ್ಪಿನ ಬಳಿಕ ಶಬರಿಮಲೆ ವಿಚಾರ ಚರ್ಚೆ: ಪಿಣರಾಯಿ ವಿಜಯನ್‌

ಪಟ್ಟಾಂಬಿ:  ಶಬರಿಮಲೆ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಅದರ ಬಗ್ಗೆ ಏನನ್ನೂ ಹೇಳಲಾಗುವುದಿಲ್ಲ. ನಮ್ಮ ನಿಲುವು ಸ್ಪಷ್ಟವಾಗಿದೆ. ತೀರ್ಪು ಬಂದ ನಂತರ ಮತ್ತೇನಾದರೂ ಸಮಸ್ಯೆಗಳು ಸೃಷ್ಟಿಯಾದರೆ, ಸಮಾಜದ ಪ್ರತಿಯೊಂದು ವರ್ಗದವರೊಂದಿಗೂ ಚರ್ಚಿಸುತ್ತೇವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದರು.

ಕೇರಳದ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ(ಎಲ್‌ಡಿಎಫ್)‌ ಅಭ್ಯರ್ಥಿಗಳ ಪರವಾಗಿ ಚುನಾವಣೆ ಪ್ರಚಾರ ಆರಂಭಿಸಿದ ಪಿಣರಾಯಿ ವಿಜಯನ್‌ ಅವರು ಶಬರಿಮಲೆ ದೇಗುಲದ ವಿಚಾರವಾಗಿ ಎಲ್‌ಡಿಎಫ್‌ ಗುರಿಯಾಗಿಸಿದ ವಿರೋಧ ಪಕ್ಷಗಳಿಗೆ ತಕ್ಕ ಉತ್ತರದರು. ಪಾಲಕ್ಕಾಡ್‌ ಜಿಲ್ಲೆಯ ಪಟ್ಟಂಬಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಿಣರಾಯಿ ವಿಜಯನ್‌ ಅವರು ಬೆಟ್ಟದ ದೇಗುಲದಲ್ಲಿ ಎಲ್ಲವೂ ಸುಗಮವಾಗಿ ನಡೆಯುತ್ತಿದೆ. ಪಕ್ಷವು ಈಗ ಅದರ ಬಗ್ಗೆ ಏಕೆ ಚಿಂತಿಸಬೇಕು ಎಂದರು.

ಶಬರಿಮಲೆ ಗುಡ್ಡಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶಿಸಲು ಸುಪ್ರೀಂ ಕೋರ್ಟ್‌ ಆದೇಶವನ್ನು ರಾಜ್ಯ ಸರಕಾರ ನಿರ್ಧರಿಸಿತು. ಆದರೆ ಬಿಜೆಪಿ ಮತ್ತು ಬಲಪಂಥೀಯ ಸಂಘಟನೆ ಒಂದು ಸಣ್ಣ ಗುಂಪು ಇದನ್ನು ಮಹಿಳೆಯರು ಶಬರಿಮಲೆಗೆ ಮಹಿಳೆಯರು ಪ್ರವೇಶಿಸಕೂಡದೆಂದು ದಾಂಧಲೆ ನಡೆಸಿ ಹಿಂಸಾಚಾರವನ್ನು ನಡೆಸಿದರು. ಎಂದು ಅಂದಿನ ಘಟನೆಯನ್ನು ನೆನಪಿಸಿದರು.

ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ನೀಡಲಿರುವ ಅಂತಿಮ ತೀರ್ಪು ಪ್ರಕಟದ ನಂತರ ಮಾತನಾಡೋಣ ಎಂದರು.

ಕಳೆದ ಬಾರಿಗಿಂತ ಇನ್ನೂ ಹೆಚ್ಚಿನ ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ. ವಿಧಾನಸಭೆಯಲ್ಲಿ ಎಲ್‌ಡಿಎಫ್‌ ಅಧಿಕಾರ ನಡೆಸಲಿದೆ. ಅದರಲ್ಲಿ ಸಂದೇಹವೇನಿಲ್ಲ ಎಂದರು.

ಕಳೆದ ಬಾರಿ ಯುಡಿಎಫ್‌ ಪಾಲುದಾರರಾದ ಕಾಂಗ್ರೆಸ್‌ ಮತ್ತು ಐಯುಎಂಎಲ್‌ ಪಕ್ಷದೊಂದಗಿನ ಹೊಂದಾಣಿಕೆಗಳು ನಡೆದಿವೆ ಎಂದು ಕೇರಳದ ಬಿಜೆಪಿಯ ಓ ರಾಜಗೋಪಾಲ್‌ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು ಪಿಣರಾಯಿ ವಿಜಯನ್‌.

ʻಕೋ-ಲೀ-ಬಿʼ ಬಗ್ಗೆ ಪ್ರಸ್ತಾಪಿಸುತ್ತಾ, ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷವು ಒಳಮೈತ್ರಿ ಮಾಡಿಕೊಂಡಿರುವುದು ಈಗ ಜಗಜ್ಜಾಹೀರಾಗಿದೆ. ಜನಪರವಾದ ಎಡ ಸರಕಾರವನ್ನು ದುರ್ಬಲಗೊಳಿಸಲು ಈ ಪಕ್ಷಗಳು ಕೈಜೋಡಿಸುತ್ತಿವೆ. ಕೇರಳದಲ್ಲಿ ಮಾತ್ರ ʻಕೋ-ಲೀ-ಬಿʼ ಮೈತ್ರಿಯಾಗಿದೆ. ಎಡಪಂಥೀಯರಿಗೆ ಕೋಮು ಪಕ್ಷಗಳ ಬೆಂಬಲದ ಅಗತ್ಯವಿಲ್ಲ. ದೇಶದಲ್ಲಿ ಜಾತ್ಯತೀತತೆಯನ್ನು ರಕ್ಷಿಸಲು ಬಯಸುವವರು ಎಚ್ಚರಿಕೆಯಿಂದ ಇರಬೇಕು.

ಈ ಹಿಂದೆ ಈ ಪಕ್ಷಗಳೊಂದಿಗಿನ ಹೊಂದಾಣಿಕೆ ಮುಕ್ತವಾಗಿರಲಿಲ್ಲ. ಆದರೆ ಈಗ ಕೆಲವು ಯುಡಿಎಫ್‌ ಅಭ್ಯರ್ಥಿಗಳೇ ಬಿಜೆಪಿಗೆ ಕೊನೆಯ ಬಾರಿ ಮತ ಚಲಾಯಿಸಲಾಗಿತ್ತು ಎಂಬುದು ಬಹಿರಂಗ ಪಡಿಸಿದ್ದಾರೆ. ಈಗ ಇದು ರಹಸ್ಯ ವ್ಯವಹಾರವೇನಲ್ಲ. ಆದರೆ ಮುಕ್ತ ಹೊಂದಾಣಿಕೆಯಾಗಿದೆ, ಜನರೇ ಉತ್ತರ ಕೊಡುತ್ತಾರೆ  ಎಂದು ಅವರು ಹೇಳಿದರು.

ಪಲರಿವಟ್ಟಂ ಯೋಜನೆಯ ಹೊರತಾಗಿ ಕೇರಳದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ರಾಜ್ಯ ಸರ್ಕಾರ ಸಹಕಾರ ನೀಡಿಲ್ಲ ಎಂದು ಪಾಲಕ್ಕಾಡ್ ಬಿಜೆಪಿ ಅಭ್ಯರ್ಥಿ ಇ.ಶ್ರೀಧರನ್ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಗೆ ಸೇರುವ ತಜ್ಞರು ಸಹ ಪಕ್ಷದ ಗುಣಲಕ್ಷಣಗಳನ್ನು ತೋರಿಸುತ್ತಿದ್ದಾರೆ.

ಕೇಂದ್ರದಲ್ಲಿಯೂ ಬಿಜೆಪಿ ಅಧಿಕಾರದಲ್ಲಿದೆ. ಅವರೂ ಸಹ ಒಂದು ನಿರ್ದಿಷ್ಟ ಹಂತವನ್ನು ತಲುಪಿರಬಹುದು ಅಲ್ಲಿ ಅವರು ಏನನ್ನೂ ಹೇಳಲಾಗದೆ ಹೀಗೆ ಹೇಳಿದ್ದಾರೆ. ನೂರಾರು ಸಾರ್ವಜನಿಕ ವಲಯದ ಉದ್ಯಮಗಳನ್ನು ಮಾರಾಟ ಮಾಡುವ ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರವನ್ನು ಉಲ್ಲೇಖಿಸಿದ ಪಿಣರಾಯಿ ವಿಜಯನ್‌ ಅವರು ಕಾಂಗ್ರೆಸ್ ಮತ್ತು ಬಿಜೆಪಿಯ ಮೇಲೆ ದಾಳಿ ನಡೆಸಿ ಎರಡೂ ಪಕ್ಷಗಳು ಜಾಗತೀಕರಣ ಮತ್ತು ಖಾಸಗೀಕರಣದ ನೀತಿಯನ್ನು ಜಾರಿ ಮಾಡುವವರು.

ಕಾಂಗ್ರೆಸ್ ಈ ನೀತಿಯ ಪ್ರತಿಪಾದಕ ಮತ್ತು ಕಾಂಗ್ರೆಸ್ ಮುಖಂಡ ಮತ್ತು ತಿರುವನಂತಪುರ ಸಂಸದ ಶಶಿ ತರೂರ್ ಅವರು ರಾಜ್ಯ ರಾಜಧಾನಿಯಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್‌ಗೆ ಹಸ್ತಾಂತರಿಸುವುದನ್ನು ಬೆಂಬಲಿಸಿದ್ದಾರೆ.

ಈಗ ಬಿಜೆಪಿ ಆಳ್ವಿಕೆಯ ಕೇಂದ್ರ ಸರ್ಕಾರವು ದೇಶದಲ್ಲಿ ಸುಮಾರು ನೂರು ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಅವರು (ಕಾಂಗ್ರೆಸ್ ಅಥವಾ ಯುಡಿಎಫ್) ಈ ಬಗ್ಗೆ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆಯೇ? ಇಲ್ಲ. ಏಕೆಂದರೆ ಈ ನೀತಿಯ ನಿಜವಾದ ಪ್ರತಿಪಾದಕರು ಕಾಂಗ್ರೆಸ್ ಅಲ್ಲವೇ ಎಂದರು.

ಕೇರಳ ಜಾಗತೀಕರಣ ನೀತಿಗಳನ್ನು ವಿರೋಧಿಸುತ್ತಿದೆ ಮತ್ತು ಪರ್ಯಾಯ ಮಾದರಿಯನ್ನು ಜಾರಿಗೆ ತರುತ್ತಿದೆ. ರೈತರು ಮತ್ತು ಇತರರು ಸೇರಿದಂತೆ ಜಾಗತೀಕರಣ ಮತ್ತು ಖಾಸಗೀಕರಣವನ್ನು ವಿರೋಧಿಸುವವರು ಕೇರಳದ ಕಡೆಗೆ ಭರವಸೆಯೊಂದಿಗೆ ನೋಡುತ್ತಿದ್ದಾರೆ. ನಾವು ಪರ್ಯಾಯ ನೀತಿಯನ್ನು ಮುಂದಿಟ್ಟಿದ್ದೇವೆ ಎಂದು ಅವರು ಹೇಳಿದರು.

ರಾಜ್ಯದ ಜನತೆ ಜಾತ್ಯತೀತತೆಯನ್ನು ರಕ್ಷಿಸಲು ಎಡ ಸರ್ಕಾರವು ಕೈಗೊಂಡಿರುವ ಕ್ರಮಗಳನ್ನು ತೀವ್ರವಾಗಿ ಗಮನಿಸಿದ್ದಾರೆ. ಹಾಗೆಯೇ ಕೇರಳ ಮಟ್ಟದಲ್ಲಿ ಮಾತ್ರ ಕಾಂಗ್ರೆಸ್, ಯುಡಿಎಫ್ ಮತ್ತು ಬಿಜೆಪಿ ಪಕ್ಷಗಳು ಎಡ ಚಳವಳಿಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ.

ಜಾತ್ಯತೀತ ಮೌಲ್ಯಗಳು ಮತ್ತು ದೇಶದ ಸಂವಿಧಾನದ ಮೇಲೆ ದಾಳಿ ಮಾಡುವ ಪ್ರಯತ್ನಗಳಾಗುತ್ತಿವೆ. ಕೋಮುವಾದದ ವಿರುದ್ಧ ಬಲವಾದ ನಿಲುವನ್ನು ತೆಗೆದುಕೊಳ್ಳುವ ಮೂಲಕ ಮಾತ್ರ ಜಾತ್ಯತೀತತೆಯನ್ನು ರಕ್ಷಿಸಬಹುದು ಮತ್ತು ಎಡಪಕ್ಷಗಳು ಮಾತ್ರ.

ಜಾತ್ಯತೀತತೆ ಮತ್ತು ಈ ದೇಶದ ಸಂವಿಧಾನವನ್ನು ನಾಶಮಾಡುವ ವಿರೋಧಿ ಶಕ್ತಿಗಳನ್ನು ವಿರೋಧಿಸುತ್ತಿದ್ದೇವೆ.

ಪಿಣರಾಯಿ ವಿಜಯನ್‌ ಅವರು ಏಪ್ರಿಲ್ 6 ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *