5 ನೇ ಹಂತದ ಮತದಾನ : 2019 ಕ್ಕಿಂತ ಸ್ವಲ್ಪ ಕಡಿಮೆ ಮತದಾನ

ನವದೆಹಲಿ: 2024 ರ ಲೋಕಸಭಾ ಚುನಾವಣೆಯ 5 ನೇ ಹಂತದಲ್ಲಿ ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತ ಚಲಾಯಿಸಿದ 49 ಕ್ಷೇತ್ರಗಳಲ್ಲಿ ಅಂದಾಜು 60.48 % ರಷ್ಟು ಒಟ್ಟಾರೆ ಮತದಾನವಾಗಿದೆ ಎಂದು  ಭಾರತೀಯ ಚುನಾವಣಾ ಆಯೋಗ ಮಂಗಳವಾರ ತಿಳಿಸಿದೆ.

ಈ ಮತದಾನವು 2019 ರ ಲೋಕಸಭೆ ಚುನಾವಣೆಯಲ್ಲಿ ಈ ಸ್ಥಾನಗಳಿಂದ 61.82% ರಷ್ಟು ಮತದಾನವಾಗಿತ್ತು. 2024 ರಲ್ಲಿ ಈ ಸ್ಥಾನಗಳಿಗೆ ನಡೆದ ಮತದಾನದಲ್ಲಿ ಅಂತರ ಸ್ವಲ್ಪ ಕಡಿಮೆಯಾಗಿದೆ. ನಿನ್ನೆ ಸೋಮವಾರ ಮೇ 20 ರಂದು ನಡೆದ ಐದನೇ ಹಂತದ ಮತದಾನದಲ್ಲಿ  ಉತ್ತರ ಪ್ರದೇಶ (14), ಮಹಾರಾಷ್ಟ್ರ (13), ಪಶ್ಚಿಮ ಬಂಗಾಳ (7), ಬಿಹಾರ (5), ಒಡಿಶಾ (5), ಜಾರ್ಖಂಡ್ (3), ಮತ್ತು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ತಲಾ ಒಂದು ಸ್ಥಾನಕ್ಕೆ ಮತದಾನ ನಡೆದಿದೆ.

ಇದನ್ನೂ ಓದಿ: ಐದನೇ ಹಂತಕ್ಕೆ ಸಂಜೆ 5ರವರೆಗೆ 56.68% ಮತದಾನ

ಪಶ್ಚಿಮ ಬಂಗಾಳದಲ್ಲಿ ಶೇಕಡಾ 76 ರಷ್ಟು  ಹೆಚ್ಚಿನ ಮತದಾನವಾಗಿದೆ. ಬಿಹಾರ ಶೇ.55, ಜಾರ್ಖಂಡ್- ಶೇ.63, ಲಡಾಖ್- ಶೇ.70, ಮಹಾರಾಷ್ಟ್ರ ಶೇ.54, ಒಡಿಶಾ ಶೇ.69, ಉತ್ತರಪ್ರದೇಶ ಶೇ.58 ಮತದಾನವಾಗಿದೆ.ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರವು 1984 ರಿಂದ ಸಾರ್ವಕಾಲಿಕ ಅತಿ ಹೆಚ್ಚು ಮತದಾನವಾದ 59

% ಮತದಾನವನ್ನು ದಾಖಲಿಸಿತ್ತು.ಈ ಬಾರಿ 61%ರಷ್ಟು ಮತದಾನವನ್ನು ದಾಖಲಿಸಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.2024 ರ ಲೋಕಸಭೆ ಚುನಾವಣೆಯ ಮೊದಲ ನಾಲ್ಕು ಹಂತಗಳಲ್ಲಿ ಒಟ್ಟಾರೆ 66.95 ಶೇಕಡಾ ಮತದಾನವಾಗಿದೆ ಎಂದು ಚುನಾವಣಾ ಸಮಿತಿಯು ಮೊದಲು ತಿಳಿಸಿದೆ. ಮೊದಲ ಮೂರು ಹಂತಗಳು ಕುಸಿತ ಕಂಡವು, ಆದರೆ ನಾಲ್ಕನೇ ಹಂತದಲ್ಲಿ – 69.16 ಶೇಕಡಾ – 2019 ರಲ್ಲಿ ನೋಂದಾಯಿಸಿದ್ದಕ್ಕಿಂತ ಸ್ವಲ್ಪ ಹೆಚ್ಚಾಗಿದೆ.

ಏಪ್ರಿಲ್ 19 ರಂದು ನಡೆದ ಮೊದಲ ಹಂತದಲ್ಲಿ, 66.14 ರ ಅಂತಿಮ ಮತದಾನವು 2019 ರಲ್ಲಿ ಶೇಕಡಾ 69.29 ಕ್ಕಿಂತ ಕಡಿಮೆಯಾಗಿದೆ. ಅದೇ ರೀತಿ ಏಪ್ರಿಲ್ 26 ರಂದು ನಡೆದ ಎರಡನೇ ಹಂತದಲ್ಲಿ 66.71 ರಷ್ಟು ಮತದಾನವು 2019 ರಲ್ಲಿ ಶೇಕಡಾ 69.43 ಕ್ಕಿಂತ ಕಡಿಮೆಯಾಗಿದೆ. ಮೇ 7 ರಂದು ನಡೆದ ಮೂರನೇ ಹಂತದಲ್ಲಿ 65.68 ರಷ್ಟು ಮತದಾನವಾಗಿದ್ದು, 2019 ರಲ್ಲಿ ದಾಖಲಾದ ಶೇಕಡಾ 66.58 ಕ್ಕಿಂತ ಕಡಿಮೆ ಮತದಾನವಾಗಿದೆ.

543 ಲೋಕಸಭಾ ಸ್ಥಾನಗಳಲ್ಲಿ (428 ಸ್ಥಾನಗಳು) ಮೂರರಲ್ಲಿ ಮೂರರಷ್ಟು ಸ್ಥಾನಗಳಿಗೆ ಚುನಾವಣೆ ಮುಗಿದಿದೆ. ಜೂನ್‌ ರವರೆಗೆ ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಉಳಿದ ಎರಡು ಹಂತಗಳು ಮೇ 25 ಮತ್ತು ಜೂನ್ 1 ರಂದು ನಡೆಯಲಿದೆ. ಎಲ್ಲಾ ಏಳು ಲೋಕಸಭಾ ಚುನಾವಣೆಗಳ ಮತ ಎಣಿಕೆ ಜೂನ್ 4 ರಂದು ನಡೆಯಲಿದ್ದು, ಪಲಿತಾಂಶ ಹೊರಬೀಳಲಿದೆ.

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ), ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿಗೆ ದಾಖಲೆಯ ಮೂರನೇ ಅವಧಿಗೆ ಪ್ರಯತ್ನಿಸುತ್ತಿದ್ದು, ಈ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಇಂಡಿಯಾ ಒಕ್ಕೂಟದಡಿ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಆಡಳಿತಾರೂಢ ಮೈತ್ರಿಕೂಟಕ್ಕೆ ಸವಾಲೊಡ್ಡಿವೆ.

ಇದನ್ನೂ ನೋಡಿ: ಶ್ಯಾಮ್ ರಂಗೀಲಾ ಸ್ಪರ್ಧೆಗೆ ಹೆದರಿದ ಪ್ರಧಾನಿ ಮೋದಿ : ನಾಮಪತ್ರ ತಿರಸ್ಕೃತದ ಹಿಂದೆ ಮೋದಿ ಕೈವಾಡ Janashakthi Media

Donate Janashakthi Media

Leave a Reply

Your email address will not be published. Required fields are marked *