ಮೈಸೂರು ತಾಲ್ಲೂಕು ಕಟ್ಟಡ ಕಾರ್ಮಿಕರ ಸಮ್ಮೇಳನ

ಮೈಸೂರು: ತಾಲ್ಲೂಕಿನ ಕಟ್ಟಡ ಕಾರ್ಮಿಕರ ಎರಡನೇ ಸಮ್ಮೇಳನವು ನಡೆದಿದ್ದು, ಸಮ್ಮೇಳನವನ್ನು ಉದ್ದೇಶಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಕರ ಫೆಡರೇಷನ್‌ (ಸಿಡಬ್ಲ್ಯೂಎಫ್‌ಐ) ರಾಜ್ಯ ಮುಖಂಡ ಬಿ. ಉಮೇಶ್‌ ಮಾತನಾಡಿದರು.

ಸಮ್ಮೇಳನದ ಆರಂಭಕ್ಕೂ ಮುನ್ನ ಕಾರ್ಮಿಕರ ಮೆರವಣಿಗೆ ನಡೆಸಿದರು ಹಾಗೂ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಸಮ್ಮೇಳನವು 15 ಜನ ಪದಾಧಿಕಾರಿಗಳು ಹತ್ತು ಜನ ಸಮಿತಿ ಸದಸ್ಯರನ್ನು ಆಯ್ಕೆ ಮಾಡಿದೆ. ಗೌರವಾಧ್ಯಕ್ಷರಾಗಿ ವಿ ಸೋಮಶಂಕರ್, ಅಧ್ಯಕ್ಷರಾಗಿ ಬಸವರಾಜು ಮೇಗಳಾಪುರ, ಪ್ರಧಾನ ಕಾರ್ಯದರ್ಶಿಯಾಗಿ ಎಂ ಅಶೋಕ್, ಖಜಾಂಚಿಯಾಗಿ ಎನ್ ಆರ್ ಮೊಹಲ್ಲಾ, ನಾರಾಯಣ ಎನ್ ಗನಗರ ಹುಂಡಿ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. 5 ಜನ ಉಪಾಧ್ಯಕ್ಷ ಹಾಗೂ 5 ಜನ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *