ರಾಮನಗರ: ವಚನ ಮಾತನ್ನು ನಾಚಿಸುವ ಕಾಲ ಇತ್ತು ಹಿಂದೆ ಈಗ ಮಾತೇ ವಚನವನ್ನು ನಾಚಿಸುವ ಕಾಲದಲ್ಲಿ ನಾವು ಇದ್ದೆವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ತಿಳಿಸಿದರು. ವಚನ
ರಾಮನಗರದ ಜಾನಪದ ಲೋಕದಲ್ಲಿ “ಶಾಂತಿ ಸೌಹಾರ್ದತೆ ಐಕ್ಯತೆಗಾಗಿ, ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ, ಸಾರ್ವಜನಿಕ ಶಿಕ್ಷಣ ಬಲವರ್ಧನೆಗೆ ಆಗ್ರಹಿಸಿ ನಡೆಯುತ್ತಿರುವ SFI ರಾಜ್ಯ ಅಧ್ಯಯನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದು ಶಿಕ್ಷಣ ಕ್ಷೇತ್ರ ಮಾತ್ರ ಬಿಕ್ಕಟ್ಟು ಎದುರಿಸುತ್ತಿಲ್ಲಾ ಇಡೀ ಜಗತ್ತು ಸಮಾಜ ಬಿಕ್ಕಟ್ಟು ಎದುರಿಸುತ್ತಿದೆ. ಮೋದಿಯವರು ದೇಶದ ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವನ್ನು ನಾಶ ಮಾಡಿದರೆ ಟ್ರಂಪ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯ ನಾಶ ಮಾಡಿದ್ದೆ ಇಂದಿನ ಜಾಗತಿಕ ಸಾಧನೆ ಆಗಿದೆ ಎಂದರು.
ಇಂದು ಶಿಕ್ಷಣ, ಉದ್ಯೋಗ, ಭಾಷೆ, ಸಂಸ್ಕೃತಿ ಎಲ್ಲವನ್ನೂ ಮಾರಾಟದ ಸರಕಾಗಿ ನೋಡಲಾಗುತ್ತಿದ್ದು ಇದರ ವಿರುದ್ಧ ಪ್ರಬಲ ಚಳುವಳಿಯನ್ನು ವಿದ್ಯಾರ್ಥಿಗಳು ಕಟ್ಟಬೇಕಿದೆ ಅದಕ್ಕೆ ಇಂತಹ ಅಧ್ಯಯನಗಳ ಅಗತ್ಯ ಇದೆ ಎಂದರು.
ಇದನ್ನು ಓದಿ :-ಕೊಡಗು| ಡೆತ್ ನೋಟ್ ಬರೆದು ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ವಚನ
ಕನ್ನಡ ಭಾಷೆ, ಉದ್ಯೋಗ ಎಲ್ಲವೂ ಉಳಿಯಬೇಕು ಎಂದರೆ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಅದಕ್ಕೆ ಸರೋಜಿನಿ ಮಹಿಷಿ ವರದಿಯನ್ನು ಜಾರಿ ಮಾಡಬೇಕು ಆದರೆ ಅದರ ಕುರಿತು ಯಾವ ಸರ್ಕಾರವು ಮಾತನಾಡಲ್ಲ. ಅದಕ್ಕೆ ವಚನ ಮಾತನ್ನು ನಾಚಿಸುವ ಕಾಲ ಹಿಂದೆ ಇತ್ತು ಆದರೆ ಇಂದು ಮಾತೇ ವಚನವನ್ನು ನಾಚಿಸುವ ಕಾಲದಲ್ಲಿ ನಾವಿದ್ದೇವೆ ಎಂದರು.
ಸರ್ಕಾರಿ ಶಾಲಗಳಿಗೆ ಪಟ್ಟಾವೇ ಇಲ್ಲದ ಶಾಲೆಗಳು ಸುಮಾರು 11 ಸಾವಿರ ಶಾಲೆಗಳಿವೆ. ಹಾಗೆ ಶಾಲೆಗಳಲ್ಲಿ 25 ಸಾವಿರ ಶಾಲೆಗಳನ್ನು ಮೂಲ ಸೌಕರ್ಯ ಇಲ್ಲದೆ ಮುಚ್ಚುವ ಸ್ಥಿತಿಯಲ್ಲಿವೆ ಇವುಗಳ ಬಗ್ಗೆ ಎಸ್ ಎಫ್ ಐ ಅದ್ಯಯನ ಮಾಡಿ ಹೋರಾಟ ರೂಪಿಸಿದರೆ ನಾನು ಜೊತೆಯಾಗಿ ನಿಲ್ಲುವೆ ಎಂದರು.
ಶೈಕ್ಷಣಿಕ ಬಿಕ್ಕಟ್ಟಿನ ನಡುವೆ ನಡೆಯುತ್ತಿವ ಈ ಅದ್ಯಯನ ಶಿಬಿರ ಹೊಸ ಚೈತನ್ಯ ನೀಡಿ, ನೀವು ಹೊಸ ಚಳುವಳಿ ಪ್ರಾರಂಭಿಸುವಿರೆಂಬ ಆಶಾ ಭಾವನೆ ನನಗಿದೆ ಎಂದರು.
ಪ್ರಾಸ್ತಾವಿಕವಾಗಿ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಟಿ.ಎಸ್.ವಿಜಯ್ ಕುಮಾರ್, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಡಾ.ಹಿ.ಚಿ.ಬೋರಲಿಂಗಯ್ಯ, ಪ್ರಾಧ್ಯಾಪ ರಾಜು ಗುಂಡಾಪುರ, ಸಿಐಟಿಯು ಜಿಲ್ಲಾಧ್ಯಕ್ಷ ರಾಘವೇಂದ್ರ ಬಿ.ಬಿ, ಮುಖಂಡರಾದ ಡಿ.ಚಂದ್ರಶೇಖರ್, ಕೆಪಿಆರ್ ಎಸ್ ಮುಖಂಡರಾದ ಸಣ್ಣ ರಂಗಯ್ಯ, ಎಸ್ಎಫ್ಐ ರಾಜ್ಯಾಧ್ಯಕ್ಷರಾದ ಶಿವಪ್ಪ ಎನ್. ಅಂಬ್ಲಿಕಲ್ ಮಾತನಾಡಿದರು.
ಇದನ್ನು ಓದಿ :-ಕಮಲ್ ಹಾಸನ್ ಸಿನಿಮಾಗಳನ್ನು ರಾಜ್ಯದಲ್ಲಿ ನಿಷೇಧಿಸುವಂತೆ ವಾಣಿಜ್ಯ ಮಂಡಳಿಗೆ ಪತ್ರ
ಸಮಾರಂಭದ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿಯ ಅಧ್ಯಕ್ಷರಾದ ಎನ್ ವೆಂಕಟಚಲಾಯ್ಯ ಅವರು ವಹಿಸಿದ್ದರು. ಎಸ್ ಎಫ್ ಐ ರಾಜ್ಯ ಉಪಾಧ್ಯಕ್ಷ ಗಣೇಶ ರಾಠೋಡ ಕಾರ್ಯಕ್ರಮವನ್ನು ನಿರೂಪಿಸಿದರು. ಸೋಮಶೇಖರ್ ಜಿ ಸ್ವಾಗತಿಸಿದರು, ಅರ್ಪಿತ ಗ್ರೇಸಿ ವಂದಿಸಿದರು. ಈ ಸಂದರ್ಭದಲ್ಲಿ ಎಸ್ಎಫ್ಐ ರಾಜ್ಯ ಮುಖಂಡರಾದ ಡಾ.ದೊಡ್ಡ ಬಸವರಾಜ್, ಬಸವರಾಜ್ ಎಸ್, ಸುಜಾತಾ ವೈ, ಚಂದ್ರು ರಾಠೋಡ, ಸುರೇಶಬಾಬು, ಅನಂತರಾಜ್, ವಿರೇಶ, ಇಮಾಮ, ವೆಂಕಟೇಶ, ಚಿರಾಗ್, ಜಯಸೂರ್ಯ, ಶಶಿಕುಮಾರ, ಪರಿವರ್ತನಾ, ಅರ್ಪಿತಾ ಸೇರಿದಂತೆ ವಿವಿಧ ಜಿಲ್ಲೆಗಳ 200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.