ಶಿವಮೊಗ್ಗ: ಆರ್ಥಿಕ ದುರ್ವ್ಯವಹಾರವನ್ನು ಅಧ್ಯಕ್ಷ ಮಹೇಶ್ ಜೋಶಿ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ನಡೆಸಿದ್ದು, ಆ ಕುರಿತ ತನಿಖೆಗೆ ಆಯೋಗ ರಚಿಸಬೇಕು. ಅವರನ್ನು ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಿ ಆಡಳಿತಾಧಿಕಾರಿ ನೇಮಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು ಜೂನ್ 7 ಶನಿವಾರ ಇಲ್ಲಿ ಕನ್ನಡ ನಾಡು- ನುಡಿ ಜಾಗೃತಿ ಸಮಿತಿಯಿಂದ ನಡೆದ ಕನ್ನಡಿಗರ ಜಾಗೃತಿ ಸಮಾವೇಶದಲ್ಲಿ ನಿರ್ಣಯಿಸಲಾಯಿತು.
‘ಕನ್ನಡ ಸಾಹಿತ್ಯ ಪರಿಷತ್ ಉಳಿಸಿ’ ಹೋರಾಟದ ಅಂಗವಾಗಿ ಆಯೋಜಿಸಿದ್ದ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ ಗೌಡ, ‘ನಮ್ಮ ಯಾವುದೇ ಆಕ್ಷೇಪಣೆಗಳಿಗೂ ಮಹೇಶ್ ಜೋಶಿ ಈವರೆಗೂ ಉತ್ತರಿಸಿಲ್ಲ. ಬದಲಿಗೆ ನಾಡಿನ ಪ್ರಜೆಗಳ ಅಭಿಪ್ರಾಯಕ್ಕೆ ಮನ್ನಣೆ ಕೊಡದ ಎಡಪಂಥೀಯರು ತನ್ನನ್ನು ವಿರೋಧಿಸುತ್ತಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ನಾವು ಎಡಪಂಥೀಯರೂ ಅಲ್ಲ, ಬಲಪಂಥೀಯರೂ ಅಲ್ಲ. ಬದಲಿಗೆ ನೇರಪಂಥೀಯರು ಎಂದರು.
ಇದನ್ನೂ ಓದಿ: ನರಗುಂದ | ಮೂವರು ದಲಿತ ಬಾಲಕರನ್ನು ಧ್ವಜಸ್ತಂಭಕ್ಕೆ ಕಟ್ಟಿ ಹಲ್ಲೆ
ಬಳ್ಳಾರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬುಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ಸಾಹಿತ್ಯ ಪರಿಷತ್ನಲ್ಲಿ 10 ವರ್ಷಗಳಿಂದ ಕೈಗೊಂಡ ಎಲ್ಲಾ ಬೈಲಾ ತಿದ್ದುಪಡಿಗಳನ್ನು ರದ್ದು ಮಾಡಬೇಕು. ಪರಿಷತ್ನ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಆಜೀವ ಸದಸ್ಯರಿಗೆ ನೀಡಿರುವ ಶೋಕಾಸ್ ನೋಟಿಸ್ ಹಿಂಪಡೆಯಬೇಕು. ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರದಿಂದ ಕೊಡುವ ಅನುದಾನ ₹5 ಕೋಟಿಗೆ ಸೀಮಿತಗೊಳಿಸಿ ಉಳಿದ ಹಣ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೊಡಬೇಕು. ತಾಲ್ಲೂಕು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕಗಳಿಗೆ ಸರ್ಕಾರವೇ ನೇರವಾಗಿ ಅನುದಾನ ಬಿಡುಗಡೆ ಮಾಡಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.
-ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿಸಾಹಿತ್ಯಿಕ ಮನಸ್ಸು ಇರುವವರು ಯಾರೂ ಸರ್ವಾಧಿಕಾರಿ ಆಗಲು ಸಾಧ್ಯವಿಲ್ಲ. ಆದರೆ, ಪಕ್ಷ ರಾಜಕಾರಣದ ಕೊಳಕನ್ನು ಸಾಹಿತ್ಯ ಪರಿಷತ್ಗೆ ಅಂಟಿಸಿದ ವ್ಯಕ್ತಿಯಿಂದ ಎಂದೂ ಬಾರದ ದುಷ್ಕಾಲ ಈಗ ಬಂದಿದೆ. ಅದಕ್ಕೆ ಕಡಿವಾಣ ಹಾಕಲು ಇದು ಗಾಂಧಿ ಮಾರ್ಗದ ಹೊರಾಟ.-ಬಂಜಗೆರೆ ಜಯಪ್ರಕಾಶ್, ಹಿರಿಯ ಸಾಹಿತಿಸಾಹಿತ್ಯ ಪರಿಷತ್ತು ಮಹೇಶ ಜೋಶಿಯವರ ಖಾಸಗಿ ಕಂಪೆನಿ ಅಲ್ಲ. ಬದಲಿಗೆ ಕನ್ನಡಿಗರ ಮಾಲೀಕತ್ವದ ಸಂಸ್ಥೆ. ಬೈಲಾ ತಿದ್ದುಪಡಿ ಮೂಲಕ ಜೋಶಿ ಅದರ ಆತ್ಮಗೌರವ ತಿರುಚಲು ಹೊರಟಿದ್ದಾರೆ. ಈ ಹೋರಾಟದಲ್ಲಿ ಕನ್ನಡಿಗರು, ಕನ್ನಡ ಸಾಹಿತ್ಯದ ಹಿತಾಸಕ್ತಿ ಅಡಗಿದೆ.
ಇದನ್ನೂ ನೋಡಿ: ಕಾನೂನು ಅರಿವು | ಕೌಟುಂಬಿಕ ಹಿಂಸಾಚಾರದಿಂದ ಮಹಿಳೆ ತನ್ನನ್ನು ರಕ್ಷಿಸಿಕೊಳ್ಳುವುದು ಹೇಗೆ? ದೂರು ದಾಖಲಿಸುವುದು ಹೇಗೆ?