ದೇವನಹಳ್ಳಿ: ಜೂನ್ 12 ಗುರುವಾರದಂದು ಖಾಸಗಿ ಫೈನಾನ್ಸ್ನಿಂದ ಪಡೆದ ಸಾಲ ಪಾವತಿ ಮಾಡಿಲ್ಲವೆಂದು ನ್ಯಾಯಾಲಯದ ಆದೇಶವನ್ನು ತಂದು ಕೋರ್ಟ್ನಿಂದ ನೇಮಕಗೊಂಡಿದ್ದ ಆಯುಕ್ತರೊಂದಿಗೆ ಬಂದು ಮನೆಗೆ ಬೀಗ ಹಾಕಿ, ಸಾಲಗಾರ ಮತ್ತು ಆತನ ಕುಟುಂಬಸ್ಥರನ್ನು ಹೊರಗೆ ಹಾಕಿರುವ ಘಟನೆ ನಡೆದಿದೆ.
ವಿಜಯಪುರ ಪಟ್ಟಣದ 19ನೇ ವಾರ್ಡ್ನ ನಿವಾಸಿ ಮುನಿರಾಜು ಎಂಬುವವರು, ಎಸ್ಬಿಎಫ್ಸಿ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಮನೆಯ ನಿರ್ಮಾಣಕ್ಕೆ 20 ಲಕ್ಷ ರೂ. ಸಾಲ ಪಡೆದಿದ್ದರು. ಕಳೆದ 5 ತಿಂಗಳಿನಿಂದ ಸಾಲ ಪಾವತಿಸಿಲ್ಲ ಎಂಬ ಕಾರಣಕ್ಕೆ, ಅವರ ಮನೆಗೆ ವಕೀಲರು ಮತ್ತು ಪೊಲೀಸರೊಂದಿಗೆ ಬಂದು ಬೀಗ ಹಾಕಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಸಾಲಗಾರ ಮುನಿರಾಜು, ನಾವು ಸಾಲ ಪಡೆದ ಬಳಿಕ 17 ಕಂತುಗಳನ್ನು ಪಾವತಿಸಿದ್ದೇವೆ. ಈ ನಡುವೆ ನನಗೆ ಹೃದಯಶಸ್ತ್ರ ಚಿಕಿತ್ಸೆಯಾಯಿತು. ಈ ಸಮಯದಲ್ಲಿ ನಾನು ಸಾಲ ಪಾವತಿಸಲು ಕಷ್ಟವಾಯಿತು. ಆದರೂ, ನಾನು ಜನವರಿಯಲ್ಲಿ 4 ಲಕ್ಷ ರೂ. ಸಾಲವನ್ನು ಕಟ್ಟಿದ್ದೇನೆ. ಇನ್ನೂ 5 ತಿಂಗಳ ಬಾಕಿ ಇದೆ. ನಾವು ಆಸ್ಪತ್ರೆಯಲ್ಲಿದ್ದಾಗ ಫೈನಾನ್ಸ್ ನವರು, ಬಂದು ಮನೆಯ ಗೋಡೆಗೆ ನೋಟಿಸ್ ಪ್ರತಿಯನ್ನು ಅಂಟಿಸಿ ಹೋಗಿದ್ದಾರೆ. ಇದು ನನ್ನ ಗಮನಕ್ಕೆ ಬಂದಿರಲಿಲ್ಲ. ಈಗ ಏಕಾಏಕಿ ಬಂದು, ಮನೆಯನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದೇವೆ. ನೀವೆಲ್ಲರೂ ಹೊರಗೆ ನಡೆಯಿರಿ ಎಂದು ಹೇಳಿದರು.
ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಪತನ; ಮೃತರ ಗುರುತು ಪತ್ತೆಗಾಗಿ ಕುಟುಂಬಸ್ಥರ ಡಿಎನ್ಎ ಸಂಗ್ರಹ
ನಮಗೆ ನೋಟಿಸ್ ನೀಡದೆ ಏಕಾಏಕಿ ಮನೆಯಿಂದ ಹೊರಗೆ ಹೋಗಿ ಎಂದರೆ ನಾವು ಎಲ್ಲಿಗೆ ಹೋಗಬೇಕು ಎಂದು ಪರಿ ಪರಿಯಾಗಿ ಕೋರಿಕೊಂಡರೂ “ನಿಮಗೆ ನೋಟಿಸ್ ಕೊಟ್ಟಿದ್ದೇವೆ’ ಎಂದು ದಬಾಯಿಸಿದರು. ಬಾಕಿ ಇರುವ ಕಂತುಗಳ ಹಣವನ್ನು ಹೊಂದಿಸಿಕೊಂಡು ಬಂದು ಕಟ್ಟುವುದಕ್ಕೆ ಹೋದರೂ ಖಾಸಗಿ ಫೈನಾನ್ಸ್ ನವರು ಕಟ್ಟಿಸಿಕೊಳ್ಳಲಿಲ್ಲ. ವಿನಾಕಾರಣ, ಬೆಳಗ್ಗೆಯಿಂದ ನಮ್ಮನ್ನು ಕಾಯುವಂತೆ ಮಾಡಿದ್ದೀರಿ. ಆದ್ದರಿಂದ ನಿಮ್ಮ ಬಳಿ ಹಣ ಕಟ್ಟಿಸಿಕೊಳ್ಳುವುದಿಲ್ಲವೆಂದು ನಮ್ಮನ್ನು ಹೊರಗೆ ಹಾಕಿ ಹೋಗಿದ್ದಾರೆ ಎಂದು ಅಳಲು ತೋಡಿಕೊಂಡರು.
ನಾವು ವಾಸ ಮಾಡುವುದಕ್ಕೆ ಬೇರೆ ಯಾವುದೇ ಮನೆ ಯಿಲ್ಲ, ಹೆಣ್ಣು ಮಕ್ಕಳು ಓದುತ್ತಿದ್ದಾರೆ. ನಾನು ಹೃದ್ರೋಗಿ ಆದ್ದರಿಂದ ನಮ್ಮ ಮನೆಯ ಬೀಗ ತೆಗೆಸಿ, ವಾಸ ಮಾಡು ವುದಕ್ಕೆ ಅವಕಾಶ ಮಾಡಿಕೊಡಬೇಕು. ಸಾಲ ಮರು ಪಾವತಿ ಮಾಡುವುದಕ್ಕೆ ಸಮಯಾವಕಾಶ ಕೊಡಬೇಕು ಎಂದು ಮುನಿರಾಜು ಮನವಿ ಮಾಡಿದರು.
“ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ನಾವು ಈಗ ಎಲ್ಲಿಗೆ ಹೋಗುವುದು?’
ನಾನು ಹೃದ್ರೋಗಿ, ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರನ್ನು ಕರೆದುಕೊಂಡು ನಾನು ಎಲ್ಲಿಗೆ ಹೋಗಲಿ ಎಂದು ಅವರ ಬಳಿ ಅಂಗಲಾಚಿಕೊಂಡರೂ ಅವರು ನನಗೆ ಕನಿಕರ ತೋರಿಸದೇ ನಮ್ಮನ್ನು ಹೊರಗೆ ಹಾಕಿ ಬೀಗ ಜಡಿದಿದ್ದಾರೆ. ನಮಗೆ ಅವಕಾಶ ನೀಡುವಂತೆ ಫೈನಾನ್ಸ್ನವರನ್ನು ಮನವಿ ಮಾಡಲು ಬಂದಿದ್ದ ಸ್ಥಳೀಯರು, ಆಧಾರ್ ಕಾರ್ಡ್ ನೊಂದಿಗೆ ಬಾಂಡ್ ಬರೆದುಕೊಟ್ಟರೆ ಮಾತ್ರ ನಾವು ಸಾಲ ಕಟ್ಟಿಸಿಕೊಳ್ಳುತ್ತೇವೆ. ಇಲ್ಲವಾ ದರೆ, ನಾವು ಕಟ್ಟಿಸಿಕೊಳ್ಳುವುದಿಲ್ಲ ಎಂದು ತಿಳಿಸಿ ಬೀಗ ಹಾಕಿದ್ದಾ ರೆಂದು ಸಾಲಗಾರ ಮುನಿರಾಜು ಅಳಲು ತೋಡಿಕೊಂಡಿದ್ದಾರೆ.
ನಾವು ಹಲವು ಬಾರಿ ನೋಟಿಸ್ ಕೊಟ್ಟಿದ್ದೇವೆ. ಆದರೂ ಅವರು ಎಚ್ಚೆತ್ತುಕೊಂಡಿಲ್ಲ. ಈಗ ನಾವು ನ್ಯಾಯಾಲಯದ ಆದೇಶದಂತೆ ಕಾನೂನಾತ್ಮಕವಾಗಿ ಬಂದು, ಮನೆಯನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದೇವೆ ಎಂದುಖಾಸಗಿ ಫೈನಾನ್ಸ್ನ ವ್ಯವಸ್ಥಾಪಕ ಕುಮಾರ್ ಹೇಳಿದ್ದಾರೆ.
ಇದನ್ನೂ ನೋಡಿ: ಭಾರತದ ರಾಜಕೀಯ ಮತ್ತು ಹಣಕಾಸು ಒಕ್ಕೂಟ ಸವಾಲುಗಳು ಮತ್ತು ಸಾಧ್ಯತೆಗಳು Janashakthi Media