ಪ್ರಾಂಶುಪಾಲರ ಕಪಾಳಕ್ಕೆ ಹೊಡೆದ ಜೆಡಿಎಸ್ ಶಾಸಕ

ಮಂಡ್ಯ : ಕಾಲೇಜು ಪ್ರಾಂಶುಪಾಲರ ಕಪಾಳಕ್ಕೆ ಮಂಡ್ಯ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಹೊಡೆದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯದ ಐಟಿಐ ಕಾಲೇಜಿನ ಪ್ರಿನ್ಸಿಪಾಲ್‌ ನಾಗನಂದ್‌’ಗೆ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಲ್ಲಿ ಹೊಡೆದಿದ್ದಾರೆ. ಶಾಸಕ ವರ್ತನೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಸಹದ್ಯೋಗಿಗಳ ಸಮ್ಮುಖದಲ್ಲೇ ಹೊಡೆದ ವಿಡಿಯೋ ವೈರಲ್ ಆಗಿದೆ.

ಸೋಮವಾರದಂದು ಐಟಿಐ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮೂಲಭೂತ ಸೌಕರ್ಯ ಸರಿಯಿಲ್ಲ ಎಂಬ ಕಾರಣಕ್ಕೆ ಜೆಡಿಎಸ್‌ ಶಾಸಕ ಶ್ರೀನಿವಾಸ್‌ ಅವರು ಕಾಲೇಜಿನ ಪ್ರಿನ್ಸಿಪಾಲ್‌ ನಾಗಾನಂದ್‌ ಮೇಲೆ ಎಲ್ಲರ ಎದುರೇ ಐದಾರು ಬಾರಿ ಕಪಾಳಕ್ಕೆ ಬಾರಿಸಲು ಯತ್ನಿಸಿದರಲ್ಲದೇ, 2 ಬಾರಿ ಹೊಡೆದಿದು ಹಲ್ಲೆಗೆ ಯತ್ನ ನಡೆಸಿದ್ದಾರೆ. ಶಾಸಕರ ವರ್ತನೆಗೆ ಹೆದರಿದ ಪ್ರಾಂಶುಪಾಲರು ‘ಇರ್ಲಿ.. ಇರ್ಲಿ.. ಸರ್..’ ಎನ್ನುತ್ತಾ ಸುಮ್ಮನೆ ನಿಲ್ಲುತ್ತಾರೆ. ಸಿಬ್ಬಂದಿ ಕೂಡ ಬಿಡಿಸುವ ಪ್ರಯತ್ನ ಮಾಡುವುದಿಲ್ಲ.

ಇದನ್ನೂ ಓದಿ : ಪ್ರೀತಿ ಹೆಸರಲ್ಲಿ ವಂಚನೆ – ಶಾಸಕನ ವಿರುದ್ಧ ದೂರು ದಾಖಲು

ಶಾಸಕರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಶಾಸಕರು ಆ ಕಾಲೇಜಿಗೆ ಬೇಕಾದ ಅಭಿವೃದ್ಧಿಗಳತ್ತ ಗಮನ ಹರಿಸಬೇಕು. ಅದು ಬಿಟ್ಟು ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ್ದು ಸರಿಯಾದ ಕ್ರಮವಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದರೆ. ಈ ಕುರಿತು ಪ್ರಿನ್ಸಿಪಾಲ್‌ ನಾಗಾನಂದ್‌ ಪ್ರತಿಕ್ರಿಯೆ ನೀಡಿದ್ದು,  ತಪ್ಪು ಮಾಡದೇ ಹೊಡೆಸಿಕೊಂಡೆ. ಯಾಕಾದ್ರೂ ಈ ಕೆಲಸಕ್ಕೆ ಸೇರಿಕೊಂಡೆ, ಬೇಸರವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ನಮ್ಮ ವಾಟ್ಸಪ್ ಗ್ರುಪ್ ಗೆ ಸೇರಲು ಲಿಂಕ್ ಬಳಸಿ

Donate Janashakthi Media

One thought on “ಪ್ರಾಂಶುಪಾಲರ ಕಪಾಳಕ್ಕೆ ಹೊಡೆದ ಜೆಡಿಎಸ್ ಶಾಸಕ

  1. ರೌಡಿ ಮತ್ತು ಗುಂಡ ಶಾಸಕರನ್ನು ಆಯ್ಕೆ ಮಾಡಿದ ಮಂಡ್ಯ ಜಿಲ್ಲೆಯ ಮತದಾರರಿಗೆ ಜಯವಾಗಲಿ

Leave a Reply

Your email address will not be published. Required fields are marked *