ಸುಪ್ರಿಂ ಕೋರ್ಟ್‌ನ ಉನ್ನತ ನ್ಯಾಯಮೂರ್ತಿಯಾಗಿ ಎನ್‌. ವಿ. ಅಂಜಾರಿಯಾ ಶಿಫಾರಸು

ವದೆಹಲಿ: ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ರನ್ನು ಸುಪ್ರಿಂ ಕೋರ್ಟ್‌ನ ಉನ್ನತ ನ್ಯಾಯಮೂರ್ತಿಗಳ ಸ್ಥಾನಕ್ಕೆ ನೇಮಕ ಮಾಡಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸು ಮಾಡಿದೆ. ಸುಪ್ರಿಂ

ಅಂಜಾರಿಯಾ ಜತೆಗೆ ಗುವಾಹಟಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಜಯ್‌ ಬಿಷ್ಣೋಯ್‌ ಹಾಗೂ ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ ಎ.ಎಸ್‌.ಚದುರ್ಕರ್‌ ಅವರನ್ನೂ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ: ಮುಂದಿನ 5 ದಿನಗಳ ಕಾಲ ಭಾರಿ ಮಳೆ; ಉಡುಪಿ ಜಿಲ್ಲೆಗೆ ರೆಡ್‌ ಅಲರ್ಟ್‌

ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಸಿಜೆ ಆಗಿರುವ ಅಂಜಾರಿಯಾ, 2011ರಲ್ಲಿ ಗುಜರಾತ್‌ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿ, 2023ರಲ್ಲಿ ಕಾಯಂ ನ್ಯಾಯಮೂರ್ತಿಯಾದರು. 2024ರ ಫೆ.25ರಂದು ಕರ್ನಾಟಕ ಹೈಕೋರ್ಟ್‌ ಸಿಜೆ ಆಗಿ ಅವರು ಪ್ರಮಾಣ ಸ್ವೀಕರಿಸಿದ್ದರು.

ಇತ್ತೀಚೆಗೆ ನ್ಯಾ.ಅಭಯ್‌ ಓಕಾ, ಹೃಷಿಕೇಶ್‌ ರಾಯ್‌ ಹಾಗೂ ಸಿಜೆಐ ಸಂಜೀವ್‌ ಖನ್ನಾ ನಿವೃತ್ತಿ ಬಳಿಕ ಸುಪ್ರೀಂಕೋರ್ಟ್‌ನಲ್ಲಿ 3 ಸ್ಥಾನಗಳು ಖಾಲಿಯಿದ್ದವು. ಪ್ರಸ್ತುತ ಇರುವ ಸಿಜೆಐ ಬಿ.ಆರ್‌. ಗವಾಯಿ ಅವರ ನೇತೃತ್ವದ ಕೊಲಿಜಿಯಂ ಮೇ 26 ಸೋಮವಾರದಂದು ಮೊದಲ ಸಭೆ ನಡೆದಿದ್ದು, ಈ ವೇಳೆ ಇವರ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ.

ನ್ಯಾ. ಬೇಲಾ ತ್ರಿವೇದಿ ಸಹ ಜೂ.9ರಂದು ನಿವೃತ್ತಿ ಹೊಂದಲಿದ್ದಾರೆ. 34 ನ್ಯಾಯಮೂರ್ತಿಗಳ ಸಾಮರ್ಥ್ಯವಿರುವ ಸುಪ್ರೀಂಕೋರ್ಟ್‌ನಲ್ಲಿ ಪ್ರಸ್ತುತ 31 ಮಂದಿ ಇದ್ದಾರೆ.

ಇದನ್ನೂ ನೋಡಿ: ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *