ಬರಿಗೈನಿಂದಲೇ ಚರಂಡಿ ಸ್ವಚ್ಛಗೊಳಿಸಿದ ಪೌರ ಕಾರ್ಮಿಕರು

ಮಂಡ್ಯ: ಪೌರ ಕಾರ್ಮಿಕರು ಬರಿಗೈಲಿ ಮೋರಿ ಸ್ವಚ್ಛಗೊಳಿಸಿದ ದೃಶ್ಯಗಳು ಮಂಡ್ಯದಲ್ಲಿ ಕಂಡುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊಗಳು ಸಾಕಷ್ಟು ಸದ್ದು ಮಾಡುತ್ತಿದ್ದು ಅಧಿಕಾರಿಗಳ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಮೊನ್ನೆ ಪೌರಕಾರ್ಮಿಕರ ದಿನಾಚರಣೆ ಮಾಡಲಾಯಿತು ಆದರೆ ಮರುದಿನವೇ ಅದೇ ಕಾರ್ಮಿಕರಿಗೆ ಅಗೌರವ ತೋರಲಾಗಿದೆ. ಸ್ವಚ್ಛತಾ ಕಾರ್ಯಕ್ಕೂ ಮುನ್ನ ಸುರಕ್ಷತೆ ವಹಿಸಿದೆ ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ್ದಾರೆ.

ಗ್ಲೌಸ್, ಬೂಟ್ ನೀಡದೆ ನಿರ್ಲಕ್ಷ್ಯ ತೋರಿದ ಬೇಲೂರು ಪಂಚಾಯತಿ ಪಿಡಿಓ ಸುರೇಶ್ ಅಮಾನವೀಯ ನಡೆ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸಿ.

ಸುರಕ್ಷತಾ ಕ್ರಮವಹಿಸಿ ಕಾರ್ಮಿಕರು ಕೆಲಸ ಮಾಡಬೇಕಂಬ ನಿಯಮವಿದ್ರೂ ನಿರ್ಲಕ್ಷ್ಯ ತೋರಲಾಗಿದೆ. ಅನಗತ್ಯವಾಗಿ ಹಣ ಖರ್ಚು ಮಾಡುವ ಪಂಚಾಯತಿಗಳು ಪಂಚಾಯತಿಯನ್ನು ಬೆಳಸುವ ಉದ್ಧೇಶದಿಂದ ಹಾಗೂ ದಿನನಿತ್ಯ ಜನರಿಗೆ ಉತ್ತಮ ಆರೋಗ್ಯ ಇರುವಂತೆ ನೋಡಿಕೊಳ್ಳುವ ಪೌರ ಕಾರ್ಮಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದೆ.

 

Donate Janashakthi Media

Leave a Reply

Your email address will not be published. Required fields are marked *