ರಾಜ್ಯದ ವಿವಿಧೆಡೆ ಮಳೆ: ಜನಜೀವನ-ಅಸ್ತವ್ಯಸ್ತ

ರಾಜ್ಯದಲ್ಲೆಡೆ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದ್ದೂ ಈ ಮಳೆಯಿಂದಾಗಿ ಹಲವು ಕುಟುಂಬಗಳ ಜೀವನ ಅಸ್ತವ್ಯಸ್ತವಾಗಿದ್ದು ಕೆಲವರು ಮರಣ ಹೊಂದಿದ್ದಾರೆ.

ರಾಜ್ಯದಲ್ಲಿ ಕೊಡಗು, ಹುಬ್ಬಳ್ಳಿ, ಮೊಳಕಾಲ್ಮುರು, ರಾಮನಗರ, ಮಂಡ್ಯ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಮೈಸೂರು, ಬೇಲೂರು ಸೇರಿದಂತೆ ಇನ್ನು ಹಲವಾರು  ಜಿಲ್ಲೆ ಮತ್ತು ತಾಲೂಕುಗಳಲ್ಲಿ ಮಳೆಯಾಗಿದ್ದು, ಈ ಮಳೆಯಿಂದಾಗಿ  ಜನರ ಪರಿಸ್ಥಿತಿ ಹದಗೆಟ್ಟಿದೆ.

ಮಳೆಯಿಂದಾಗಿ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ  ಕೊಡುಮಂಗಳೂರಿನಲ್ಲಿ ದೊಡ್ಡ ದೊಡ್ಡ ಅನೇಕಲ್ಲುಗಳು ಮನೆಯ ಮೇಲೆ ಬಿದ್ದಿದ್ದು ಹಾನಿಯಾಗಿದೆ. ಹಾಗೆ ಮೊಳಕಾಲ್ಮುರು ತಾಲೂಕಿನ  ಹಾನಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗಳಹಟ್ಟಿಯಲ್ಲಿ ಕುರಿ ಮೇಯಿಸಲು ಹೋಗಿದ್ದ ತಾಯಿ ಮಗು ಸಿಡಿಲುಬಡಿದು  ಇಬ್ಬರು ಮೃತಪಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ  ಅರ್ಧ ತಾಸು ಮಳೆಗಾಳಿಯಿಂದಾಗಿ ಮರ ಮತ್ತು ಮರದ  ಕೊಂಬೆಗಳು  ಮತ್ತು ಬೀದಿ ವಿದ್ಯುತ್ ಕಂಬಗಳು ನೆಲಕ್ಕೆ ಉರಿಳಿವೆ ಮತ್ತು ಇದೆ ಜಿಲ್ಲೆಯ ಸೋನಿಯಾ ಗಾಂಧಿ ನಗರದಲ್ಲಿ ಆಟೋ ಮೇಲೆ ಮರ ಉರಳಿದ ಕಾರಣ ರಾಬಿನ್ ಮುರೇಶ್ ಸ್ಥಳದಲ್ಲೇ  ಜೀವಬಿಟ್ಟಿದ್ದಾರೆ.

ರಾಮನಗರ  ಜಿಲ್ಲೆಯಲ್ಲಿ ಬಿರುಗಾಳಿ ಮತ್ತು ಆಲಿಕಲ್ಲಿನ ಮಳೆಯಿಂದಾಗಿ ನೂರಕ್ಕಿಂತ ಹೆಚ್ಚು ಹೆಕ್ಟರ್‌ ಪ್ರದೇಶ ಬೆಳೆ ನಾಶವಾಗಿದ್ದು  ಅಲ್ಲಿನ ರೈತರ ಜೀವನ ಚಿಂತಾಜನಕವಾಗಿದೆ.

ತಲಕಾವೇರಿ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು, ನದಿಯ ನೀರಿನ ಮಟ್ಟ ಹೆಚ್ಚಾಗಿದೆ. ಮಳೆ ಮತ್ತು ಹೆಚ್ಚು ಗಾಳಿ ಬೀಸಿದ್ದರಿಂದ ಯಾದಗಿರಿ ಜಿಲ್ಲೆ ಹುಣಸಗಿ–ನಾರಾಯಣಪುರ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಮರಗಳು ಉರುಳಿ ಬಿದ್ದಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ವಳಲೇಕಟ್ಟೆಕೊಪ್ಪಲಿನಲ್ಲಿ ಸಿಡಿಲು ಬಡಿದು ಮಾಸ್ತಮ್ಮ (53) ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಒಂದು ಹಸು ಕೂಡ ಮೃತಪಟ್ಟಿದೆ. ಚಿನಕುರಳಿ ಹಾಗೂ ಕುಂಬಾರಕೊಪ್ಪಲು ಗ್ರಾಮದಲ್ಲಿ 6 ಮಂದಿಗೆ ಗಾಯವಾಗಿದೆ.

ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿ ಕೃಷ್ಣಪುರದಲ್ಲಿ ಸಿಡಿಲು ಬಡಿದು ರಂಗನಾಯಕ (70) ಸಿಡಿಲು ಬಡೆದು ಸಾವನ್ನಪ್ಪಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಮಳೆಯಿಂದ ಆಶ್ರಯ ಪಡೆಯಲು ಮರದ ಕೆಳಗೆ ನಿಂತಿದ್ದಾಗ ಈ ಘಟನೆ  ಸಂಭವಿಸಿದೆ.

ಬೆಂಗಳೂರಿನಲ್ಲಿ ಮಳೆಯ ಆರ್ಭಟದಿಂದಾಗಿ ನಗರದ ಹಲವು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪರಿತಪಿಸಿದ್ದಾರೆ. ಸಾರ್ವಜನಿಕರು ತೊಂದರೆಗಳನ್ನು ಅನುಭವಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *