ರೇಣುಕಾಸ್ವಾಮಿ ಕೊಲೆ‌ಪ್ರರಣ: ನಟ‌ ದರ್ಶನ್ ಮನೆಯಲ್ಲಿ ಸಿಕ್ಕಿದ್ದು ಬಿಜೆಪಿ ನಾಯಕರಿಗೆ ಸೇರಿದ ಹಣ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಿಜೆಪಿಯ ಶಾಸಕರೊಬ್ಬರು ಹಣ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಲಭ್ಯವಾಗಿದೆ. ನಟ ದರ್ಶನ್ ಮನೆಯಲ್ಲಿ  ವಶಪಡಿಸಿಕೊಂಡ ಹಣದಲ್ಲಿ 40 ಲಕ್ಷ ಹಣ ಕೊಟ್ಟದ್ದು ಮೋಹನ್ ರಾಜ್ ಎಂದು ಕಾಮಾಕ್ಷಿ ಪಾಳ್ಯ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆಂದು ವರದಿಯಾಗಿದೆ.

ದರ್ಶನ್ ಗೆ ಹಣ ಕೊಟ್ಟಿರುವ ಮೋಹನ್ ರಾಜ್ ಶಾಸಕರೊಬ್ಬರ ಆಪ್ತರು ಎಂದು ತಿಳಿದು ಬಂದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಜೊತೆಗಿನ ಫೋಟೊ ಈಗ ವೈರಲ್‌ ಆಗಿದೆ. ತನ್ನ ಹೆಸರು ಹೊರಗಡೆ ಬರುತ್ತಿದ್ದಂತೆ ಮೋಹನ್ ರಾಜ್ ಎಂಬುವವರು ಪೋನ್ ಸ್ವೀಚ್ ಆಫ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ; ಸ್ಟಾರ್ ನಟ ದರ್ಶನ್ ವಶಕ್ಕೆ

ಅಷ್ಟೇ ಅಲ್ಲ ಮೋಹನ್ ರಾಜ್ ಕೂಡ ಬಿಜೆಪಿ ಪಕ್ಷದೊಡನೆ ಗುರುತಿಸಿಕೊಂಡಿದ್ದಾರೆ.ಈ ಬಗ್ಗೆ ತನಿಖೆ ನಡೆಸುತ್ತಿರುವ ಕಾಮಾಕ್ಷಿ ಪಾಳ್ಯ ಪೊಲೀಸರು, ಮೋಹನ್ ರಾಜ್ ಪೋನ್ ಸ್ವೀಚ್ ಆಫ್ ಆಗಿರುವುದರಿಂದ ಅವರ ಮನೆಗೇ ಹೋಗಿ ನೋಟಿಸ್ ನೀಡಲು ಮುಂದಾಗಿದ್ದಾರೆ.

ವಿಚಾರಣಾ ವೇಳೆ ಬಂಧಿತರು ನೀಡಿದ ಮಾಹಿತಿ ಮೇರೆಗೆ ಮನೆಗೆ ಹೋಗಿ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ. ದರ್ಶನ್ ಮನೆಯಲ್ಲಿ ವಶಪಡಿಸಿಕೊಂಡ 70 ಲಕ್ಷ ರೂ.ಗಳಲ್ಲಿ ಎಲ್ಲಿ ಎಲ್ಲಿ ಪಡೆದಿದ್ದರು ಎಂಬ ಮೂಲಗಳನ್ನು ಕೆದಕಿದಾಗ ತಿಳಿದು ಬಂದಿದೆ.

ಹತ್ಯೆ ಪ್ರಕರಣದಲ್ಲಿ ಹೆಣ ಸಾಗಿಸಲು 5 ಲಕ್ಷ ರೂ., ರೇಣುಕಾಸ್ವಾಮಿಯನ್ನು ಕರೆ ತರಲು 10 ಲಕ್ಷ ಕೊಟ್ಟಿದ್ದ ಎಂದು ಪೊಲೀಸ್‌ ತನಿಖೆಯಿಂದ ತಿಳಿದುಬಂದಿದೆ‌.

ಇದನ್ನೂ ನೋಡಿ: ಅಂಗನವಾಡಿಗಳಲ್ಲಿ ಎಲ್‌ಕೆಜಿ- ಯುಕೆಜಿ ಆರಂಭಿಸಿ – ಅಂಗನವಾಡಿ ನೌಕರರ ಬೃಹತ್‌ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *