ಮಹಿಳಾ ಸಮಾನತೆ ಮತ್ತು ವಿಮೋಚನೆಯ ಕಾಳಜಿ ಹೊಂದಿದ್ದ ನಾಯಕ ಸೀತಾರಾಂ ಯೆಚೂರಿ – ಜನವಾದಿ ಮಹಿಳಾ ಸಂಘಟನೆ

ಬೆಂಗಳೂರು: ಜಾತ್ಯಾತೀತ ,ಮೌಲ್ಯಗಳ ಪ್ರತಿಪಾದಕ, ಮಹಿಳಾ ಸಮಾನತೆ ಮತ್ತು ವಿಮೋಚನೆಯ ಕಾಳಜಿ ಬದ್ಧತೆ ಹೊಂದಿದ ಕಾಂ. ಸೀತಾರಾಮ ಯೆಚೂರಿ ಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕರ್ನಾಟಕ ರಾಜ್ಯ ಸಮಿತಿಯು ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ ಎಂದು ಅಧ್ಯಕ್ಷೆ ಮೀನಾಕ್ಷಿ ಬಾಳಿ ಹಾಗೂ ಪ್ರದಾನ ಕಾರ್ಯದರ್ಶಿ ದೇವಿ ಹೇಳಿದ್ದಾರೆ.

ವಿದ್ಯಾರ್ಥಿ ದೆಸೆಯಿಂದಲೇ ಎಡಚಿಂತನೆಗೆ ಆಕರ್ಷಿತರಾಗಿ ತನ್ನ ಜೀವನವನ್ನು ದುಡಿವ ಜನರ ಚಳವಳಿಗಾಗಿ ಮುಡಿಪಿಟ್ಟ ಸಂಗಾತಿ ಯೆಚೂರಿ ಅಗಲಿಕೆ ದೇಶದ ಜನಪರ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಇದನ್ನೂ ಓದಿ: ಸೀತಾರಾಂ ಯಚೂರಿ ನಿಧನ: ಪ್ರಧಾನಿ ಮೋದಿ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರಿಂದ ಸಂತಾಪ

ರಾಜ್ಯ ಸಭಾ ಸದಸ್ಯರಾಗಿ ಎಲ್ಲ ಶೋಷಿತ ವಿಭಾಗಗಳ ಪ್ರತಿನಿಧಿಯಾಗಿದ್ದ ಅವರು ಮಹಿಳಾ ಸಮಾನತೆಗಾಗಿನ ಎಲ್ಲ ಹೋರಾಟಗಳ ಭಾಗವಾಗಿದ್ದರು.

ಅವರ ಅಗಲಿಕೆ ದೇಶದ ಮಹಿಳಾ ಚಳುವಳಿಗೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ, ಜನಪರ ರಾಷ್ಟ್ರ ರಾಜಕಾರಣಕ್ಕೆ ಭರಿಸಲಾಗದ ನಷ್ಟ ವಾಗಿದ್ದು ಅವರಿಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕರ್ನಾಟಕ ರಾಜ್ಯ ಸಮಿತಿಯು ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ ಎಂದು ಹೇಳಿದರು.

ಇದನ್ನೂ ನೋಡಿ: ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್‌ಗೆ ಸೀಮಿತಗೊಳಿಸಿರುವ ಆದೇಶ ಹಿಂಪಡೆಯಿರಿJanashakthi Media

Donate Janashakthi Media

Leave a Reply

Your email address will not be published. Required fields are marked *