“ಚೇ”ತನ ಮೈಗೂಡಿಸಿಕೊಳ್ಳಬೇಕು – ಎ ಕರುಣಾನಿಧಿ

ಹೊಸಪೇಟೆ : ಹೋರಾಟಗಾರರು ಚೆಗುವಾರ ಅವರ ಕ್ರಾಂತಿಕಾರಿ ಚೇತನ ಮೈಗೂಡಿಸಿಕೊಂಡು ಚಳುವಳಿಯನ್ನು ನಡೆಸಿದಾಗ ಮಾತ್ರವೇ ಆಳುವ ವರ್ಗ ಮತ್ತು ಅದರ ಸರ್ಕಾರಗಳನ್ನು ಹಿಮ್ಮೆಟ್ಟಿಸಲು ಸಾಧ್ಯವಾಗುತ್ತದೆ ಎಂದು ಜನಪರ ಗಾಯಕ ಎ ಕರುಣಾನಿಧಿ ತಿಳಿಸಿದರು.

ಹೊಸಪೇಟೆ  ನಗರದ ಶ್ರಮಿಕ ಭವನದಲ್ಲಿ ಹಮ್ಮಿಕೊಂಡಿದ್ದ ಚೆಗುವಾರ ಅವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಚೆಗುವಾರ ಕ್ಯೂಬಾ ಕ್ರಾಂತಿಕಾರಿ ಹೋರಾಟದಲ್ಲಿ ಫಿಡೆಲ್ ಕ್ಯಾಸ್ಟ್ರೋ ಅವರ ಅತ್ಯಂತ ವಿಶ್ವಾಸಾರ್ಹ ಸಂಗಾತಿಯಾಗಿದ್ದರು, ಅಲ್ಲದೇ ಗೆರಿಲ್ಲಾ ಹೋರಾಟದ ರೂವಾರಿಯಾಗಿದ್ದರು. ಕಳೆದ ಚುನಾವಣೆಯಲ್ಲಿ ಜನರು ಕ್ಷೇತ್ರದಲ್ಲಿ ಗೆರಿಲ್ಲಾ ಮಾದರಿಯಲ್ಲಿ ಹೋರಾಟ ನಡೆಸಿದ್ದರು. ಮುಂದಿನ ದಿನಗಳಲ್ಲಿ ಈ ಹೋರಾಟ ಮುಂದುವರೆಯುತ್ತದೆ, ಜನರು ಇನ್ನಷ್ಟೂ ಸಜ್ಜಾಗಬೇಕಿದೆ ಎಂದರು.

ಇದ್ದನ್ನೂ ಓದಿ:ಶ್ರಮಿಕ ವರ್ಗದ ಆದ್ಯತೆ ಆಯ್ಕೆ ಹಾಗೂ ಅನಿವಾರ್ಯತೆಗಳು

ಸಿಐಟಿಯು ರಾಜ್ಯ ಮುಖಂಡ ಆರ್ ಭಾಸ್ಕರ್ ರೆಡ್ಡಿ ಮಾತನಾಡಿ ಚೆಗುವಾರ ಅವರ ಹೋರಾಟದಿಂದ ಕ್ಯೂಬಾದಲ್ಲಿ ಸಾರ್ವಜನಿಕ ಆರೋಗ್ಯ ಜಗತ್ತಿನಲ್ಲಿ ಮುಂದಿದೆ ಅಂದರಲ್ಲದೇ ಕ್ಯೂಬಾದಲ್ಲಿ ಸರ್ವಾಧಿಕಾರಿ ಬಾಟಿಸ್ಟಾ ಸರ್ಕಾರವನ್ನು ಹಿಮ್ಮೆಟ್ಟಿಸಿದಂತೆ ಭಾರತದಲ್ಲಿ ಕೋಮುವಾದಿ ಕೇಂದ್ರ ಸರ್ಕಾರವನ್ನು ಹಿಮ್ಮೆಟ್ಟಿಸಲು ಮುಂದಾಗಬೇಕು ಎಂದರು.

ಅಂಗನವಾಡಿ ಜಿಲ್ಲಾ ಮುಖಂಡರಾದ ಕೆ ನಾಗರತ್ನ ಮಾತನಾಡಿ ಕ್ಯೂಬಾ ಅಮೇರಿಕಾದಿಂದ ಕೇವಲ 90 ಕಿಮೀ ದೂರದಲ್ಲಿದರೂ ಅದರ ವಿರುದ್ಧ ಸೆಟೆದು ನಿಂತಿರುವುದು ಆ ದೇಶದ ಜನರ ಕ್ರಾಂತಿಕಾರಿ ಧೋರಣೆಯಿಂದ ಮಾತ್ರ ಎಂದರು. ಕಾರ್ಯಕ್ರಮದಲ್ಲಿ ಮುಖಂಡರಾದ ಎಂ ಗೋಪಾಲ್, ವಿ ಸ್ವಾಮಿ, ಯಲ್ಲಾಲಿಂಗ, ಸ್ವಪ್ನ, ಶಕುಂತಲಾ, ರಮೇಶ್, ಯಲ್ಲಮ್ಮ ಮೊದಲಾದವರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *