ಮೈಸೂರಿನ ಒಡನಾಡಿ ಸಂಸ್ಥೆಯ ಮುಖ್ಯಸ್ಥರಿಗೆ ಬೆದರಿಕೆ ಕರೆ

ಮೈಸೂರು: ಶಿವಮೂರ್ತಿ ಮುರುಘಾ ಸ್ವಾಮೀಜಿ ವಿರುದ್ಧದ ಪೋಕ್ಸೊ ಪ್ರಕರಣದ ಸಂತ್ರಸ್ತೆಯರಿಗೆ ಆಶ್ರಯ ನೀಡಿ, ಪ್ರಕರಣವನ್ನು ಬಯಲಿಗೆ ತಂದ ಒಡನಾಡಿ ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ, ಪರಶುರಾಮ್‌ ಎಂ.ಎಲ್‌ ಅವರಿಗೆ ನಿರಂತರ ಜೀವ ಬೆದರಿಕೆ ಕರೆ ಬರುತ್ತೀವೆ ಎಂದು ಪೊಲೀಸ್​ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಮುರುಘಾ ಮಠದ ಶಿವಮೂರ್ತಿ ಶರಣರ ಬಂಧನದ ಪ್ರಕರಣದಲ್ಲಿ ಮಕ್ಕಳ ಪರ ನಿಂತಿದ್ದಕ್ಕೆ ಒಡನಾಡಿ ಸಂಸ್ಥೆಯ ನಿರ್ದೇಶಕರಾದ ಕೆ.ವಿ ಸ್ಟ್ಯಾನ್ಲಿ, ಎಂ.ಎಲ್​ ಪರಶುರಾಮ್ ಹಾಗೂ ಸಿಬ್ಬಂದಿಗೆ ಅನಾಮಧೇಯ ಕರೆ ಬರುತ್ತಿವೆ ಎಂದು ಆರೋಪಿಸಿದ್ದಾರೆ.

ಮುರುಘಾ ಶ್ರೀ ಪ್ರಕರಣದಲ್ಲಿ ಪ್ರಾಣ ಬೆದರಿಕೆ ಹಾಗೂ ಅಸಮಾಧಾನ ಕರೆಗಳ ಆಗಮನ ಹಿನ್ನಲೆಯಲ್ಲಿ ಒಡನಾಡಿ ಮಡಿಲು ಪುನರ್ವಸತಿ ಕೇಂದ್ರಕ್ಕೆ ಹಾಗೂ ಕುಟುಂಬ ಹಾಗೂ ವೈಯ್ಯಕ್ತಿಕ‌ ರಕ್ಷಣೆ ಕೋರಿ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ.

ನಮಗೆ ಗನ್ ಮ್ಯಾನ್ ಸೌಲಭ್ಯವನ್ನು ಕಲ್ಪಿಸಿಕೊಡಿ, ಪುನರ್ವಸತಿ ಕೇಂದ್ರದ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಿ ಎಂದು ನಗರ ಪೊಲೀಸ್ ಆಯುಕ್ತರಿಗೆ ಚಂದ್ರಗುಪ್ತ ಅವರಿಗೆ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಹಾಗೂ ಪರಶುರಾಮ್ ರಿಂದ ಮನವಿ ಮಾಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *