ಬೆಂಗಳೂರು : ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ನನ್ನನ್ನ ಪರಿಗಣಿಸಿದ್ರೆ ರಾಜ್ಯಾಧ್ಯಕ್ಷ ಆಗೋಕೆ ಸಿದ್ದ ಅಂತ ಯತ್ನಾಳ್ ಟೀಂನ ಮಾಜಿ ಸಚಿವ ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷ ಸ್ಥಾನದ ಆಸೆ ಹೊರ ಹಾಕಿದ್ದಾರೆ.
ಇದನ್ನೂ ಓದಿ:ಡ್ರೈನೇಜ್ ಅವ್ಯವಸ್ಥೆ ಹಾಗೂ ತಡೆಗೋಡೆ ಭೀತಿಯಿಂದ ಬೆಳ್ಮ ಗ್ರಾಮಸ್ಥರಿಂದ ಪಂಚಾಯತ್ ಕಚೇರಿಯೆದುರು ಪ್ರತಿಭಟನೆ
ಬೆಂಗಳೂರಿನಲ್ಲಿ ಮಾತಾಡಿದ ಅವರು,ಬಂಗಾರಪ್ಪ ಮಗ ಆಗಿದ್ದಕ್ಕೆ ನನಗೆ ಅಧ್ಯಕ್ಷ ಸ್ಥಾನ ಕೊಡ್ತಾರೆ ಅಂದರೆ ಯಡಿಯೂರಪ್ಪ ಮಗ ಅಂತ ವಿಜಯೇಂದ್ರಗೆ ಕೊಟ್ಟ ಹಾಗೇ ಆಗುತ್ತದೆ.ದೊಡ್ಡವರ ಮಕ್ಕಳಾಗಿ ಹುಟ್ಟಿದ ಮಾತ್ರಕ್ಕೆ ನಾವು ದೊಡ್ಡವರು ಆಗೊಲ್ಲ. ಕಲಿಬೇಕು,ಸಂಯಮ ಬೇಕು, ಜನ ಸಾಮಾನ್ಯರ ಜೊತೆ ಇರಬೇಕು.ಎಲ್ಲರ ಅಭಿಪ್ರಾಯ ಕೇಳುವ ತಾಳ್ಮೆ ಇರಬೇಕು. ಆದರೆ ಈಗ ಅದು ಆಗಿಲ್ಲ ಅನ್ನೋದು ನಮ್ಮ ವಾದ ಅಂತ ವಿಜಯೇಂದ್ರ ವಿರುದ್ದ ಕಿಡಿಕಾರಿದರು.
ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳಿಗೆ ಸ್ವಲ್ಪ ಅವಕಾಶದಲ್ಲಿ ಹಿಂದಿದೆ.ಇದು ಕಾಂಗ್ರೆಸ್ ಗೆ ಅನುಕೂಲ ಆಗಿದೆ ಅಂತ ಇದೆ.ಹಿಂದುಳಿದ ಮತ್ತು SC-ST ಗೆ ಅವಕಾಶ ಕೊಡಬೇಕು.ಕುಮಾರ್ ಬಂಗಾರಪ್ಪ ಅಂತ ಅಲ್ಲ ಯಾರೇ ಹಿಂದುಳಿದ ವರ್ಗ ಅಥವಾ SC-ST ಗೆ ಕೊಟ್ಟರೆ ಅನುಕೂಲ ಆಗುತ್ತದೆ. ಹೈಕಮಾಂಡ್ ನನ್ನನ್ನ ಪರಿಗಣಿಸಿದರೇ ನಾನು ಅಧ್ಯಕ್ಷ ಆಗೋಕೆ ಸಿದ್ದ ಅಂತ ಅಧ್ಯಕ್ಷ ಸ್ಥಾನದ ಆಸೆ ಹೊರ ಹಾಕಿದ್ರು.
ರಾಜ್ಯ ಬಿಜೆಪಿಯಲ್ಲಿ ಪಕ್ಷ ಸಂಘಟನೆ ಬಿದ್ದು ಹೋಗಿದೆ. ಒಂದೇ ಕಡೆ ವಾಲಿದೆ. ಅದು ಸರಿ ಹೋಗಬೇಕು ಅಂತ ವಿಜಯೇಂದ್ರ ವಿರುದ್ದ ಕಿಡಿಕಾರಿದರು.
ಇದನ್ನೂ ಓದಿ:ಮುಡಾ ಕೇಸ್: ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್; ಲೋಕಾಯುಕ್ತ ಪೊಲೀಸರಿಂದ ಬಿ ರಿಪೋರ್ಟ್ ಸಲ್ಲಿಕೆಗೆ ಸಿದ್ಧತೆ