ಸಾವಿನಲ್ಲೂ ಸಾರ್ಥಕತೆ ಮೆರೆದ ʻರಾಜಕುಮಾರʼ

ಬೆಂಗಳೂರು: ಇಂದು ನಿಧನರಾದ ನಟ ಪುನೀತ್ ರಾಜಕುಮಾರ್ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಯಿತು. ಪುನೀತ್ ಅವರ ವರನಟ ಡಾ.ರಾಜ್‍ಕುಮಾರ್ ಅವರು ಹಾದಿಯಲ್ಲೇ ನಡೆದ ಪುನೀತ್‌ ರಾಜಕುಮಾರ್‌ ನೇತ್ರಗಳನ್ನು ದಾನ  ಮಾಡಲಾಗಿತ್ತು. ಆ ಸಂದರ್ಭದಲ್ಲೇ ತಮ್ಮ ನೇತ್ರಗಳನ್ನು ದಾನ ಮಾಡುವ ಸಹಮತಕ್ಕೆ ಸಹಿ ಹಾಕಿದ್ದರು.

ಇದನ್ನು ಓದಿ: ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ನಿಧನ

ಪುನೀತ್‌ ರಾಜಕುಮಾರ್ ಅವರ ನೇತ್ರಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಗಿದೆ. ಡಾ.ರಾಜ್ ಅವರು ಮೃತಪಟ್ಟ ನಂತರ ಇಬ್ಬರು ಅಂಧರ ಬಾಳಿಗೆ ಬೆಳಕಾಗಿದ್ದರು. ಈಗ ಅವರ ದಾರಿಯಲ್ಲಿ ಪುನೀತ್ ಅವರು ಸಾಗಿದ್ದು, ಇವರು ಕೂಡ ಇಬ್ಬರು ಅಂಧರ ಬಾಳಿಗೆ ಬೆಳಕಾಗಲಿದ್ದಾರೆ.

ದಿನವೂ ಜಿಮ್​ ಮಾಡುತ್ತಾ ದೇಹವನ್ನು ದಂಡಿಸಿಕೊಂಡು ಅತ್ಯುತ್ತಮ ಆರೋಗ್ಯ ಕಾಪಾಡಿಕೊಂಡು ಬಂದಿದ್ದ ಪುನೀತ್ ರಾಜಕುಮಾರ್​ ಅವರ ಅಕಾಲಿಕ ಸಾವಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್ಲ ಜಿಮ್​ ಕೇಂದ್ರಗಳು‌ ಇಂದು ಮತ್ತು ನಾಳೆ ಬಂದ್​ ಮಾಡಿ, ಅಗಲಿದ ಆತ್ಮೀಯ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಲು ನಿರ್ಧರಿಸಿವೆ.

Donate Janashakthi Media

Leave a Reply

Your email address will not be published. Required fields are marked *