ದೂರು ಸ್ವೀಕರಿಸದೆ ನಿಂದಿಸಿದ ಸಬ್ ಇನ್‌ಸ್ಪೆಕ್ಟರ್‌ ಗೆ ₹50 ಸಾವಿರ ದಂಡ

ಬೆಂಗಳೂರು: ತುಮಕೂರು ಜಿಲ್ಲೆ ಚೇಳೂರು ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್‌ ಹರೀಶ್ ರಿಗೆ ದೌರ್ಜನ್ಯ ಸಂಬಂಧ ಸಂತ್ರಸ್ತ ತಾಯಿ-ಮಗಳಿಂದ ದೂರು ಸ್ವೀಕರಿಸದೆ ಠಾಣೆಯಲ್ಲಿ ನಿಂದಿಸಿ ದರ್ಪ ತೋರಿಸಿದ ಆರೋಪದ ಮೇರೆಗೆ ₹50 ಸಾವಿರ ದಂಡ ವಿಧಿಸಿದಲ್ಲದೆ ಶಿಸ್ತು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗ ಶಿಫಾರಸು ಮಾಡಿದೆ.

ಚೇಳೂರು ಠಾಣಾ ವ್ಯಾಪ್ತಿಯಲ್ಲಿ ತಮ್ಮ 13 ವರ್ಷದ ಮಗಳ ಮೇಲೆ ದೌರ್ಜನ್ಯ ನಡೆದಿದೆ ಎಂದು ದೂರು ಕೊಡಲು ತೆರಳಿದ ತಾಯಿ ಹಾಗೂ ಮಗಳ ಮೇಲೆ ಪಿಎಸ್‌ಐ ಹರೀಶ್, ನಿವೃತ್ತ ಪಿಎಸ್‌ಐ ಪಾಪಣ್ಣ ಅವರು ದೌಲತ್ತಿನಿಂದ ನಡೆದುಕೊಂಡಿದ್ದಾರೆ.

ಇದನ್ನೂ ಓದಿ: ವಿಕಸಿತ ಭಾರತದ ಪುಂಗಿ : ಕಾರ್ಖಾನೆಗಳಲ್ಲಿ ಕಾಣದ ಮಹಿಳೆಯರು

ಠಾಣೆಗೆ ದೂರು ಕೊಡಲು ಬಂದರೆ ಒದ್ದು ಬಿಡುತ್ತೇನೆ ಎಂದು ಹರೀಶ್ ಬೆದರಿಸಿದ್ದರು. ಈ ಬಗ್ಗೆ ನೊಂದ ತಾಯಿ ದೂರಿನನ್ವಯ ಠಾಣೆಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಸಂತ್ರಸ್ತರ ಮೇಲೆ ಪಿಎಸ್‌ಐ ಹರೀಶ್‌ ದರ್ಪ ತೋರಿಸಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಾಹಿತಿ ಮೇರೆಗೆ ಆರೋಪಿತ ಪಿಎಸ್‌ಐ ಹರೀಶ್‌ ಹಾಗೂ ಈ ಹಿಂದೆ ಚೇಳೂರು ಠಾಣೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಪಾಪಣ್ಣ ಅವರಿಗೆ ₹50 ಸಾವಿರ ದಂಡ ಆಯೋಗ ದಂಡ ವಿಧಿಸಿದೆ. ಅಲ್ಲದೆ ಈ ಇಬ್ಬರು ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಸಂತ್ರಸ್ತರಿಗೆ ಆರೋಪಿಗಳಿಂದ ವಸೂಲಿ ಮಾಡಿದ ಹಣವನ್ನು ಪರಿಹಾರ ರೂಪದಲ್ಲಿ ನೀಡುವಂತೆ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗ ಸೂಚಿಸಿದೆ.

ತಮ್ಮ ಅತ್ತೆ ನಾರಾಯಣಮ್ಮ, ಮಾವ ಪರಮಾತ್ಮ ಹಾಗೂ ಮೈದುನ ಮಧು ಅವರ ಮಾತು ಕೇಳಿ ಪಿಎಸ್‌ಐ ದೂರು ಸ್ವೀಕರಿಸಲು ವಿಳಂಬ ಮಾಡಿದರು. ಈ ಘಟನೆ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಆದರೆ ಠಾಣೆಗೆ ಹೋದರೆ ಮನಬಂದಂತೆ ನಿಂದಿಸಿ ಅವಮಾನಿಸಿ ಪಿಎಸ್‌ಐ ಕಳುಹಿಸಿದ್ದರು ಎಂದು ಸಂತ್ರಸ್ತರು ಆಪಾದಿಸಿದ್ದರು.

ಇದನ್ನೂ ನೋಡಿ: “ಛಾವಾ” ಸಿನಿಮಾದಲ್ಲಿನ ಸುಳ್ಳುಗಳು! Janashakthi Media

Donate Janashakthi Media

Leave a Reply

Your email address will not be published. Required fields are marked *