ಸಿದ್ದರಾಮಯ್ಯದ್ದು ತಾಲೀಬಾನಿ ಸಂಸ್ಕೃತಿ – ಶಾಸಕ ಬೋಪಯ್ಯ ಆರೋಪ

ಮಡಿಕೇರಿ : ದೇಶಕ್ಕಾಗಿ, ಸ್ವತಂತ್ರಕ್ಕಾಗಿ ಇದುವರೆಗೆ ಆರ್ ಎಸ್ ಎಸ್ ನವರು ಯಾರು ಸತ್ತಿಲ್ಲ. ಬಿಜೆಪಿಯವರೆ ತಾಲೀಬಾನಿಗಳು ಎಂದಿರುವ ಮಾಜಿ ಸಿಎಂ ಸಿದ್ಧರಾಮಯ್ಯ ಟಿಪ್ಪುವಿನ ವಂಶಸ್ಥರಾಗಿರಬೇಕು ಎಂದು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೋಪಯ್ಯ ಆರ್ ಎಸ್ ಎಸ್ ಹಲವಾರು ದೇಶಭಕ್ತರನ್ನು ಬೆಳೆಸಿದೆ. ಇಂದಿಗೂ ಜನರಲ್ಲಿ ದೇಶಭಕ್ತಿ ಮೂಡಿಸುತ್ತಿದೆ. ಹಿಂದೂ ಮುಸ್ಲಿಂ ಎಂಬ ಬೇಧ ಭಾವಗಳನ್ನು ಸೃಷ್ಟಿಸಿ ಸಮಾಜದಲ್ಲಿ ಒಡಕು ಮೂಡಿಸುವ ಸಿದ್ಧರಾಮಯ್ಯನವರದು ತಾಲೀಬಾನ್ ಸಂಸ್ಕೃತಿ ಅಲ್ಲವೆ ಎಂದು ಪ್ರಶ್ನಿಸಿದ್ದಾರೆ.

ಆರೆಸ್ಸೆಸ್ ನ ದೇಶಭಕ್ತಿಯ ಸಂಸ್ಕೃತಿ ತಿಳಿಯದೇ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಯಾರ ವಿರುದ್ಧವಾದರು ಮಾತನಾಡುವಾಗ ಮಾಜಿ ಮುಖ್ಯಮಂತ್ರಿಗಳಿಗೆ ಗಂಭೀರತೆ ಇರಬೇಕು. ಇಂತಹ ಬಾಲಿಶ ಹೇಳಿಕೆ ನೀಡಿರೋದು ಅತ್ಯಂತ ಖಂಡನೀಯ.

ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿ, ಮುಂದಿನ ಮುಂಖ್ಯಮಂತ್ರಿಯಾಗುವ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಅವರ ಕನಸು ಎಂದೆಂದೂ ನನಸಾಗುವುದಿಲ್ಲ ಎಂದು ಹೇಳಿದ ಬೋಪಯ್ಯ, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಸಿದ್ದರಾಮಯ್ಯ ಕನಸು ಕನಸಾಗಿಯೇ ಉಳಿಯುತ್ತದೆ ಎಂದರು.

Donate Janashakthi Media

Leave a Reply

Your email address will not be published. Required fields are marked *