ಓವರ್ ಟೇಕ್ ಮಾಡಿದ ಎಂದು ಥಳಿಸಿದ ಜನ; ಯುವಕ ಸಾವು

ಮುಂಬೈ: ಮಹಾರಾಷ್ಟ್ರದ ರಾಜಧಾನಿಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ಓವರ್ ಟೇಕ್ ಮಾಡಿದ ಎಂಬ ಕಾರಣಕ್ಕೆ ನಡುರಸ್ತೆಯಲ್ಲೇ ಆಕಾಶ್ ಎಂಬ ಯುವಕನಿಗೆ ಮನಬಂದಂತೆ ಥಳಿಸಲಾಗಿದೆ. ಈ ಹಲ್ಲೆಯ ನಂತರ ಅವನು ಸಾವನ್ನಪ್ಪಿದ್ದಾನೆ.

ಆಕಾಶ್ ಎಂಬ ಯುವಕ ವಾಹನವನ್ನು ಓವರ್ ಟೇಕ್ ಮಾಡುವ ವಿಚಾರವಾಗಿ ಮಾರ್ಗಮಧ್ಯೆ ಕೆಲವರೊಂದಿಗೆ ವಾಗ್ವಾದ ನಡೆಸಿದ್ದಾನೆ. ಅಷ್ಟರಲ್ಲಿ ಜನರು ಆತನನ್ನು ಥಳಿಸಲು ಆರಂಭಿಸಿದ್ದಾರೆ. ಅಡ್ಡ ಬಂದ ಆತನ ಅಪ್ಪ-ಅಮ್ಮನಿಗೂ ಹೊಡೆದಿದ್ದಾರೆ.

ಇದನ್ನೂ ಓದಿ: ಒಂಬತ್ತು ವರ್ಷದ ಬಾಲಕಿ ಅತ್ಯಾಚಾರವೆಸಗಿ ಬೀದಿಯಲ್ಲಿ ಬಿಟ್ಟು ಹೋದ ದುಷ್ಟ: ಮಹಾರಾಷ್ಟ್ರದಲ್ಲಿ ಘಟನೆ

ತನ್ನ ಮಗನಿಗೆ ಏನೂ ಮಾಡಬೇಡಿ ಎಂದು ತಾಯಿ ಆ ಯುವಕನ ಮೇಲೆ ಮಲಗಿ, ಆತನಿಗೆ ಹೊಡೆತ ಬೀಳದಂತೆ ಪ್ರಯತ್ನಿಸುತ್ತಿದ್ದಾರೆ. ಮಗನಿಗೆ ಹೊಡೆಯುತ್ತಿದ್ದವರಿಗೆ ಆಕೆ ಕೈ ಮುಗಿದು ಬೇಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಭಾರೀ ಹೊಡೆತದಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿರುವ ಅಮಾನವೀಯ ಘಟನೆ ನಡೆದಿದೆ.

ಇದನ್ನೂ ನೋಡಿ: ‘Increase spending on nutrition- Madhura Swaminathan Janashakthi Media

Donate Janashakthi Media

Leave a Reply

Your email address will not be published. Required fields are marked *