ಪಿಎಸ್ಐ ಹಗರಣ: ವಿಶೇಷ ಕೋರ್ಟ್‌ನಿಂದ ವಿಚಾರಣೆ

ಶಿವಮೊಗ್ಗ:ಪಿಎಸ್ಐ ಹುದ್ದೆ ನೇಮಕಾತಿ ಹಗರಣದ ವಿಚಾರಣೆಯನ್ನು  ನಡೆಸಲು ವಿಶೇಷ ನ್ಯಾಯಲಯವನ್ನು ಯೋಜಿಸಲು ಸರ್ಕಾರ  ಚಿಂತನೆ ನಡೆಸಿದೆ ಎಂದು ಶಿವಮೊಗ್ಗದಲ್ಲಿ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದ್ದಾರೆ.ನ್ಯಾಯಯಲವು ಪಿಎಸ್ಐ ಹಗರಣದ ವಿಚಾರಣೆ ನಡೆಸಿದ ನಂತರ ಮರು ಪರೀಕ್ಷೆಗೆ ದಿನಾಂಕ ನಿಗದಿ ಪಡಿಸಲಾಗುವುದು. ಹಗರಣದ ತನಿಖೆಯಿಂದಾಗಿ ದಿನಾಂಕ ನಿಗದಿ ಪಡಿಸುವುದು ತಡವಾಗಿದೆ ಎಂದು ತಿಳಿಸಿದರು.

ಹಗರಣಗಳ ಕುರಿತು ದಿನದಿಂದ ದಿನಕ್ಕೆ ಅಕ್ರಮಗಳು ಹೊರ ಬೀಳುತ್ತಿವೆ.ಕಲಬುರ್ಗಿ1ಕೋಟಿ ಹಣ,ಬೆಂಗಳೂರಿನಲ್ಲಿ 2.91 ಕೋಟಿ ಹಣವನ್ನು ಸಿಐಡಿ ತನಿಖಾ ಕೇಂದ್ರವು ವಶ ಪಡಿಸಿಕೊಳ್ಳಲಾಗಿದೆ.ಅಕ್ರಮದಲ್ಲಿ ಭಾಗಿಯಾದವರ ಬಂಧನ ಮತ್ತು ದೊರೆತ ಹಣವನ್ನು ,ಎಲ್ಲ ರೀತಿಯ ಅಕ್ರಮಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಲಾಗಿದೆ ಎಂದು ಸಮೂಹ ಮಾಧ್ಯಮದವರೊಂದಿಗೆ ಮಾತನಾಡಿದರು.

Donate Janashakthi Media

Leave a Reply

Your email address will not be published. Required fields are marked *