ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕಟೀಲ್‌ ಭಾಷಣ ವೇಳೆ ಸಿಲಿಂಡರ್ ಬೆಲೆ ಏರಿಕೆ ವಿರುದ್ಧ ಕೂಗಾಡಿದ ಮಹಿಳೆ

ಹಾವೇರಿ: ಮುಖ್ಯಮಂತ್ರಿ ತವರು ಜಿಲ್ಲೆ ಹಾವೇರಿಯಲ್ಲಿ ನಡೆದ ಬಿಜೆಪಿ ಎಸ್ ಟಿ ಮೋರ್ಚಾ ಸಮಾವೇಶದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಭಾಷಣೆ ಮಾಡುತ್ತಿರುವ ವೇಳೆ ಮಹಿಳೆಯೊಬ್ಬರು ಕೂಗಾಟ ನಡೆಸಿದ್ದು, ಗ್ಯಾಸ್ ಸಿಲಿಂಡರ್ ದರ ದುಬಾರಿಯಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಯಾಡಗಿಯಲ್ಲಿ ನಡೆದ ಎಸ್ಸಿ -ಎಸ್ಟಿ ಸಮಾವೇಶದಲ್ಲಿ ಬಸಮ್ಮ ಕಮ್ಥರ್ ಎಂಬ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದು, ಸಿಲಿಂಡರ್ ಗೆ ₹1300 ರೂಪಾಯಿ ರೊಕ್ಕ ಮಾಡಿರಿ, ಬಡವರು ಎಲ್ಲಿ ಹೋಗಬೇಕು. ಯಾಕೆ ₹1500 ರುಪಾಯಿ ಮಾಡಿಬಿಡ್ರಿ ಸರಿ ಆಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನು ಓದಿ: ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಸಿ ಸೌದೆ ಒಲೆ ಉರಿಸೆಂದ ಬಿಜೆಪಿ ಸರ್ಕಾರ !

ಸಿಲಿಂಡರ್ ಬೆಲೆ ಇಷ್ಟೊಂದು ಏರಿಸಿದ್ದೀರಾ, ಮತ್ತೆ ಕುಕ್ಕರಲ್ಲೆ ಅಡುಗೆ ಮಾಡಿಕೊಂಡು ತಿನ್ನಿ ಅಂತಾರೆ. ನಿಮಗೆ ದುಡ್ಡಿದೆ, ನಿಮ್ಮ ಮನೆಯ ಹೆಣ್ಮಕ್ಕಳು ಹೆಂಡ್ರು ಮಾಡಿ ಹಾಕ್ತಾರೆ. ನಾವು ಬಡವರು ಎಲ್ಲಿಂದ ರೊಕ್ಕ ತರಬೇಕ್ರೀ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

ನಳಿನ್ ಕುಮಾರ್ ಕಟೀಲ್‌ ಎಂದಿನಂತೆ ರಾಮ, ರಾವಣರ ಹೆಸರೇಳಿ ಭಾಷಣ ಮಾಡುತ್ತಿದ್ದರೆ, ಮಹಿಳೆ ಕಾರ್ಯಕರ್ತರ ನಡುವಿನಿಂದ ಎದ್ದು ಜೋರಾಗಿ ಮಾತನಾಡಿದ್ದು‌ ಎಲ್ಲರ ಗಮನ ಸೆಳೆದಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *