ಮಲೆಕುಡಿಯ ಸಮುದಾಯದ ಜಯಶ್ರೀ ಪಿಲಿಕಲ ಪ್ರಥಮ ದರ್ಜೆ ಸಹಾಯಕಿಯಾಗಿ ನೇಮಕ

ಮಂಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಸವಣಾಲು ಗ್ರಾಮದ ಪಿಲಿಕಲ ಎಂಬಲ್ಲಿನ ಮಲೆಕುಡಿಯ ಸಮುದಾಯದ ಜಯಶ್ರೀ ಪಿಲಿಕಲ ಅವರು ದೇವರಾಜು ಅರಸು ಅಭಿವೃದ್ಧಿ ನಿಗಮ, ಮುಲ್ಕಿ ತಾಲೂಕಿಗೆ ಪ್ರಥಮ ದರ್ಜೆ ಸಹಾಯಕರಾಗಿ ನಿಯೋಜನೆಗೊಂಡಿದ್ದಾರೆ.

ಇವರು ನೆರಿಯ ಆಲಂಗಾಯಿ ಆಶ್ರಮ ಶಾಲೆಯಲ್ಲಿ ಪ್ರಾಥಮಿಕ , ನೇತಾಜಿ ಸುಭಾಶ್ಚಂದ್ರ ಬೋಸ್ ಪ್ರೌಢಶಾಲೆ ಸವಣಾಲು ಇಲ್ಲಿ ಪ್ರೌಢ ಶಿಕ್ಷಣಯನ್ನು ಪೂರ್ಣಗೊಳಿಸಿದರು. ನಂತರ ಪಿಯುಸಿ ಶಿಕ್ಷಣವನ್ನು ಗುರುದೇವ ಕಾಲೇಜಿನಲ್ಲಿ, ಪದವಿ ಶಿಕ್ಷಣವನ್ನು ಎಸ್.ಡಿ.ಎಂ ಕಾಲೇಜು ಹಾಗೂ ಸ್ನಾತಕೋತ್ತರ ಪದವಿಯನ್ನು (ಎಂಹೆಚ್‌ಆರ್‌ಡಿ) ಮಂಗಳೂರು ವಿಶ್ವವಿದ್ಯಾಲಯದಲ್ಲಿ ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ.

ಜಯಶ್ರೀ ಪಿಲಿಕಲ ಅವರು ಸವಣಾಲು ಗ್ರಾಮದ ಪಿಲಿಕಲ ಮಹಾಬಲ ಮಲೆಕುಡಿಯರ ಮಗಳಾಗಿದ್ದಾರೆ. ಅವರಿಂದ ಉತ್ತಮ ಸೇವೆಯು ಜನತೆಗೆ ಲಭ್ಯವಾಗಲಿ ಮತ್ತು ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ಏರಲಿ ಸಮುದಾಯದ ಜನತೆ ಎಂದು ಶುಭಕೋರಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *