ಸಂದೇಶಖಾಲಿ | ಟಿಎಂಸಿ ನಾಯಕ ಶಹಜಹಾನ್ ಶೇಕ್‌ಗೆ 10 ದಿನಗಳ ಪೊಲೀಸ್ ಕಸ್ಟಡಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ನ್ಯಾಯಾಲಯವು ಸಂದೇಶಖಾಲಿಯ ಟಿಎಂಸಿ ನಾಯಕ ಶಾಜಹಾನ್ ಶೇಖ್ ಅವರನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ಗುರುವಾರ ಕಳುಹಿಸಿದೆ. ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಭೂಕಬಳಿಕೆ ಆರೋಪದ ಆರೋಪಿ ಟಿಎಂಸಿ ನಾಯಕ ಶಹಜಹಾನ್ ಶೇಖ್ ಅವರನ್ನು ಗುರುವಾರ ಬೆಳಗ್ಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೇಖ್ ಅವರನ್ನು ಮುಂಜಾನೆ ಮಿನಾಖಾನ್‌ನಿಂದ ಬಂಧಿಸಿದ ನಂತರ ಬೆಳಿಗ್ಗೆ 10.40 ರ ಸುಮಾರಿಗೆ ಬಸಿರ್‌ಹತ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ರಾಜ್ಯ ಪೊಲೀಸರು 14 ದಿನಗಳ ಕಸ್ಟಡಿಗೆ ಕೋರಿದ್ದರಾದರೂ ನ್ಯಾಯಾಲಯ 10 ದಿನಗಳನ್ನು ನೀಡಿದೆ. ಉತ್ತರ 24 ಪರಗಣದ ಅಡಗುತಾಣದಿಂದ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮಾಜಿ ಐಎಎಸ್ ಅಧಿಕಾರಿ, ಹಿರಿಯ ನಟ ಕೆ ಶಿವರಾಮ್ ನಿಧನ

“ಕಾನೂನು ಗೊಂದಲದ ಕಾರಣ ಅವರನ್ನು ಆರಂಭದಲ್ಲಿ ಬಂಧಿಸಲಾಗಲಿಲ್ಲ. ಆದರೆ ಅವರ ಬಂಧನಕ್ಕೆ ಯಾವುದೇ ತಡೆಯಾಜ್ಞೆ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದ ನಂತರ, ಪಶ್ಚಿಮ ಬಂಗಾಳ ಪೊಲೀಸರು ತನ್ನ ಕೆಲಸವನ್ನು ಮಾಡಿದ್ದಾರೆ. ಪ್ರತಿಪಕ್ಷಗಳು ಆತನ ಬಂಧನದ ಮೇಲಿನ ನಿರ್ಬಂಧವನ್ನು ಈ ಹಿಂದೆ ಬಳಸಿಕೊಂಡವು” ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಪಿಟಿಐಗೆ ತಿಳಿಸಿದ್ದಾರೆ. ರಾಜ್ಯ ಪೊಲೀಸರ ಸಾಮರ್ಥ್ಯದ ಬಗ್ಗೆ ನಮಗೆ ವಿಶ್ವಾಸವಿದ್ದು, ಏಳು ದಿನಗಳಲ್ಲಿ ಬಂಧಿಸುವುದಾಗಿ ಹೇಳಿದ್ದೆವು ಎಂದು ಅವರು ಹೇಳಿದ್ದಾರೆ.

ಆಹಾರಧಾನ್ಯ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಹಾರ ಮತ್ತು ಸರಬರಾಜು ಖಾತೆಯ ಮಾಜಿ ಸಚಿವ ಜ್ಯೋತಿಪ್ರಿಯಾ ಮಲ್ಲಿಕ್ ಅವರನ್ನು ಜೈಲಿಗೆ ತಳ್ಳಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮನೆ ಮೇಲೆ ದಾಳಿ ನಡೆಸಲು ಹೋದ ಜಾರಿ ನಿರ್ದೇಶನಾಲಯದ ತಂಡದ ಮೇಲೆ ದಾಳಿ ಮಾಡಿದ ನಂತರ ಶೇಖ್ ಅವರು 55 ದಿನಗಳ ಕಾಲ ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಆಗ್ರಹಿಸಿ ಸಂದೇಶಖಾಲಿ ಪ್ರದೇಶದ ಜನರು ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಪ್ರತಿಪಕ್ಷ ಬಿಜೆಪಿಯು ತನ್ನ ಆಂದೋಲನದ ಕಾರಣದಿಂದ ರಾಜ್ಯ ಪೊಲೀಸರು ಶೇಖ್‌ನನ್ನು ಬಂಧಿಸಿದ್ದಾರೆ ಎಂದು ಪ್ರತಿಪಾದಿಸಿದೆ. “ಅಪರಾಧಿಯನ್ನು ರಕ್ಷಿಸುತ್ತಿರುವುದು ಟಿಎಂಸಿ ಮತ್ತು ರಾಜ್ಯದ ಪೋಲೀಸರು. ಸುಸಜ್ಜಿತವಾಗಿ ತಯಾರಿಸಲಾದ ಕಥೆಯ ಭಾಗವಾಗಿ ಅವರನ್ನು ಈಗ ಬಂಧಿಸಲಾಗಿದೆ. ನಮ್ಮ ನೇತೃತ್ವದ ನಿರಂತರ ಆಂದೋಲನದಿಂದಾಗಿ ರಾಜ್ಯ ಸರ್ಕಾರ ಅವರನ್ನು ಬಂಧಿಸಲಾಯಿತು” ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಸುಕಾಂತ ಮಜುಮದಾರ ಹೇಳಿದ್ದಾರೆ.

ಇದನ್ನೂ ಓದಿ: ಹಿಮಾಚಲ ಪ್ರದೇಶ | ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿದ 6 ಕಾಂಗ್ರೆಸ್ ಶಾಸಕರು ಅನರ್ಹ

ಶೇಖ್ ಅವರ ಮೊಬೈಲ್ ಫೋನ್‌ನ ಟವರ್ ಲೊಕೇಶನ್ ಸಹಾಯದಿಂದ ಪತ್ತೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಶೇಖ್ ಕಾಲಕಾಲಕ್ಕೆ ತನ್ನ ಸ್ಥಳವನ್ನು ಬದಲಾಯಿಸುತ್ತಿದ್ದರು. ಅವರ ಮೊಬೈಲ್ ಫೋನ್‌ನ ಟವರ್ ಲೊಕೇಶನ್ ಸಹಾಯದಿಂದ ಅವರನ್ನು ಪತ್ತೆ ಹಚ್ಚಲಾಯಿತು” ಎಂದು ಅವರು ಹೇಳಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಕೋಲ್ಕತ್ತಾದಿಂದ 65 ಕಿ.ಮೀ ದೂರದಲ್ಲಿರುವ ಬಸಿರ್‌ಹತ್ ನ್ಯಾಯಾಲಯದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಿಸ್ಥಿತಿ ಉಲ್ಬಣಗೊಳ್ಳದಂತೆ ತಡೆಯಲು ಸಂದೇಶ್‌ಖಾಲಿಯ ಭಾಗಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ವರದಿ ಹೇಳಿದೆ.

ಬುಧವಾರ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ಅವರ ನೇತೃತ್ವದ ವಿಭಾಗೀಯ ಪೀಠವು ತಲೆಮರೆಸಿಕೊಂಡಿರುವ ಶೇಖ್‌ನನ್ನು ಬಂಧಿಸಲು ಸಿಬಿಐ ಅಥವಾ ಇಡಿ ಮುಕ್ತವಾಗಿದೆ ಎಂದು ನಿರ್ದೇಶಿಸಿದೆ. ಅವರನ್ನು ಬಂಧಿಸುವಂತೆ ಹೈಕೋರ್ಟ್ ಸೋಮವಾರ ರಾಜ್ಯ ಪೊಲೀಸರಿಗೆ ಸೂಚಿಸಿತ್ತು. ಕಳೆದ ಕೆಲವು ವಾರಗಳಿಂದ ಶೇಖ್ ವಿರುದ್ಧ 100ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದು, ಆತನ ಬಂಧನಕ್ಕೆ ಒತ್ತಾಯಿಸಿ ಮಹಿಳೆಯರ ನೇತೃತ್ವದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತನ ವಿರುದ್ಧ ಐಪಿಸಿ ಸೆಕ್ಷನ್ 376ಡಿ (ಗ್ಯಾಂಗ್ ರೇಪ್) ಮತ್ತು 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶೇಖ್ ಅವರ ಆಪ್ತ ಸಹಾಯಕರಾದ ಶಿಬಾಪ್ರಸಾದ್ ಹಜ್ರಾ ಮತ್ತು ಉತ್ತಮ್ ಸರ್ದಾರ್ ಅವರನ್ನು ಈ ಹಿಂದೆ ಇದೇ ಆರೋಪದಲ್ಲಿ ಬಂಧಿಸಲಾಗಿತ್ತು. ಅವರ ಮತ್ತೊಬ್ಬ ಸಹಚರ ಅಜಿತ್ ಮೈತಿಯನ್ನು ಭೂಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಹೆಚ್ಚಿನ ದೂರುದಾರರು ಶಾಜಹಾನ್ ಶೇಖ್ ಜನರಿಂದ ಬಲವಂತವಾಗಿ ಭೂಮಿಯನ್ನು ವಶಪಡಿಸಿಕೊಂಡು ಪ್ರದೇಶದ ಮಹಿಳೆಯರನ್ನು ಹಿಂಸಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೊ ನೋಡಿ: ವಿಮಾನ‌ ನಿಲ್ದಾಣ ಅದಾನಿಗೆ ಮಾರಾಟ, ಇಲ್ಲಿನ ಬ್ಯಾಂಕ್‌ಗಳು ಮೋದಿ ಗೆಳೆಯರ ಪಾಲು – ಇದು ಬಿಜೆಪಿ ಶಾಸಕರ ಕೊಡುಗೆ

Donate Janashakthi Media

Leave a Reply

Your email address will not be published. Required fields are marked *