ಬೆಂಗಳೂರು: ಸೈಬರ್ ಕಳ್ಳರು ನಿವೃತ್ತ ಅಧಿಕಾರಿಯನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದೂ, ಅಧಿಕಾರಿಗೆ ಬೆದರಿಕೆ ಹಾಕಿ 67.40 ಲಕ್ಷ ರೂ. ಸುಲಿಗೆ ಮಾಡಿದ್ದ ಹಿನ್ನಲೆ, ಇದೀಗ ದಕ್ಷಿಣ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಯನಗರ 9ನೇ ಹಂತದ 63 ವರ್ಷದ ನಿವೃತ್ತ ಅಧಿಕಾರಿ ವಂಚನೆಗೆ ಒಳಗಾದವರು. ಇವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏ.22ರಂದು ನಿವೃತ್ತ ಅಧಿಕಾರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಸಹಾರಾ ಪೊಲೀಸ್ ಠಾಣೆಯಿಂದ ಮಾತನಾಡುತ್ತಿದ್ದೇನೆ. ನಿಮ್ಮ ಆಧಾರ್, ಪಾನ್ ಕಾರ್ಡ್ ಅನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಹಣ ವಹಿವಾಟು ನಡೆದಿದ್ದು, ಮನಿಲಾಂಡಿರಿಂಗ್ ಕೇಸ್ ದಾಖಲಾಗಿದೆ.
ಇದನ್ನೂ ಓದಿ: ಕಿವಿ ಕೇಳಿಸದ ಬಾಲಕಿ ಹತ್ಯೆ: ಇನ್ಸ್ ಪೆಕ್ಟರ್ ಶಂಕರ್ ನಾಯ್ಕ್ ವಿರುದ್ಧ ದೂರು ಸಲ್ಲಿಕೆ
ಈ ಕೇಸ್ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ ವರ್ಗಾವಣೆಯಾಗಿದೆ. ಈ ಬಗ್ಗೆ ಸಿಬಿಐ ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿ ಕರೆನ್ನು ಮತ್ತೊಬ್ಬರಿಗೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಹೇಳಿ ಕರೆ ಸ್ಥಗಿತ ಮಾಡಲಾಗಿತ್ತು.
ಕೆಲವೇ ನಿಮಿಷಕ್ಕೆ ಮತ್ತೊಬ್ಬ ಕರೆ ಮಾಡಿ, ಈ ಕೇಸಿನಲ್ಲಿ ನಿಮ್ಮನ್ನು ಅರೆಸ್ಟ್ ಮಾಡಬೇಕಿದೆ. ಆದರೆ, ನಿಮಗೆ ಸಹಾಯ ಮಾಡುತ್ತೆನೆ. ಈ ಬಗ್ಗೆ ಯಾರಿಗೂ ಹೇಳಬೇಡಿ. ಮೊದಲು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಎಲ್ಲ ಹಣವನ್ನು ಕೋರ್ಟ್ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕೆಂದು ಸೂಚಿಸಿದ್ದರು.
ಬಂಧನ ಭೀತಿಯಿಂದ ನಿವೃತ್ತ ಅಧಿಕಾರಿ, ತಮ್ಮ ವಿವಿಧ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಆರೋಪಿಗಳು ಕೊಟ್ಟ ಖಾತೆಗೆ ಹಂತ ಹಂತವಾಗಿ 67.40 ಲಕ್ಷ ರೂ. ವರ್ಗಾವಣೆ ಮಾಡಿದ್ದರು.
ಮತ್ತಷ್ಟು ಹಣ ಬೇಕೆಂದು ಕೇಳಿದಾಗ ಅನುಮಾನ ಬಂದು ನಿವೃತ್ತ ಅಧಿಕಾರಿ, ಇಲ್ಲಿಯವರೆಗೂ ವರ್ಗಾವಣೆ ಮಾಡಿದ ಹಣ ವಾಪಸ್ ಕೊಡುವಂತೆ ಒತ್ತಾಯ ಮಾಡಿದಾಗ ಸಂಪರ್ಕ ಕಡಿತ ಮಾಡಿಕೊಂಡಿದ್ದರು. ನೊಂದ ನಿವೃತ್ತ ಅಧಿಕಾರಿ, ಈ ಬಗ್ಗೆ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ನೋಡಿ: ವಕ್ಪ್ ತಿದ್ದುಪಡಿ ಮಸೂದೆ – 2025 | ಒಂದು ಅವಲೋಕನ Janashakthi Media