ವಿಕ್ಟೋರಿಯಾ ಆಸ್ಪತ್ರೆಯ ವೇತನ ಕೇಳಿದ್ದಿದ್ದಕ್ಕಾಗಿ 56 ಕಾರ್ಮಿಕ ವಜಾ; ಸಂಬಳಕ್ಕಾಗಿ ಒತ್ತಾಯಿಸಿದ್ದಕ್ಕೆ ಕಾರ್ಮಿಕರ ಬಂಧನ

ಬೆಂಗಳೂರು : ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೇತನ ಕೇಳಿದ್ದಿದ್ದಕ್ಕಾಗಿ 56 ಕಾರ್ಮಿಕರನ್ನು ಕೆಲಸದಿಂದ ತೆಗೆದು ವಜಾಗೊಳಿಸಿದೆ. ಕೆಲಸ ಮತ್ತು ಸಂಬಳಕ್ಕಾಗಿ ಒತ್ತಾಯ ಮಾಡಿದ್ದಕ್ಕಾಗಿ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ.

ಮೇ 8, 2024 ರಂದು, BMCRI (ವಿಕ್ಟೋರಿಯಾ ಆಸ್ಪತ್ರೆ) ಯಲ್ಲಿ ವಾರ್ಡ್ ಅಟೆಂಡರ್‌ಗಳಾಗಿ ಕೆಲಸ ಮಾಡುತ್ತಿರುವ 56 ಕಾರ್ಮಿಕರು ಮಾರ್ಚ್ ಮತ್ತು ಏಪ್ರಿಲ್‌ನ ವೇತನಕ್ಕಾಗಿ ಒತ್ತಾಯ ಮಾಡಿದ್ದಕ್ಕಾಗಿ ಕಾನೂನು ಬಾಹಿರವಾಗಿ ಈ ಕಾರ್ಮಿಕರನ್ನು ವಜಾಗೊಳಿಸಲಾಗಿದೆ. ಈ ಕಾರ್ಮಿಕರಲ್ಲಿ ಬಹುಪಾಲು ಕಾರ್ಮಿಕರು ಮಹಿಳೆಯರಾಗಿದ್ದು ದಲಿತ ಮತ್ತು ತುಳತಕ್ಕೋಳಪ್ಪಟ್ಟ ಸಮುದಾಯಗಳಿಗೆ ಸೇರಿದವರು.

ಹೀಗಾಗಿ ಕರ್ನಾಟಕ ಜೆನರಲ್ ಲೇಬರ್ ಯೂನಿಯನ್ (ಎಐಸಿಸಿಟಿಯು) ಕಾರ್ಮಿಕರಿಗೆ ಕೂಡಲೇ ಕೆಲಸ ಮತ್ತು ವೇತನ ನೀಡಬೇಕು ಎಂದು ಒತ್ತಾಯಿಸಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದರು.

ಈ ಕಾರ್ಮಿಕರು ಕಳೆದ 10 ರಿಂದ 30 ವರ್ಷಗಳ ನಡುವೆ ಕೆಲಸ ಮಾಡುತ್ತಿದ್ದಾರೆ, ಆದರೆ ಅವರ ಹಕ್ಕುಗಳನ್ನು ನಿರಾಕರಿಸಲು ಗುತ್ತಿಗೆ ಕಾರ್ಮಿಕರು ಎಂದು ಕರೆಯುತ್ತಾರೆ, ಆದರೆ ವಾಸ್ತವವಾಗಿ ಅವರು ಕಾಯಂ ಕಾರ್ಮಿಕರು ಮಾಡುವ ಕೆಲಸವನ್ನೇ ಮಾಡುತ್ತಿದ್ದರೆ. ವಿಕ್ಟೋರಿಯಾಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಿದ ಈ ಕಾರ್ಮಿಕರು COVID-19 ಸಾಂಕ್ರಾಮಿಕದ ಸಮಯದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟಿರುವ ಕೋವಿಡ್ ವಿರುದ್ಧ ಹೋರಾಡಿದ ವೀರ ಯೋಧರಾಗಿದ್ದಾರೆ.

ಇದನ್ನು ಓದಿ : ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ರಾತ್ರಿ ವೇಳೆ ನೀರು ನಿಂತು ಟ್ರಾಫಿಕ್ ಜಾಮ್

ವಿಕ್ಟೋರಿಯಾ ಆಸ್ಪತ್ರೆಯ ಈ ಅಕ್ರಮವನ್ನು ಗಮನಿಸಿದ ಉಪ ಕಾರ್ಮಿಕ ಆಯುಕ್ತರು ಮೇ 10 ರಂದು ಕಾರ್ಮಿಕರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಆದರೆ, ಮೇ 10 ರಂದು ಕಾರ್ಮಿಕರು ವರದಿ ಮಾಡಿದಾಗ ಕಾರ್ಮಿಕರಿಗೆ ಕೆಲಸ ಮಾಡಲು ಅನುಮತಿ ನೀಡಲಿಲ್ಲ. ಕೆಲಸ ಕೇಳಲು ಕಾರ್ಮಿಕರು ಒಂದೆಡೆ ಸೇರಿದಾಗ, ಅವರನ್ನು ಪೊಲೀಸರು ಬಂಧಿಸಿದರು. ಎಐಸಿಸಿಟಿಯು ರಾಜ್ಯ ಕಾರ್ಯದರ್ಶಿ ಕಾಂ ಅಪ್ಪಣ್ಣ ಹಾಗೂ ಎಐಸಿಸಿಟಿಯು ಮುಖಂಡರಾದ ಕಾಂ ನಿರ್ಮಲಾ, ಪುಟ್ಟೇಗೌಡ, ಅಶೋಕ್, ಶರತ್, ರತ್ನಮ್ಮ, ಮೈತ್ರೇಯಿ ಸೇರಿದಂತೆ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಕಾರ್ಮಿಕರ ಹಕ್ಕುಗಳನ್ನು ಉಲ್ಲಂಘಿಸುವ ಕ್ರಮಗಳನ್ನು ಎಐಸಿಸಿಟಿಯು ಖಂಡಿಸಿದೆ.. ಕಾರ್ಮಿಕರನ್ನು ವಾಪಸ್ಸು ತೆಗೆದುಕೊಳ್ಳುವವರೆಗೆ ಮತ್ತು ಕೆಲಸವನ್ನು ಖಾತರಿಪಡಿಸುವವರೆಗೆ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಎಐಸಿಸಿಟಿಯು ಹೇಳಿದೆ.

ರಾಜ್ಯ ಸರ್ಕಾರ, ವಿಶೇಷವಾಗಿ ಕಾರ್ಮಿಕ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕೆಂದು ನಾವು ನಿರೀಕ್ಷಿಸುತ್ತೇವೆ ಎಂದು ಎಐಸಿಸಿಟಿಯು ಹೇಳಿದೆ.

ಇದನ್ನು ನೋಡಿ : ದ್ವೇಷದ ಜಾಹೀರಾತಿನ ಮೂಲಕ ನೀತಿ ಸಂಹಿತೆ ಉಲ್ಲಂಘಿಸುತ್ತಿರುವ ಬಿಜೆಪಿಯವರ ಮೇಲೆ ಕ್ರಮಕ್ಕೆ ಆಗ್ರಹJanashakthi Media

Donate Janashakthi Media

Leave a Reply

Your email address will not be published. Required fields are marked *